Himachal Rain: ಹಿಮಾಚಲದಲ್ಲಿ ಮಳೆ ಅನಾಹುತ, ಈವರೆಗೆ 88 ಜನರು ಸಾವು!
ಮನಾಲಿ ಜುಲೈ 13: ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಅನಾಹುತ ಸೃಷ್ಟಿಸುತ್ತಿದೆ. ಮನಾಲಿ, ಮಂಡಿ, ಕಿನ್ನೌರ್ ಸೇರಿದಂತೆ ಅನೇಕ ಗುಡ್ಡಗಾಡು ಜಿಲ್ಲೆಗಳಲ್ಲಿ ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ರಸ್ತೆಗಳು, ಸೇತುವೆಗಳು ಮತ್ತು ಮನೆಗಳಿಗೆ ವ್ಯಾಪಕ ಹಾನಿಯಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ 88 ಮಂದಿ ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದ ವಿನಾಶದ ಬಗ್ಗೆ ರಾಜ್ಯ ಸರ್ಕಾರ ಮಳೆಯಿಂದಾಗಿ ಇದುವರೆಗೆ 88 ಜನರು ಸಾವನ್ನಪ್ಪಿದ್ದಾರೆ, 16 ಮಂದಿ ನಾಪತ್ತೆಯಾಗಿದ್ದಾರೆ ಮತ್ತು 100 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ರಾಜ್ಯಾದ್ಯಂತ 492 ಪ್ರಾಣಿಗಳು ಸಾವನ್ನಪ್ಪಿವೆ.
#WATCH | NDRF's Joint Rescue Ops saved 28 stranded shepherds/trekkers from Kinnaur, Himachal Pradesh's Kara area. Due to rising water levels, 11 people were trapped 15 kilometres from Kafnu village. On July 10th, the NDRF team, along with ITBP and Home Guard personnel, embarked… pic.twitter.com/e8Ns5CNQ9A
— ANI (@ANI) July 12, 2023
28 ಜನರ ರಕ್ಷಣೆ
ಮತ್ತೊಂದೆಡೆ ಎನ್ಡಿಆರ್ಎಫ್ನ ಜಂಟಿ ರಕ್ಷಣಾ ಕಾರ್ಯಾಚರಣೆಯಿಂದ ಕಿನ್ನೌರ್ನ ಕಾರಾ ಪ್ರದೇಶದಲ್ಲಿ ಸಿಕ್ಕಿಬಿದ್ದ 28 ಕುರುಬರು / ಚಾರಣಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನೀರಿನ ಮಟ್ಟ ಏರಿಕೆಯಿಂದಾಗಿ ಕಫ್ನು ಗ್ರಾಮದಿಂದ 15 ಕಿ.ಮೀ ದೂರದಲ್ಲಿ 11 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಎನ್ಡಿಆರ್ಎಫ್ ತಿಳಿಸಿದೆ. ಜುಲೈ 12 ರಂದು, ಎನ್ಡಿಆರ್ಎಫ್ ಇನ್ಸ್ಪೆಕ್ಟರ್ ಪ್ರೇಮ್ ಕುಮಾರ್ ನೇಗಿ ನೇತೃತ್ವದ ಜಂಟಿ ರಕ್ಷಣಾ ತಂಡ ಎಲ್ಲಾ 28 ಜನರನ್ನು ಯಶಸ್ವಿಯಾಗಿ ರಕ್ಷಿಸಿತು.

ಇದೇ ಸಮಯದಲ್ಲಿ ಹಿಮಾಚಲ ಪ್ರದೇಶದ ಹಂಗಾಮಿ ಡಿಜಿಪಿ, ಸತ್ವಂತ್ ಅತ್ವಾಲ್ ತ್ರಿವೇದಿ ಅವರು ಸ್ಥಳೀಯ ಜನರು ಮತ್ತು ಪ್ರವಾಸಿಗರನ್ನು ಉಳಿಸಲು ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳ ಬಗ್ಗೆ ವಿವರಿಸಿದರು.
ಚಂಡೀಗಢಕ್ಕೆ ತೆರಳುವ ಮಾರ್ಗದಲ್ಲಿ 5,500ಕ್ಕೂ ಹೆಚ್ಚು ವಾಹನಗಳು ಮಂಡಿ ದಾಟಿವೆ ಎಂದು ಅವರು ಮಾಹಿತಿ ನೀಡಿದರು. ಹೊರಭಾಗದಲ್ಲಿ ಸಿಲುಕಿಕೊಂಡಿದ್ದ ವಾಹನಗಳನ್ನೂ ಹೊರ ತೆಗೆಯಲಾಗಿದೆ. ಕಸೋಲ್ನಿಂದ ಸುಮಾರು 2000 ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸಿಸ್ಸುನಲ್ಲಿ ಸಿಲುಕಿರುವ ಪ್ರವಾಸಿಗರನ್ನು ಟಾಲಿಂಗ್ ಗ್ರಾಮದ ಮೂಲಕ ಸ್ಥಳಾಂತರಿಸಲಾಗಿದೆ. 150 ಕ್ಕೂ ಹೆಚ್ಚು ವಾಹನಗಳು ಅಟಲ್ ಸುರಂಗವನ್ನು ದಾಟಿವೆ. ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ದೊಡ್ಡ ರಕ್ಷಣಾ ತಂಡ ಚಂದ್ರತಾಲ್ಗೆ ತೆರಳಿದೆ ಎಂದು ಹೇಳಿದರು.
ಕುಲುವಿನಿಂದ ಇದುವರೆಗೆ 13 ಮೃತ ದೇಹಗಳು ಹೊರತೆಗೆಯಲಾಗಿದೆ:-
ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿದ ಸತ್ವಂತ್ ಅತ್ವಾಲ್ ತ್ರಿವೇದಿ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಕುಲುವಿನಿಂದ ಇದುವರೆಗೆ 13 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತಿಳಿಸಿದರು. ಸಿಲುಕಿರುವ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ರಸ್ತೆಗಳ ಪುನಶ್ಚೇತನ ಕಾಮಗಾರಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಪ್ರವಾಸಿಗರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ನಿಯಂತ್ರಣ ಕೊಠಡಿಗಳು ತೆರೆದಿದ್ದು, ಇದರಿಂದ ಜನ ನಮ್ಮನ್ನು ಸಂಪರ್ಕಿಸಲಾಗುತ್ತಿದೆ. ಇಲ್ಲಿಯವರೆಗೆ ನಾವು 1500 ಕುಟುಂಬಗಳನ್ನು ಸಂಪರ್ಕಿಸಿದ್ದೇವೆ ಎಂದರು.

ಮನಾಲಿ, ಮಣಿಕರ್ಣ ಮತ್ತು ಬಂಜಾರ್ ಕಣಿವೆಯಲ್ಲಿ 17000 ಪ್ರವಾಸಿಗರು ಇನ್ನೂ ಸಿಲುಕಿಕೊಂಡಿದ್ದಾರೆ. ರಾಜ್ಯದಲ್ಲಿ ಇದುವರೆಗೆ 1320 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಹೇಳಲಾಗಿದೆ. ಹಂತಹಂತವಾಗಿ ತೆರೆಯುವ ಕಾರ್ಯ ಆರಂಭವಾಗಿದೆ.
ಕುಸಿದ ಬೆಟ್ಟ ಮಹಿಳೆ ಸಾವು
ಸಿರ್ಮೌರ್ನ ಸಂಗ್ರಹ ಉಪವಿಭಾಗದ ಡುಂಗಿ ಗ್ರಾಮದಲ್ಲಿ ನಿರ್ಮಲಾ ದೇವಿ ಅಲಿಯಾಸ್ ಗುಡ್ಡಿ ಎಂಬುವರು ತಮ್ಮ ಮನೆಯ ಸಮೀಪ ಶೌಚಾಲಯದ ಹೊರಗಿನ ನಲ್ಲಿಯಿಂದ ಕೈ ತೊಳೆಯುತ್ತಿದ್ದರು. ಈ ವೇಳೆ ಬೆಟ್ಟದಿಂದ ಬಿದ್ದ ಅವಶೇಷಗಳಿಮದಾಗಿ ಅವರು ಸಾವನ್ನಪ್ಪಿದ್ದಾರೆ. ಶಿಮ್ಲಾದ ರೋಹ್ರು ಎಂಬಲ್ಲಿ ಕುಸಿದ ಮನೆಯೊಂದರ ಅವಶೇಷಗಳಡಿ ಸಮಾಧಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮಂಗಳವಾರ ಒಂಬತ್ತು ಮನೆಗಳು ಕುಸಿದಿದ್ದು, 164 ಮನೆಗಳು ಮತ್ತು 105 ಗೋಶಾಲೆಗಳಿಗೆ ಹಾನಿಯಾಗಿದೆ.
ನಾಲ್ಕು ರಾಷ್ಟ್ರೀಯ ಹೆದ್ದಾರಿ ಬಂದ್
ನಾಲ್ಕು ರಾಷ್ಟ್ರೀಯ ಹೆದ್ದಾರಿಗಳಾದ ಮನಾಲಿ-ಲೇಹ್, ಮನಾಲಿ-ಚಂಡೀಗಢ, ಅನಿ-ಕುಲ್ಲು, ಚಂಬಾ-ಭರ್ಮೂರ್ ಮತ್ತು 1320 ರ ಸಮೀಪವಿರುವ ರಸ್ತೆಗಳು ಇನ್ನೂ ರಾಜ್ಯದಲ್ಲಿ ಮುಚ್ಚಲ್ಪಟ್ಟಿವೆ. 4000 ಕುಡಿಯುವ ನೀರಿನ ಯೋಜನೆಗಳೂ ಮುಚ್ಚಿವೆ. ಹಿಮಾಚಲ ಸಾರಿಗೆ ಸಂಸ್ಥೆಯ 1284 ಬಸ್ ಮಾರ್ಗಗಳು ಸ್ಥಗಿತಗೊಂಡಿವೆ. 396ಕ್ಕೂ ಹೆಚ್ಚು ಬಸ್ಗಳು ಸಿಲುಕಿಕೊಂಡಿವೆ. ಚಂಬಾದ ಭರ್ಮೂರ್ನ ಧನ್ಚೌ ಬಳಿ ಮೋರಿ ದಾಟುತ್ತಿದ್ದಾಗ, ಹರ್ಬನ್ಸ್ ಸಿಂಗ್ ಗ್ರಾಮದ ಸುಪ್ಪಾ ಗ್ರಾಮ ಪಂಚಾಯಿತಿ ಪೂಲನ್ನ ಚರಂಡಿಗೆ ವ್ಯಕ್ತಿಯೊಬ್ಬರು ನಿಯಂತ್ರಣವಿಲ್ಲದೆ ಬಿದ್ದಿದ್ದಾರೆ. ಆತನ ಯಾವುದೇ ಕುರುಹು ಪತ್ತೆಯಾಗಿಲ್ಲ.












Click it and Unblock the Notifications