ಅಮೃತಸರ ರೈಲು ದುರಂತ: ಸೆಲ್ಫಿ ಕ್ಲಿಕ್ಕಿಸುತ್ತಿದ್ದವರ ಮೇಲೆ ಹರಿದ ರೈಲು!
Recommended Video
ಅಮೃತಸರ, ಅಕ್ಟೋಬರ್ 20: ರಾವಣನ ಪ್ರತಿಕೃತಿಯನ್ನು ದಹಿಸಿ, ದಸರಾವನ್ನು ಸಂಭ್ರಮಿಸುತ್ತಿದ್ದ ಜನರ ಮೇಲೆ ಯಮರಾಯನಂತೆ ರೈಲೊಂದು ಎರಗಿತ್ತು... ನೋಡುನೋಡುತ್ತಿದ್ದಂತೆಯೇ ದಸರಾ ಸಂಭ್ರಮಕ್ಕೆ ಘೋರ ದುರಂತದ ಸೂತಕದ ಛಾಯೆ ಆವರಿಸಿತ್ತು.
ದಶಮಿ ದಿನ ದುರಂತ: ರೈಲು ಅಪಘಾತದ ಸಾವಿನ ಸಂಖ್ಯೆ ನೂರಾರು?
#Visuals of the site of #AmritsarTrainAccident where the DMU train ran over people who were watching Dussehra celebrations in Choura Bazar yesterday. pic.twitter.com/Ox6FojblXn
— ANI (@ANI) October 20, 2018
61 ಜನ ಮೃತರಾದರೆ, 70ಕ್ಕೂ ಹೆಚ್ಚು ಜನ ಗಾಯಗೊಂಡರು. ರೈಲು ಬರುತ್ತಿದ್ದ ಸಂದರ್ಭದಲ್ಲಿ ಹಲವರು ಹಳಿಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಪಟಾಕಿ ಸದ್ದಿನ ನಡುವೆ ರೈಲು ಬಂದಿದ್ದೇ ತಿಳಿಯದೆ 50 ಕ್ಕೂ ಹೆಚ್ಚು ಜನ ಮೃತರಾದರು. ಈ ಘೋರ ದುರಂತದ ವಿಡಿಯೋ ಸಹ ಸೆರೆಯಾಗಿದೆ.
ಅಮೃತಸರ ನಿಲ್ದಾಣದ ಬಳಿಯ ಮನಾವಾಲಾ ಮತ್ತು ಫೆರೋಜ್ಪುರ ನಿಲ್ದಾಣದ ನಡುವಲ್ಲಿ ನಡೆದ ಈ ಘಟನೆ ಇತ್ತೀಚಿನ ದಿನಗಳಲ್ಲಿ ನಡೆದ ಮಹಾದುರಂತ ಎನ್ನಿಸಿದೆ.
ರೈಲ್ವೇ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದರು.