ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ ಗಾಯತ್ರಿಗೊಂದು ಸಲಾಂ
ಯಾವುದೋ ಗ್ರಾಮದ ಹೆಣ್ಣುಮಗಳೊಬ್ಬಳ ಹೆಸರನ್ನು ಭಾರತ ದೇಶದ ಪ್ರಧಾನಿ ತಮ್ಮ ರೇಡಿಯೋ ಕಾರ್ಯಕ್ರಮದಲ್ಲಿ ಹೇಳ್ತಾರೆ ಎಂಬ ಸಂಗತಿ ಎಂಥ ಬೆರಗಿನ ವಿಚಾರ ಅಲ್ಲವಾ? ಉತ್ತರಾಖಂಡದ ಗಾಯತ್ರಿ ಈಗ ದಿಗ್ಭ್ರಮೆಯಲ್ಲಿರಬಹುದು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾವ ಮಾಡಿದ ಹುಡುಗಿ ಉತ್ತರಾಖಂಡದ ಗಾಯತ್ರಿಯ ಉದ್ದೇಶ ಹಾಗೂ ಆಕೆಯ ನೇರವಂತಿಕೆ ಮೆಚ್ಚಲೇ ಬೇಕು. ಕಸದ ಬಗ್ಗೆ ಜನರೂ ಅರಿವು ಮೂಡಿಸಿಕೊಳ್ಳಬೇಕು ಎಂಬ ಆಕೆ ಮಾತಿಗೊಂದು ಸಲಾಂ.
ಇಂಥ ಸಂಗತಿಗಳು ದೇಶದ ಜನರಲ್ಲಿ ಒಂದು ಆತ್ಮವಿಶ್ವಾಸ ಮೂಡಿಸುತ್ತದೆ. ನಮ್ಮ ಧ್ವನಿ ಕೇಳಬೇಕಾದವರು ಕೇಳುತ್ತಾರೆ ಎಂಬುದೊಂದು ನಂಬಿಕೆ ಮೂಡುತ್ತದೆ. ಆ ಹುಡುಗಿಯ ಫೋಟೋ ಇಲ್ಲಿದೆ.
ಇನ್ನು ಬಿಎಸ್ ಎಫ್ ಗೆ ಕಮ್ಯಾಂಡೆಂಟ್ ಆದ ಮೊದಲ ಮಹಿಳೆ ತನುಶ್ರೀ ಪರ್ತೀಕ್ ರನ್ನು ರಾಜಸ್ತಾನದ ಬಿಕನೇರ್ ನಲ್ಲಿ ಸ್ವಾಗತಿಸಿದ ಬಗೆ ನೋಡಿದರೆ ಎಂಥವರಿಗೂ ಹೆಮ್ಮೆ ಮೂಡುತ್ತದೆ. ಭಾನುವಾರವಷ್ಟೇ ಹದಿಮೂರು ವರ್ಷದ ಬಾಲಕಿ ಮೇಲೆ ಬಿಕನೇರ್ ನ ಶಿಕ್ಷಕರು ನಿರಂತರ ಅತ್ಯಾಚಾರ ನಡೆಸಿದ್ದ ಸುದ್ದಿ ಬೆಳಕಿಗೆ ಬಂದಿತ್ತು. ಆದರೆ ಬಿಕನೇರ್ ಈಗ ಒಳ್ಳೆ ಕಾರಣಕ್ಕೆ ಸುದ್ದಿಯಾಗಿದೆ.[ವಿಶೇಷ ಲೇಖನ: ರಂಗಭೂಮಿ ಹಾಗೂ ಅಂತರ್ಜಾಲ ಬಳಕೆ]
ಉತ್ತರಪ್ರದೇಶದ ಮುಖ್ಯಮಂತ್ರಿ ಸ್ವಾಮಿ ಆದಿತ್ಯನಾಥ್ ಗೆ ಗೋರಖ್ ನಾಥ್ ಮಂದಿರದಲ್ಲಿ ಸನ್ಮಾನ ಮಾಡಲಾಗಿದೆ. ಆ ನಂತರ ಅಮೆರಿಕದಲ್ಲಿ ಹೋಲಿ ಸಂಭ್ರಮ, ಹಾಂಕಾಂಗ್ ನಲ್ಲಿ ಆಕಾಶದೆತ್ತರದ ಕಟ್ಟಡಗಳಿಗೆ ಮಂಜು ಮುಸುಕಿದ ಫೋಟೋಗಳು ನಿಮ್ಮೆದುರು ಇವೆ. ಅದರಲ್ಲೂ ಹೆಣ್ಣುಮಕ್ಕಳ ಸಾಧನೆಯೇ ಹೆಚ್ಚಾಗಿರುವುದು ಖುಷಿಯ ಸಂಗತಿ.

ಸಂಭ್ರಮದ ಸ್ವಾಗತ
ಬಿಎಸ್ ಎಫ್ ಕಮ್ಯಾಂಡೆಂಟ್ ಆಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾದ ತನುಶ್ರೀ ಪರ್ತೀಕ್ ಅವರನ್ನು ಭಾನುವಾರ ರಾಜಸ್ತಾನದ ಬಿಕನೇರ್ ನಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಹೋಲಿಯ ಖುಷಿ
ಬೌಲಿಂಗ್ ಗ್ರೀನ್ ನ ಕರುಣಾ ರೆಡ್ಡಿ ಅಮೆರಿಕಾದಲ್ಲಿ ಹೋಲಿ ಸಂಭ್ರಮ ಆಚರಿಸುವಾಗ ಗೆಳತಿಯ ತಲೆಗೂದಲಿಗೆ ಬಣ್ಣದ ಪುಡಿ ಹಾಕುವ ಜೋಶ್ ನಲ್ಲಿ ಕಂಡುಬಂದಿದ್ದು ಹೀಗೆ.

ಮಂಜು ತಬ್ಬಿದ ಕಟ್ಟಡ
ಹಾಂಕಾಂಗ್ ನಲ್ಲಿ ಆಕಾಶ ಮುತ್ತಿಡುವಂಥ ಕಟ್ಟಡಗಳನ್ನು ಬಾಚಿ ತಬ್ಬಿಕೊಂಡಿದ್ದ ಮಂಜು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ. ಮಂಜಿನ ಕಾರಣಕ್ಕೆ ವಿಮಾನ ಯಾನ, ಸಮುದ್ರ ಯಾನದ ಮೇಲೂ ಆಗುತ್ತಿದೆ.

ರಕ್ತ ಬರುವ ಹಾಗೆ ಹೊಡೆದಾಟ
ಉತ್ತರಪ್ರದೇಶದ ಫತೇಘರ್ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಅಧಿಕಾರಿಗಳೊಂದಿಗೆ ಭಾನುವಾರ ಹೊಡೆದಾಟ ನಡೆಸಿದರು. ಈ ವೇಳೆ ಗಾಯಗೊಂಡ ಕೈದಿಯೊಬ್ಬನನ್ನು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಕಂಡುಬಂದಿದ್ದು ಹೀಗೆ.

ಮನ್ ಕೀ ಬಾತ್ ಹೆಣ್ಣುಮಗಳು
ಉತ್ತರಾಖಂಡದ ಡೆಹ್ರಾಡೂನ್ ನ ಹನ್ನೊಂದನೇ ತರಗತಿ ವಿದ್ಯಾರ್ಥಿ ಗಾಯತ್ರಿ (ಕುಳಿತಿರುವವಳು) ಕಸದ ಸಮಸ್ಯೆಯಿಂದ ಆಗುವ ತೊಮ್ದರೆ ಬಗ್ಗೆ ಪ್ರಧಾನಿ ಗಮನ ಸೆಳೆದಿದ್ದಳು. ಈ ಹುಡುಗಿಯ ಕಾಳಜಿ ಬಗ್ಗೆ ಪ್ರಧಾನಿ ಮೋದಿ ಭಾನುವಾರ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಅದಕ್ಕಾಗಿ ಗಾಯತ್ರಿ ಧನ್ಯವಾದ ತಿಳಿಸಿದ್ದಾಳೆ.

ಆದಿತ್ಯ ನಾಥ್ ಗೆ ಗೋರಖ್ ನಾಥ್ ಮಂದಿರದಲ್ಲಿ ಸನ್ಮಾನ
ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯ ನಾಥ್ ರನ್ನು ಗೋರಖ್ ನಾಥ್ ಮಂದಿರದಲ್ಲಿ ಭಾನುವಾರ ಸನ್ಮಾನಿಸಲಾಯಿತು.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications