ಪಿಎಫ್ ಹಣ ವಿತ್ ಡ್ರಾ: ಮೇ ತಿಂಗಳಿನಿಂದ ನೂತನ ಪದ್ದತಿಗೆ ಸಕಲ ಸಿದ್ದತೆ
ಪಿಎಫ್ ಚಂದಾದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ಭವಿಷ್ಯನಿಧಿ ಹಣವನ್ನು ಹಿಂಪಡೆಯುವ ಪದ್ದತಿಯನ್ನು ಆನ್ಲೈನ್ ಮೂಲಕ ಜಾರಿಗೆ ತರಲು ಪೂರ್ವ ಸಿದ್ದತೆ ನಡೆಸುತ್ತಿದೆ.
ನವದೆಹಲಿ, ಫೆ 20: ಕೆಲವೇ ವರ್ಷಗಳ ಹಿಂದಿನ ಕಥೆ, ಕೆಲಸಕ್ಕೆ ರಾಜೀನಾಮೆ ನೀಡಿದ ಮೂವತ್ತು ದಿನಗಳ ನಂತರ, ಪಿಎಫ್ ವಿತ್ ಡ್ರಾ ಅರ್ಜಿ ತುಂಬಿಸಿ ಪಿಎಫ್ ಕಚೇರಿಗೆ ಕಳುಹಿಸಿದರೆ ಅರವತ್ತು ದಿನದ ನಂತರ ಪಿಎಫ್ ಹಣ ವಾಪಾಸಾಗುತ್ತಿತ್ತು.
ಹಂತಹಂತವಾಗಿ ತನ್ನ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡ ಭವಿಷ್ಯನಿಧಿ ಕಚೇರಿ, ಕಾಲಕ್ಕೆ ತಕ್ಕಂತೆ ಡಿಜಿಟಲೀಕರಣಗೊಂಡು ಉತ್ತಮ ಸೇವೆಯನ್ನು ನೀಡುವಲ್ಲಿ ಒಂದು ಮಟ್ಟಿನ ಯಶಸ್ಸನ್ನು ಕಾಣುತ್ತಿದೆ. (ಪಿಎಫ್ ಬಡ್ಡಿ ಇಳಿಕೆಗೆ ಸಮ್ಮತಿ)
ಪಿಎಫ್ ಚಂದಾದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಕಾರ್ಮಿಕ ಸಚಿವಾಲಯ, ಭವಿಷ್ಯನಿಧಿ ಹಣವನ್ನು ಹಿಂಪಡೆಯುವ ಪದ್ದತಿಯನ್ನು ಆನ್ಲೈನ್ ಮೂಲಕ ಜಾರಿಗೆ ತರಲು ಪೂರ್ವ ಸಿದ್ದತೆ ನಡೆಸುತ್ತಿದೆ.

ಪಿಎಫ್ ಸಚಿವಾಲಯದ ಈ ಮಹತ್ವಾಕಾಂಕ್ಷೆಯ ಕೆಲಸ ಎಲ್ಲಾ ಅಂದುಕೊಂಡಂತಾದರೆ ಇದೇ ಬರುವ (2017) ಮೇ ತಿಂಗಳಿನಿಂದ ನೂತನ ಪದ್ದತಿ ಜಾರಿಗೆ ಬರಲಿದೆ. ಜೊತೆಗೆ, ಭವಿಷ್ಯನಿಧಿ ಪಿಂಚಣಿ (ಇಪಿಎಸ್) ಹಣವನ್ನೂ ಆನ್ಲೈನ್ ಮೂಲಕವೇ ನಿಗದಿ ಪಡಿಸಬಹುದಾಗಿದೆ.
ಆ ಮೂಲಕ ಪ್ರಧಾನಿ ಮೋದಿಯವರ ಕನಸಿನ ಡಿಜಟಲೀಕರಣದ ಕೂಸಿಗೆ ದೇಶದ ಬಹುಸಂಖ್ಯಾತ ಕಾರ್ಮಿಕ ವರ್ಗದ ಉಳಿತಾಯದ ದಾರಿಯಾಗಿರುವ ಭವಿಷ್ಯನಿಧಿ ಹಣದ ವ್ಯವಹಾರ ಮತ್ತಷ್ಟು ಬಲ ನೀಡಲಿದೆ.
ಸರಿಸುಮಾರು ಒಂದು ಕೋಟಿಗಿಂತಲೂ ಹೆಚ್ಚು ವಿತ್ ಡ್ರಾ ಅರ್ಜಿಯನ್ನು ಭವಿಷ್ಯನಿಧಿ ಕಾರ್ಯಾಲಯ ಕೈಯಮೂಲಕ (manual) ವಿಲೇವಾರಿ ಮಾಡುತ್ತಿದೆ.
ಈ ಎಲ್ಲಾ ತೊಂದರೆ, ಲೆಕ್ಕಾಚಾರದಲ್ಲಾಗುವ ತಪ್ಪುಗಳಿಗೆ ಪೂರ್ಣ ವಿರಾಮ ನೀಡಲು ಪಿಎಫ್ ಕಾರ್ಯಾಲಯ, ಹೊಸ ತಂತ್ರಜ್ಞಾನದ ಮೂಲಕ ನಡೆಸುತ್ತಿರುವ Online settlement ಸಿದ್ದತೆ ಬಹುತೇಕ ಪೂರ್ಣಗೊಂಡಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications