ತನಿಖೆ ಇಲ್ಲದೆ ಉದ್ಯಮಿಗಳ ವಿರುದ್ಧ ಎಫ್ಐಆರ್ ಇಲ್ಲ: ಯುಪಿ ಪೊಲೀಸರಿಗೆ ಯೋಗಿ ಸೂಚನೆ
ಲಕ್ನೋ, ಆಗಸ್ಟ್ 19: ಇನ್ನು ಮುಂದೆ ಉತ್ತರ ಪ್ರದೇಶದ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳಿಗೆ ಕಾನೂನು ಕ್ರಮದಿಂದ ಹೆಚ್ಚಿನ ರಕ್ಷಣೆ ಕೊಡಲು ನಿರ್ಧರಿಸಿದ್ದು, ಸೂಕ್ತ ತನಿಖೆ ನಡೆಸದೆ ವ್ಯಾಪಾರಿ ವರ್ಗಕ್ಕೆ ಸೇರಿದವರ ವಿರುದ್ಧ ಎಫ್ಐಆರ್ ದಾಖಲಿಸುವಂತಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಆದರೆ ಈ ಕ್ರಮ ಟೀಕೆಗೆ ಒಳಗಾಗಿದ್ದು, ಉದ್ಯಮಿಗಳು ಏನೇ ತಪ್ಪು ಮಾಡಿದರೂ ಸಲುಭವಾಗಿ ಈಗ ತಪ್ಪಿಸಿಕೊಳ್ಳಲು ಯೋಗಿ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯದಲ್ಲಿ ಉದ್ಯಮಿಗಳು ಸೇರಿದಂತೆ ವ್ಯಾಪಾರಿ ಸಮುದಾಯದ ಮೇಲಿನ ಕಿರುಕುಳ ಮತ್ತು ಅನಗತ್ಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಅವರ ವಿರುದ್ಧ ದಾಖಲಾಗಿರುವ ಆಧಾರರಹಿತ ಎಫ್ಐಆರ್ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ.

ಸುತ್ತೋಲೆಯ ಪ್ರಕಾರ, ವರ್ತಕರು ಮತ್ತು ಉದ್ಯಮಿಗಳ ವಿರುದ್ಧ ಯಾವುದೇ ವ್ಯಕ್ತಿಯ ದೂರಿನ ಮೇಲೆ ಪೊಲೀಸರು ನೇರವಾಗಿ ಪ್ರಥಮ ಮಾಹಿತಿ ವರದಿಯನ್ನು ನೇರವಾಗಿ ದಾಖಲಿಸಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಕ್ಕೆ ಅನುಗುಣವಾಗಿ ನಿರ್ಧಾರವೂ ಕೈಗೊಳ್ಳಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಯೋಗಿ ಸರ್ಕಾರವು ವ್ಯವಹಾರವನ್ನು ತಡೆರಹಿತವಾಗಿ ಮಾಡಲು ಒತ್ತು ನೀಡುವ ಸಲುವಾಗಿ ಅಭಿವೃದ್ಧಿ ಯೋಜನೆಗಳ ವಿವಾಹ ಮುಕ್ತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ತನ್ನ ಬದ್ಧತೆಯನ್ನು ಮತ್ತೆ ಮತ್ತೆ ಪುನರುಚ್ಚರಿಸಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ ಹೂಡಿಕೆ, ಉದ್ಯಮ ಮತ್ತು ವ್ಯವಹಾರವನ್ನು ಉತ್ತೇಜಿಸಲು ಯೋಗಿ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರವು ಹೂಡಿಕೆಯ ಸಾಮರ್ಥ್ಯವನ್ನು ಹೊಂದಿರುವ ವಲಯಗಳಲ್ಲಿ 25 ಹೊಸ ನೀತಿಗಳನ್ನು ತಂದಿದ್ದು, ಇದರಿಂದ ಹೂಡಿಕೆದಾರರು ಸುಗಮವಾಗಿ ಮುಂದೆ ಸಾಗುತ್ತಾರೆ. ಇದರ ಪರಿಣಾಮವಾಗಿ, ವಿಶ್ವದಾದ್ಯಂತದ ಕೈಗಾರಿಕೋದ್ಯಮಿಗಳು ಉತ್ತರ ಪ್ರದೇಶದಲ್ಲಿ 36 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications