ಕೇರಳದ ಮಲ್ಲಪ್ಪುರಂನಲ್ಲಿ ಸ್ಫೋಟ, ಎನ್ ಐಎನಿಂದ ತನಿಖೆ
ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೈಗೆತ್ತಿಕೊಂಡಿದೆ
ತಿರುವನಂತಪುರಂ, ನವೆಂಬರ್ 02: ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೈಗೆತ್ತಿಕೊಂಡಿದೆ.
ಕೆಲ ತಿಂಗಳುಗಳ ಹಿಂದೆ ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದ ಕೋರ್ಟ್ ಆವರಣಗಳಲ್ಲಿ ಇದೇ ರೀತಿ ಸ್ಫೋಟಗಳು ಸಂಭವಿಸಿತ್ತು. ಮಲ್ಲಪ್ಪುರಂನ ಕಲೆಕ್ಟರೇಟ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಶೆವರ್ಲೆ ಕಾರಿನಲ್ಲಿ ಟಿಫಿನ ಬಾಕ್ಸ್ ಬಾಂಬ್ ಇಟ್ಟು ಮಂಗಳವಾರ ಸ್ಫೋಟಿಸಲಾಗಿತ್ತು.. ಈ ಸ್ಫೋಟದಿಂದ ಮುರ್ನಾಲ್ಕು ಕಾರುಗಳು ಜಖಂಗೊಂಡಿದ್ದವು. [ಕೇರಳ: ಮಲಪ್ಪುರಂ ಕಲೆಕ್ಟರೇಟ್ ಕಚೇರಿ ಬಳಿ ಸ್ಫೋಟ!]

ಕಳೆದ ಜೂನ್ ತಿಂಗಳಿನಲ್ಲಿ ಕೊಲ್ಲಂ ಕಲೆಕ್ಟರೇಟ್ ಕಚೇರಿ ಆವರಣದಲ್ಲೂ ಇಂಥದ್ದೇ ಸ್ಫೋಟ ಸಂಭವಿಸಿತ್ತು. ಶೆವರ್ಲೆ ಕಾರಿನ ಮಾಲೀಕ ಜಿಲ್ಲಾ ಮೆಡಿಕಲ್ ಅಧಿಕಾರಿ ರೆಜಿ ಕುಳಿಯೆಲ್ಲಿಲ್ ಎಂದು ಗುರುತಿಸಲಾಗಿದೆ.
ಕಾರಿನ ಬಳಿ ಸಿಕ್ಕ ಪತ್ರದಿಂದ ಇದು Base Movement ಸಂಘಟನೆಯ ಕೃತ್ಯ ಎಂದು ಶಂಕಿಸಲಾಗಿದೆ. ಪತ್ರದಲ್ಲಿ ಭಾರತದ ಭೂಪಟ, ಮೃತ ಉಗ್ರ ಒಸಾಮಾ ಬಿನ್ ಲಾಡೆನ್ ಚಿತ್ರವಿದೆ. ಪತ್ರದ ಕೆಳಗೆ Base Movement ಸಹಿ ಇದೆ.
ಮೈಸೂರಿನ ಕೋರ್ಟ್ ಸ್ಫೋಟ : ಮೈಸೂರಿನ ಕೋರ್ಟ್ ಆವರಣದಲ್ಲಿದ್ದ ಶೌಚಾಲಯದಲ್ಲಿ ಇದೇ ರೀತಿ ಸ್ಫೋಟ ಸಂಭವಿಸಿತ್ತು. ಚಿತ್ತೂರು ಹಾಗೂ ಕೊಲ್ಲಂ ಕೋರ್ಟ್ ಆವರಣಗಳಲ್ಲೂ ಸ್ಫೋಟ ನಡೆದಿತ್ತು. ಚಿತ್ತೂರು ಸ್ಫೋಟದ ನಂತರ ಬೇಸ್ ಮೂವ್ ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತ್ತು.
ಆದರೆ, ಮಲ್ಲಪುರಂ ಪೊಲೀಸರ ಪ್ರಕಾರ ಇದು ಅಲ್ ಉಮ್ಮಾ ಸಂಘಟನೆಯ ಕೃತ್ಯ ಎನ್ನಲಾಗಿದೆ. ಹಲವಾರು ಸ್ಫೋಟ ಪ್ರಕರಣಗಳಲ್ಲಿ ಈ ಸಂಘಟನೆ ಗುರುತಿಸಿಕೊಂಡಿದೆ. ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಬಳಿ ಸ್ಫೋಟಕ್ಕೂ ಇದೇ ಸಂಘಟನೆ ಕಾರಣ. ಆದರೆ, ಆ ಘಟನೆ ನಂತರ ಸಂಘಟನೆಯ ಹೆಸರು ಬದಲಾಯಿಸಿಕೊಳ್ಳಲಾಗಿದ್ದು, ಅಲ್ ಉಮ್ಮಾ ಸಂಘಟನೆಯೇ ಈಗ ಬೇಸ್ ಮೂವ್ ಮೆಂಟ್ ಎಂದಾಗಿದೆ ಎಂಬ ಮಾಹಿತಿ ಸಿಕ್ಕಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications