ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ- ಫ್ರಾನ್ಸ್ ಗುಪ್ತಚರ ವರದಿ
ಪ್ಯಾರಿಸ್, ಜುಲೈ 16: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿಗೆ ಸಂಬಂಧಿಸಿದ ವಿವಾದದ ನಡುವೆಯೇ ಫ್ರಾನ್ಸ್ ನ ವರದಿಯೊಂದು ಬೋಸ್ ವಿಮಾನ ಅಪಘಾತದಲ್ಲಿ ಸತ್ತಿಲ್ಲ ಎಂದು ಹೇಳಿದೆ. ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ ಮೋರ್ ರಹಸ್ಯ ಫ್ರೆಂಚ್ ವರದಿಯನ್ನು ಉಲ್ಲೇಖಿಸಿ ಬೋಸ್ ವಿಮಾನ ಅಪಘಾತದಲ್ಲಿ ಸಾಯಲಿಲ್ಲ ಎಂದು ಹೇಳಿದ್ದಾರೆ.
"ತೈವಾನಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸುಭಾಷ್ ಚಂದ್ರ ಬೋಸ್ ನಿಧನರಾದರು ಎಂದು ದಾಖಲೆಯಲ್ಲಿ ಎಲ್ಲೂ ಹೇಳಿಲ್ಲ. ಬದಲಾಗಿ ಡಿಸೆಂಬರ್ 1947 ರ ತನಕ ಬೋಸ್ ರ ಪ್ರಸ್ತುತ ಇರುವಿಕೆಯು ತಿಳಿದಿಲ್ಲವೆಂದು ವರದಿಯಾಗಿದೆ.ಇದು ಮತ್ತೊಮ್ಮೆ 1945ರ ಆಗಸ್ಟ್ 18 ರಂದು ವಿಮಾನ ಪತನದಲ್ಲಿ ಅವರು ಅಸುನೀಗಿದ್ದಾರೆ ಎಂಬುದನ್ನು ಫ್ರಾನ್ಸ್ ಒಪ್ಪಿಕೊಂಡಿಲ್ಲ ಎಂಬುದನ್ನು ಸೂಚಿಸುತ್ತದೆ," ಎಂದು ಪ್ಯಾರಿಸಿನ 'ಇನ್ಸ್ಟಿಟ್ಯೂಟ್ ಡೆಸ್ ಹೌಟೆಸ್ ಎಟುಡೆಸ್ ಎಕನಾಮಿಕ್ಸ್ ಎಟ್ ಕಮರ್ಷಿಯಲ್ಸ್ 'ನಲ್ಲಿ ಪ್ರಧ್ಯಾಪಕರಾಗಿರುವ ಮೋರ್ ಹೇಳಿದ್ದಾರೆ.

ಒಟ್ಟಾರೆ ಫ್ರೆಂಚ್ ರಹಸ್ಯ ಸೇವೆಯ ವರದಿಯ ಸಾರಾಂಶ ಏನೆಂದರೆ,ಸಾಮಾನ್ಯವಾಗಿ ಅಂದುಕೊಂಡಿರುವಂತೆ, 'ಆಗಸ್ಟ್ 18, 1945 ರಂದು ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ'ಎಂಬುದಾಗಿದೆ ಎಂದು ಮೋರ್ ಸ್ಪಷ್ಟಪಡಿಸಿದ್ದಾರೆ.
"ಅವರು ಇಂಡೊಚೀನಾದಿಂದ ಜೀವಂತವಾಗಿ ತಪ್ಪಿಸಿಕೊಂಡಿದ್ದರು. ಆದರೆ, ಡಿಸೆಂಬರ್ 11, 1947 ರ ತನಕ ಅವರ ಇರುವಿಕೆಯು ತಿಳಿದಿಲ್ಲ ಎಂದು ರಹಸ್ಯ ದಾಖಲೆಗಳಲ್ಲಿ ವರದಿ ಮಾಡಿದ್ದಾರೆ. ಇದು ಅವರು ಎಲ್ಲೋ ಜೀವಂತವಾಗಿದ್ದಾರೆ ಮತ್ತು 1947 ರಲ್ಲಿ ಸತ್ತಿಲ್ಲ ಎಂಬುದನ್ನು ಪುಷ್ಟೀಕರಿಸುತ್ತದೆ" ಎಂದು ಮೋರ್ ಬರೆದಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications