ಸಭ್ಯತೆ,ಸ್ವಾತಂತ್ರ್ಯ, ರೈತರ ಏಳಿಗೆ 'ಖಾದಿ' ಯಲ್ಲಿದೆ: ಮೋದಿ
ನವದೆಹಲಿ, ಜ. 31: ದೇಶದ ಸಭ್ಯತೆ, ಧಾರ್ಮಿಕತೆ, ಸ್ವಾತಂತ್ರ್ಯ, ರೈತರ ಏಳಿಗೆ ಎಲ್ಲವೂ ಖಾದಿಯಲ್ಲಿದೆ ಎಂದು ಸರ್ದಾರ್ ಪಟೇಲ್ ಅವರು ಹೇಳಿದ್ದರು. ಮಹಾತ್ಮ ಗಾಂಧೀಜಿ ಅವರು ಖಾದಿಗೆ ಮಹತ್ವ ತಂದರು. ಈಗ ಯುವ ಪೀಳಿಗೆ ಇಂದಿನ ಫ್ಯಾಷನ್, ಹೆಗ್ಗುರತು ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಜನವರಿ 31, ಬೆಳಗ್ಗೆ ಆಕಾಶವಾಣಿ ಮೂಲಕ 16ನೇ ಬಾರಿಗೆ ತಮ್ಮ ಮನದ ಮಾತು ಬಿಚ್ಚಿಟ್ಟ ಪ್ರಧಾನಿ ಅವರು ಖಾದಿ, ಸ್ಟಾರ್ಟ್ ಅಪ್ ಇಂಡಿಯಾ, ರೈತರಿಗೆ ತಂತ್ರಜ್ಞಾನ, ಮಹಾತ್ಮಾ ಗಾಂಧೀಜಿ, ಸರ್ದಾರ್ ಪಟೇಲ್, ಹುತಾತ್ಮ ಯೋಧರ ಬಗ್ಗೆ ಮಾತನಾಡಿದರು.
ಮನ್ ಕಿ ಬಾತ್ ಈಗ ಮೊಬೈಲಿನಲ್ಲಿ ಯಾವಾಗಾದರೂ ಕೇಳಿಸಿಕೊಳ್ಳಬಹುದು. ಸದ್ಯಕ್ಕೆ ಇದು ಹಿಂದಿ ಭಾಷೆಯಲ್ಲಿದೆ. ಸದ್ಯದಲ್ಲೇ ನಿಮ್ಮ ಮಾತೃಭಾಷೆಯಲ್ಲಿ ಕೇಳಿಸಿಕೊಳ್ಳಬಹುದು ಎಂದು ಮೋದಿ ಭರವಸೆ ನೀಡಿದರು.

ಪ್ರಧಾನಿ ಅವರ ಮನದ ಮಾತಿನ ಮುಖ್ಯಾಂಶಗಳು:
* ಮಹಾತ್ಮ ಗಾಂಧೀಜಿ ಅವರ ಸ್ಮರಣೆಯಲ್ಲಿ ನಾವು ಹುತಾತ್ಮರನ್ನು ಜನವರಿ 30ರಂದು ಸ್ಮರಿಸಿದೆವು. ನಮಗಾಗಿ ಬಲಿದಾನ ನೀಡಿದ ಮಹಾನ್ ವ್ಯಕ್ತಿಗಳಿಗಾಗಿ ನಾವು 2 ನಿಮಿಷ ಮೌನಚಾರಣೆ ಮಾಡುವುದು ಮಹತ್ಕಾರ್ಯ ಎಂದು ನಾನು ನಂಬಿದ್ದೇನೆ.
* ಒಟ್ಟಿಗೆ ಸಾಗೋಣ, ಒಕ್ಕೊರಲ ದನಿಗೂಡಿಸೋಣ ಈಗ ಒಂದೇ ಮನಸ್ಸಿನಿಂದ ದೇಶದ ಉನ್ನತಿಗೆ ದುಡಿಯೋಣ.
Let us integrate as many farmers as possible with the crop insurance scheme: PM @narendramodi appeals during #MannKiBaat
— PMO India (@PMOIndia) January 31, 2016 * ಖಾದಿ ಈಗ ದೇಶದ ಹೆಗ್ಗುರತಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ. ಕೋಟ್ಯಂತರ ಕುಟುಂಬಗಳ ದೈನಂದಿನ ಬದುಕಿನ ಆಸರೆಯಾಗಿದೆ.
* ಈ ದಿನ ಸೌರಶಕ್ತಿಯಿಂದ ಚರಕ ಚಲಾಯಿಸಲಾಗುತ್ತಿದೆ. ನನಗೆ ಇದರ ಬಗ್ಗೆ ಜನರು ಪತ್ರ ಬರೆಯುತ್ತಾರೆ. ಯಾವುದೇ ಕ್ಷೇತ್ರದ ಹೊಸ ಆವಿಷ್ಕಾರ, ಜನೋಪಯೋಗಿ ಸಾಧನಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ನಾನು ಜನತೆಯ ಮುಂದಿಡುತ್ತೇನೆ.
* ಬೇಟಿ ಬಚಾವೋ ಬೇಟಿ ಪಠಾವೋ ಯೋಜನೆ ಮೂಲಕ ಹರ್ಯಾಣ ಹಾಗೂ ಗುಜರಾತಿನಲ್ಲಿ ಭಾರಿ ಬದಲಾವಣೆ ತರಲಾಗಿದೆ. ಹೆಣ್ಣು ಮಕ್ಕಳಿಗೆ ಗೌರವದ ರಕ್ಷಣೆ ದೇಶದೆಲ್ಲೆಡೆ ಸಿಗಬೇಕಿದೆ.
Our start up India initiative dispelled the notion that start ups are only about IT. Opportunities are endless: PM @narendramodi
— PMO India (@PMOIndia) January 31, 2016 * ರೈತರಿಗೆ ಕೃಷಿ ಸಾಲದ ಜೊತೆಗೆ ಕೃಷಿ ವಿಮೆ ಯೋಜನೆ ಬಗ್ಗೆ ಪ್ರೀಮಿಯಂ ಕಟ್ಟುವುದರ ಬಗ್ಗೆ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿ ಕೊಡಬೇಕಾಗುತ್ತದೆ.
* ಮುಂದಿನ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ ದೇಶದ ಶೇ 50ರಷ್ಟು ರೈತರಿಗೆ ತಲುಪಿಸಲು ನಿಮ್ಮೆಲ್ಲರ ಸಹಾಯ ಬೇಕಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications