ಆರಂಭಿಕ ಹೋರಾಟಗಳಿಂದ ಪ್ರಧಾನಿ ಮೋದಿಯವರ ಸ್ಫೂರ್ತಿಯಾಗಿದ್ದ ತಾಯಿ ಹೀರಾಬೆನ್
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇಂದು ನಿಧನರಾದರು. ಅವರಿಗೆ 100 ವರ್ಷ ವಯಸ್ಸು. ಅವರು ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದಾಗಿ ದಾಖಲಾಗಿದ್ದರು. ಆದರಿಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ತಾಯಿ ಅಗಲಿಕೆ ಬಳಿಕ ಪ್ರಧಾನಿ ಮೋದಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
"ಅವಳ 100 ನೇ ಹುಟ್ಟುಹಬ್ಬದಂದು ನಾನು ಅವಳನ್ನು ಭೇಟಿಯಾದಾಗ ಅವಳು ಒಂದು ಮಾತನ್ನು ಹೇಳಿದಳು - ಯಾವಾಗಲೂ ನೆನಪಿಟ್ಟುಕೊ - ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧತೆಯಿಂದ ಬದುಕು" ಎಂದರು. "ನಾನು ಯಾವಾಗಲೂ ಅವರಲ್ಲಿ ತ್ರಿಮೂರ್ತಿಗಳನ್ನು ಕಾಣುತ್ತೇನೆ. ಇದರಲ್ಲಿ ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾದ ಜೀವನವಿದೆ" ಎಂದು ಹೇಳಿದ್ದಾರೆ.
1922ರ ಜೂನ್ 18 ರಂದು ಜನಿಸಿದ ಹೀರಾಬೆನ್ ಮೋದಿ ಅವರ ಹುಟ್ಟೂರು ಗುಜರಾತ್ನ ಮೆಹ್ಸಾನಾದ ವಡ್ನಗರ. ಅವರಿಗೆ ಐದು ಗಂಡು ಮಕ್ಕಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಂಕಜ್ ಮೋದಿ, ಸೋಮಾ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ, ಮತ್ತು ಒಬ್ಬ ಪುತ್ರಿ, ವಸಂತಿಬೆನ್ ಹಸ್ಮುಖಲಾಲ್ ಮೋದಿ. ಹೀರಾಬಾ ಮೋದಿ ಅವರು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ಸಮೀಪದ ರೇಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು.
|
ಹೀರಾಬೆನ್ ಮೋದಿ ಇಂದು ನಿಧನ
ಈ ವರ್ಷದ ಹೀರಾಬೆನ್ ಅವರ ಜನ್ಮದಿನದಂದು, ಪ್ರಧಾನಮಂತ್ರಿಯವರು ತಮ್ಮ 'ತಾಯಿ' ಎಂಬ ಶೀರ್ಷಿಕೆಯ ಬ್ಲಾಗ್ನಲ್ಲಿ ಬರೆದಿದ್ದಾರೆ. "ತಾಯಿ ನಿಘಂಟಿನಲ್ಲಿರುವ ಯಾವುದೇ ಪದವಲ್ಲ. ಇದು ಸಂಪೂರ್ಣ ಭಾವನೆಗಳನ್ನು ಒಳಗೊಂಡಿದೆ. ಪ್ರೀತಿ, ತಾಳ್ಮೆ, ನಂಬಿಕೆ ಮತ್ತು ಪ್ರಪಂಚದಾದ್ಯಂತ, ದೇಶ ಅಥವಾ ಪ್ರದೇಶವನ್ನು ಲೆಕ್ಕಿಸದೆ, ಮಕ್ಕಳು ತಮ್ಮ ತಾಯಂದಿರ ಬಗ್ಗೆ ವಿಶೇಷವಾದ ವಾತ್ಸಲ್ಯವನ್ನು ಹೊಂದಿರುತ್ತಾರೆ. ತಾಯಿಯು ತನ್ನ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಆದ್ದರಿಂದ, ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ'' ಎಂದು ಬರೆದಿದ್ದಾರೆ.
ತಮ್ಮ ಬ್ಲಾಗ್ನಲ್ಲಿ ಪ್ರಧಾನಿ ತಮ್ಮ ತಾಯಿ ಹೀರಾಬೆನ್ ಅವರನ್ನು ಸರಳ. ಆದರೆ ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದಾರೆ. ಅವಳು ಚಿಕ್ಕವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಳು ಮತ್ತು ಜೀವನದಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡಳು. ಆದರೆ ಅದಕ್ಕಾಗಿ ಹೆಚ್ಚು ದೃಢವಾಗಿ ಹೊರಹೊಮ್ಮಿದ್ದಾಳೆ ಎಂದು ಅವರು ಹೇಳಿದರು.

ಹೀರಾಬೆನ್ ಮೋದಿ ಇಂದು ನಿಧನ
ಈ ವರ್ಷದ ಹೀರಾಬೆನ್ ಅವರ ಜನ್ಮದಿನದಂದು, ಪ್ರಧಾನಮಂತ್ರಿಯವರು ತಮ್ಮ 'ತಾಯಿ' ಎಂಬ ಶೀರ್ಷಿಕೆಯ ಬ್ಲಾಗ್ನಲ್ಲಿ ಬರೆದಿದ್ದಾರೆ. "ತಾಯಿ ನಿಘಂಟಿನಲ್ಲಿರುವ ಯಾವುದೇ ಪದವಲ್ಲ. ಇದು ಸಂಪೂರ್ಣ ಭಾವನೆಗಳನ್ನು ಒಳಗೊಂಡಿದೆ. ಪ್ರೀತಿ, ತಾಳ್ಮೆ, ನಂಬಿಕೆ ಮತ್ತು ಪ್ರಪಂಚದಾದ್ಯಂತ, ದೇಶ ಅಥವಾ ಪ್ರದೇಶವನ್ನು ಲೆಕ್ಕಿಸದೆ, ಮಕ್ಕಳು ತಮ್ಮ ತಾಯಂದಿರ ಬಗ್ಗೆ ವಿಶೇಷವಾದ ವಾತ್ಸಲ್ಯವನ್ನು ಹೊಂದಿರುತ್ತಾರೆ. ತಾಯಿಯು ತನ್ನ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಆದ್ದರಿಂದ, ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ'' ಎಂದು ಬರೆದಿದ್ದಾರೆ.
ತಮ್ಮ ಬ್ಲಾಗ್ನಲ್ಲಿ ಪ್ರಧಾನಿ ತಮ್ಮ ತಾಯಿ ಹೀರಾಬೆನ್ ಅವರನ್ನು ಸರಳ. ಆದರೆ ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದಾರೆ. ಅವಳು ಚಿಕ್ಕವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಳು ಮತ್ತು ಜೀವನದಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡಳು. ಆದರೆ ಅದಕ್ಕಾಗಿ ಹೆಚ್ಚು ದೃಢವಾಗಿ ಹೊರಹೊಮ್ಮಿದ್ದಾಳೆ ಎಂದು ಅವರು ಹೇಳಿದರು.

'ಇಡೀ ಕುಟುಂಬವನ್ನು ಕಾಪಾಡಿದ ತಾಯಿ'
"ನನ್ನ ತಾಯಿ ಗುಜರಾತ್ನ ಮೆಹ್ಸಾನಾದ ವಿಸ್ನಗರದಲ್ಲಿ ಜನಿಸಿದರು. ಇದು ನನ್ನ ಹುಟ್ಟೂರಾದ ವಡ್ನಗರಕ್ಕೆ ಸಾಕಷ್ಟು ಹತ್ತಿರದಲ್ಲಿದೆ. ಅವರಿಗೆ ಸ್ವಂತ ತಾಯಿಯ ವಾತ್ಸಲ್ಯ ಸಿಗಲಿಲ್ಲ. ಇಳಿವಯಸ್ಸಿನಲ್ಲಿ ಅವರು ನನ್ನ ಅಜ್ಜಿಯನ್ನು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗಕ್ಕೆ ಕಳೆದುಕೊಂಡರು. ನನ್ನ ಅಜ್ಜಿಯ ಮುಖ ಅಥವಾ ಅವಳ ಮಡಿಲಲ್ಲಿರುವ ಸಾಂತ್ವನ ಅವರು ಕಾಣಲಿಲ್ಲ. ಅಮ್ಮನಿಲ್ಲದೆ ಬಾಲ್ಯವೆಲ್ಲ ಕಳೆದರು. ನಮ್ಮೆಲ್ಲರ ಹಾಗೆ ಅಮ್ಮನ ಪ್ರೀತಿ ಪಡೆಯಲಿಲ್ಲ. ನಮ್ಮೆಲ್ಲರಂತೆ ಅಮ್ಮನ ಮಡಿಲಲ್ಲಿ ವಿಶ್ರಮಿಸಲಿಲ್ಲ. ಅವಳಿಗೆ ಶಾಲೆಗೆ ಹೋಗಿ ಓದಲು ಮತ್ತು ಬರೆಯಲು ಕಲಿಯಲು ಸಹ ಆಗಲಿಲ್ಲ. ಅವಳ ಬಾಲ್ಯ ಬಡತನದಿಂದ ಕೂಡಿತ್ತು" ಎಂದು ಅವರು ಬರೆದಿದ್ದಾರೆ.
"ಅಮ್ಮನಿಗೆ ನಮ್ಮಂತೆ ಬಾಲ್ಯವಿರಲಿಲ್ಲ. ಅವಳು ಅವಳ ಕುಟುಂಭದಲ್ಲಿ ಹಿರಿಯ ಮಗಳಾದ್ದಳು. ಮದುವೆಯ ನಂತರ ಹಿರಿಯ ಸೊಸೆಯಾದಳು. ಬಾಲ್ಯದಲ್ಲಿ ಇಡೀ ಕುಟುಂಬವನ್ನು ನೋಡಿಕೊಂಡಲು. ಎಲ್ಲಾ ಕೆಲಸಗಳನ್ನು ನಿರ್ವಹಿಸಿದಳು. ಮದುವೆಯ ನಂತರವೂ ಅವರು ಈ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡರು. ಕಠಿಣ ಜವಾಬ್ದಾರಿಗಳು ಮತ್ತು ದೈನಂದಿನ ಹೋರಾಟಗಳ ಹೊರತಾಗಿಯೂ, ತಾಯಿ ಇಡೀ ಕುಟುಂಬವನ್ನು ಶಾಂತ ಮತ್ತು ಸ್ಥೈರ್ಯದಿಂದ ಒಟ್ಟಿಗೆ ಕಾಪಾಡಿದರು" ಎಂದು ಪ್ರಧಾನಿ ಹೇಳಿದರು.

ಮನೆಯ ಖರ್ಚು ದೂಗಿಸಲು ಕೆಲಸ
ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯದ ಕೆಲವು ವಿಶೇಷ ಕ್ಷಣಗಳನ್ನು ತಮ್ಮ ತಾಯಿಯೊಂದಿಗೆ ಕಳೆದಿದ್ದಾರೆ. ಅವರು ಬೆಳೆದಂತೆ ಅವರ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ನೆನಪಿಸಿಕೊಂಡರು ಮತ್ತು ಅವರ ಮನಸ್ಸು, ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸಿದ ವಿವಿಧ ಗುಣಗಳನ್ನು ಪ್ರಸ್ತಾಪಿಸಿದರು.
ಅವರು ವಡ್ನಗರದಲ್ಲಿರುವ ಮಣ್ಣಿನ ಗೋಡೆಗಳು ಮತ್ತು ಛಾವಣಿಗೆ ಮಣ್ಣಿನ ಹೆಂಚುಗಳನ್ನು ಹೊಂದಿರುವ ಪುಟ್ಟ ಮನೆಯನ್ನು ನೆನಪಿಸಿಕೊಂಡರು. ಅಲ್ಲಿ ಅವರು ತಮ್ಮ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ವಾಸವಾಗಿದ್ದರು. ತಾಯಿ ಮನೆಯ ಎಲ್ಲಾ ಕೆಲಸಗಳನ್ನು ತಾನೇ ಮಾಡುತ್ತಿದ್ದರು. ಜೊತೆಗೆ ಮನೆಯ ಅಲ್ಪ ಆದಾಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಳು. ಅವಳು ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದಳು ಮತ್ತು ಮನೆಯ ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುತ್ತಿದ್ದಳು ಎಂದು ಅವರು ಹೇಳಿದರು.
"ಮನೆಯ ಖರ್ಚಿಗೆ ಸಹಾಯ ಮಾಡಲು ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅಲ್ಪ ಆದಾಯಕ್ಕೆ ಪೂರಕವಾಗಿ ಚರಖಾವನ್ನು ನೂಲಲು ಸಮಯ ತೆಗೆದುಕೊಳ್ಳುತ್ತಿದ್ದರು. ಅವರು ಹತ್ತಿ ಸುಲಿಯುವುದರಿಂದ ಹಿಡಿದು ನೂಲು ನೂಲುವವರೆಗೆ ಎಲ್ಲವನ್ನೂ ಮಾಡುತ್ತಾರೆ. ಬಾಗಿದ ಬೆನ್ನುಮೂಳೆಯಲ್ಲೂ ಸಹ ಅವರು ಕೆಲಸ ಮಾಡಿದ್ದಾರೆ. ನಾವು ಸಹಾಯಕ್ಕಾಗಿ ಹೋದರೆ ಕೆಲಸದಲ್ಲಿ, ಹತ್ತಿ ಮುಳ್ಳುಗಳು ನಮಗೆ ಚುಚ್ಚುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅವಳ ಪ್ರಮುಖ ಕಾಳಜಿಯಾಗಿತ್ತು."

'ತಾಯಿಯೇ ನನ್ನ ದೊಡ್ಡ ಗುರು'- ಮೋದಿ
"ಮಳೆಗಾಲದಲ್ಲಿ ನಮ್ಮ ಮನೆ ಛಾವಣಿ ಸೋರುತ್ತಿತ್ತು. ಮನೆಯಲ್ಲಿ ಪ್ರವಾಹ ಉಂಟಾಗುತ್ತಿತ್ತು. ಮಳೆನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರಿಕೆಯ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.
"ನಾನು ಗುಜರಾತ್ ಮುಖ್ಯಮಂತ್ರಿಯಾದಾಗ, ನನ್ನ ಎಲ್ಲಾ ಶಿಕ್ಷಕರನ್ನು ಸಾರ್ವಜನಿಕವಾಗಿ ಗೌರವಿಸಲು ನಾನು ಬಯಸಿದ್ದೆ. ನನ್ನ ಜೀವನದಲ್ಲಿ ತಾಯಿಯೇ ನನ್ನ ದೊಡ್ಡ ಗುರು ಎಂದು ನಾನು ಹೇಳಲು ಭಾವಿಸಿದೆ. ನಾನು ಅವರನ್ನು ಗೌರವಿಸಬೇಕು ಅಂದುಕೊಂಡಿದ್ದೆ. ನಮ್ಮ ಧರ್ಮಗ್ರಂಥಗಳಲ್ಲಿಯೂ ತಾಯಿಗಿಂತ ಗುರುವಿಲ್ಲ ಎಂದು ಉಲ್ಲೇಖಿಸಲಾಗಿದೆ. ನಾನು ಕಾರ್ಯಕ್ರಮಕ್ಕೆ ಹಾಜರಾಗಲು ತಾಯಿಯನ್ನು ವಿನಂತಿಸಿದೆ. ಆದರೆ ಅವರು ನಿರಾಕರಿಸಿದರು. ಅವರು ಹೇಳಿದರು, "ನೋಡು, ನಾನು ಸಾಮಾನ್ಯ ವ್ಯಕ್ತಿ. ನಾನು ನಿನಗೆ ಜನ್ಮ ನೀಡಿರಬಹುದು, ಆದರೆ ನಿನ್ನನ್ನು ಸರ್ವಶಕ್ತನಿಂದ ಕಲಿಸಿ ಬೆಳೆಸಲಾಗಿದೆ" ಎಂದರು. ಹೀಗಾಗಿ ಆ ದಿನ ನನ್ನ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.
ತಮ್ಮ ತಾಯಿಯ ಅತ್ಯಂತ ಸರಳ ಜೀವನಶೈಲಿಯನ್ನು ಪ್ರತಿಬಿಂಬಿಸಿದ ಪ್ರಧಾನಿ ಮೋದಿ, ತಮ್ಮ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಬರೆದಿದ್ದಾರೆ. "ಅವಳು ಯಾವುದೇ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ, ಮತ್ತು ಅವಳಿಗೆ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವಳು ತನ್ನ ಚಿಕ್ಕ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನಶೈಲಿಯನ್ನು ಮುಂದುವರಿಸಿದ್ದಳು "ಎಂದು ಅವರು ಹೇಳಿದರು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications