ರಾಷ್ಟ್ರ ದ್ರೋಹದ ಆರೋಪ: ವೈಕೋ ಬಂಧನ
2009ರಲ್ಲಿ ಭಾರತ ಸರ್ಕಾರದ ವತಿಯಿಂದ ಉಗ್ರವಾದಿಗಳ ಸಂಘಟನೆ ಎಲ್ ಟಿಟಿಇ ಪರವಾಗಿ ಭಾಷಣ ಮಾಡಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದ ವೈಕೋ.
ಚೆನ್ನೈ, ಏಪ್ರಿಲ್ 3: ತಮಿಳುನಾಡಿನ ಹಿರಿಯ ರಾಜಕಾರಣಿ ಹಾಗೂ ಎಂಡಿಎಂಕೆ ನಾಯಕ ವೈಕೋ ಅವರನ್ನು ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
2009ರಲ್ಲಿ ಭಾರತ ಸರ್ಕಾರದ ವತಿಯಿಂದ ಉಗ್ರವಾದಿಗಳ ಸಂಘಟನೆ ಎಲ್ ಟಿಟಿಇ ವಿರುದ್ಧ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಖಂಡಿಸಿದ್ದ ವೈಕೋ, ಬಹಿರಂಗ ಸಭೆಯೊಂದರಲ್ಲಿ ಇದರ ವಿರುದ್ಧ ಗುಡುಗಿದ್ದರು.

ಶ್ರೀಲಂಕಾದಲ್ಲಿ ಭಾರತ ಸರ್ಕಾರವು ಎಲ್ ಟಿಟಿಇ ವಿರುದ್ಧದ ಕಾರ್ಯಾಚರಣೆ ನಿಲ್ಲಿಸದಿದ್ದಲ್ಲಿ ಭಾರತ ಎಂದಿಗೂ ಒಕ್ಕೂಟ ವ್ಯವಸ್ಥೆಯಾಗಿ ಉಳಿಯುವುದಿಲ್ಲ ಎಂದು ಗುಡುಗಿದ್ದರು.
ಹಾಗಾಗಿ, ಅವರ ವಿರುದ್ಧ ಚೆನ್ನ ಪೊಲೀಸರಿಂದ ರಾಷ್ಟ್ರ ದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತಲ್ಲದೆ, ಜನರನ್ನು ಹಿಂಸಾಚಾರಕ್ಕೆ ಎಳೆಯುವ ನಿಟ್ಟಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications