ಇಂದು ಇಸ್ರೋದಿಂದ ಮೊತ್ತ ಮೊದಲ 'ಖಾಸಗಿ ಉಪಗ್ರಹ' ಉಡಾವಣೆ
Recommended Video

ಬೆಂಗಳೂರು,ಆಗಸ್ಟ್ 31: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಉಡಾವಣೆ ಮಾಡಲಿರುವ 'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹ ಮೊದಲ ಖಾಸಗಿ ಉಪಗ್ರಹವಾಗಿದೆ.
ಈ ಉಪಗ್ರಹವನ್ನು ಖಾಸಗಿ ಕಂಪನಿ ಮತ್ತು ಇಸ್ರೋ ಜಂಟಿಯಾಗಿ ತಯಾರಿಸಿದೆ. ಈ ಹಿಂದೆ ಇಸ್ರೋ ಉಪಗ್ರಹಗಳಿಗೆ ಬೇಕಾದ ಬಿಡಿಭಾಗಗಳನ್ನು ಮಾತ್ರ ಖಾಸಗಿ ಕಂಪೆನಿಗಳಿಗೆ ಆರ್ಡರ್ ನೀಡಿ ಪಡೆದುಕೊಳ್ಳುತ್ತಿತ್ತು.
ಆದರೆ ಇದೇ ಮೊದಲ ಬಾರಿಗೆ 'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹವನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ. ವಿಶೇಷ ಎಂದರೆ ಈ ಕಂಪನಿ ಬೆಂಗಳೂರು ಮೂಲದ್ದಾಗಿದೆ.

ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಹಭಾಗಿತ್ವ
ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಕಂಪೆನಿಯೊಂದಿಗೆ ಇಸ್ರೋ ಈ ಉಪಗ್ರಹದ ಜೋಡಣೆ, ರಚನೆ ಮತ್ತು ಉಪಗ್ರಹದ ಪರೀಕ್ಷೆಯನ್ನು ನಡೆಸಿದೆ.

70 ಎಂಜಿನಿಯರ್ ಗಳ ಜತೆ ಉಪಗ್ರಹ ತಯಾರಿ
'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹ ತಯಾರಿಗೆ ಇಸ್ರೋ ಖಾಸಗಿ ಕಂಪೆನಿಯ 70 ಎಂಜಿನಿಯರ್ ಗಳ ನೆರವು ಪಡೆದಿತ್ತು. 70 ಎಂಜಿನಿಯರ್ ಗಳ ತಂಡದೊಂದಿಗೆ ಈ ಉಪಗ್ರಹದ ಜೋಡಣೆ ಮತ್ತು ಪರೀಕ್ಷೆ ನಡೆಸಿತ್ತು. ಇದಲ್ಲದೆ ಇನ್ನೂ ಒಂದು ಉಪಗ್ರಹವನ್ನು ಇದೇ ತಂಡದೊಂದಿಗೆ ಇಸ್ರೋ ತಯಾರಿಸಲಿದೆ.

ಖಾಸಗಿ ಕಂಪೆನಿಗಳ ಜತೆ ಇಸ್ರೋ
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಖಾಸಗಿ ಕಂಪನಿಗಳ ಜತೆ ಸೇರಿ ರಾಕೆಟ್ ಮತ್ತು ಉಪಗ್ರಹಗಳನ್ನು ನಿರ್ಮಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.

ಸಂಜೆ 6.59ಕ್ಕೆ 'ಬದಲಿ' ಉಪಗ್ರಹ ಉಡಾವಣೆ
'ಐಆರ್ಎನ್ಎಸ್ಎಸ್-1ಎಚ್' ಈ ಹಿಂದೆ ಉಡಾವಣೆಯಾಗಿದ್ದ 'ಐಆರ್ಎನ್ಎಸ್ಎಸ್-1ಎ' ಉಪಗ್ರಹಕ್ಕೆ ಬದಲಿಯಾಗಿ ಉಡಾವಣೆ ಮಾಡಲಾಗುತ್ತಿದೆ. 'ಐಆರ್ಎನ್ಎಸ್ಎಸ್-1ಎ' ಅಟೋಮಿಕ್ ಕ್ಲಾಕ್ ವಿಫಲಗೊಂಡ ಹಿನ್ನಲೆಯಲ್ಲಿ ಈ ಉಡಾವಣೆ ಮಾಡಲಾಗುತ್ತಿದೆ.
ಸಂಜೆ 6.59 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ39 ರಾಕೆಟ್ 'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications