ಇಂದು ಇಸ್ರೋದಿಂದ ಮೊತ್ತ ಮೊದಲ 'ಖಾಸಗಿ ಉಪಗ್ರಹ' ಉಡಾವಣೆ
Recommended Video

ಬೆಂಗಳೂರು,ಆಗಸ್ಟ್ 31: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಉಡಾವಣೆ ಮಾಡಲಿರುವ 'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹ ಮೊದಲ ಖಾಸಗಿ ಉಪಗ್ರಹವಾಗಿದೆ.
ಈ ಉಪಗ್ರಹವನ್ನು ಖಾಸಗಿ ಕಂಪನಿ ಮತ್ತು ಇಸ್ರೋ ಜಂಟಿಯಾಗಿ ತಯಾರಿಸಿದೆ. ಈ ಹಿಂದೆ ಇಸ್ರೋ ಉಪಗ್ರಹಗಳಿಗೆ ಬೇಕಾದ ಬಿಡಿಭಾಗಗಳನ್ನು ಮಾತ್ರ ಖಾಸಗಿ ಕಂಪೆನಿಗಳಿಗೆ ಆರ್ಡರ್ ನೀಡಿ ಪಡೆದುಕೊಳ್ಳುತ್ತಿತ್ತು.
ಆದರೆ ಇದೇ ಮೊದಲ ಬಾರಿಗೆ 'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹವನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ. ವಿಶೇಷ ಎಂದರೆ ಈ ಕಂಪನಿ ಬೆಂಗಳೂರು ಮೂಲದ್ದಾಗಿದೆ.

ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಹಭಾಗಿತ್ವ
ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಕಂಪೆನಿಯೊಂದಿಗೆ ಇಸ್ರೋ ಈ ಉಪಗ್ರಹದ ಜೋಡಣೆ, ರಚನೆ ಮತ್ತು ಉಪಗ್ರಹದ ಪರೀಕ್ಷೆಯನ್ನು ನಡೆಸಿದೆ.

70 ಎಂಜಿನಿಯರ್ ಗಳ ಜತೆ ಉಪಗ್ರಹ ತಯಾರಿ
'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹ ತಯಾರಿಗೆ ಇಸ್ರೋ ಖಾಸಗಿ ಕಂಪೆನಿಯ 70 ಎಂಜಿನಿಯರ್ ಗಳ ನೆರವು ಪಡೆದಿತ್ತು. 70 ಎಂಜಿನಿಯರ್ ಗಳ ತಂಡದೊಂದಿಗೆ ಈ ಉಪಗ್ರಹದ ಜೋಡಣೆ ಮತ್ತು ಪರೀಕ್ಷೆ ನಡೆಸಿತ್ತು. ಇದಲ್ಲದೆ ಇನ್ನೂ ಒಂದು ಉಪಗ್ರಹವನ್ನು ಇದೇ ತಂಡದೊಂದಿಗೆ ಇಸ್ರೋ ತಯಾರಿಸಲಿದೆ.

ಖಾಸಗಿ ಕಂಪೆನಿಗಳ ಜತೆ ಇಸ್ರೋ
ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಖಾಸಗಿ ಕಂಪನಿಗಳ ಜತೆ ಸೇರಿ ರಾಕೆಟ್ ಮತ್ತು ಉಪಗ್ರಹಗಳನ್ನು ನಿರ್ಮಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.

ಸಂಜೆ 6.59ಕ್ಕೆ 'ಬದಲಿ' ಉಪಗ್ರಹ ಉಡಾವಣೆ
'ಐಆರ್ಎನ್ಎಸ್ಎಸ್-1ಎಚ್' ಈ ಹಿಂದೆ ಉಡಾವಣೆಯಾಗಿದ್ದ 'ಐಆರ್ಎನ್ಎಸ್ಎಸ್-1ಎ' ಉಪಗ್ರಹಕ್ಕೆ ಬದಲಿಯಾಗಿ ಉಡಾವಣೆ ಮಾಡಲಾಗುತ್ತಿದೆ. 'ಐಆರ್ಎನ್ಎಸ್ಎಸ್-1ಎ' ಅಟೋಮಿಕ್ ಕ್ಲಾಕ್ ವಿಫಲಗೊಂಡ ಹಿನ್ನಲೆಯಲ್ಲಿ ಈ ಉಡಾವಣೆ ಮಾಡಲಾಗುತ್ತಿದೆ.
ಸಂಜೆ 6.59 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ39 ರಾಕೆಟ್ 'ಐಆರ್ಎನ್ಎಸ್ಎಸ್-1ಎಚ್' ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications