ಮೋದಿ ಹಂತಕ, ರಾಹುಲ್ ಹೆಡ್ಡ: ವಿವಾದದಲ್ಲಿ ಕೇಜ್ರಿವಾಲ್
ನವದೆಹಲಿ, ಜ 29: ಸದಾ ಸುದ್ದಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಮಗುದೊಮ್ಮೆ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಕಳುಹಿಸಿದ ಟ್ವೀಟ್ ಸಂದೇಶವನ್ನು ರಿಟ್ವೀಟ್ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್ ವಿವಾದಕ್ಕೆ ಸಿಲುಕಿದ್ದಾರೆ.
ರಾಹುಲ್ ಗಾಂಧಿ ಜೊತೆ ಟೈಮ್ಸ್ ನೌ ವಾಹಿನಿಯ ಅರ್ನಬ್ ಗೋಸ್ವಾಮಿ ನಡೆಸುತ್ತಿದ್ದ ಸಂದರ್ಶನದ ವೇಳೆ ವಿಶಾಲ್ ದದ್ಲಾನಿ, ಒಬ್ಬ ನರಹಂತಕ (ಮೋದಿ) ಇನ್ನೊಬ್ಬ ಬುದ್ದಿಗೇಡಿ (ರಾಹುಲ್), ಈ ಇಬ್ಬರ ಮಧ್ಯೆ ಭಾರತ ದೇಶ ಕಥೆ ಏನಾಗ ಬೇಡ ಎಂದು ಟ್ವೀಟ್ ಮಾಡಿದ್ದರು. (ಬಿಜೆಪಿ ಮೋದಿಯ ಭೀತಿ ನಿಮ್ಮನ್ನು ಆವರಿಸಿದೆಯಾ)
ವಿಶಾಲ್ ಟ್ವೀಟ್ ಸಂದೇಶವನ್ನು ಅರವಿಂದ್ ಕೇಜ್ರಿವಾಲ್ ತನ್ನ ಅಕೌಂಟಿನಿಂದ ರಿಟ್ವೀಟ್ ಮಾಡಿ ವಿಶಾಲ್ ಸಂದೇಶಕ್ಕೆ ತನ್ನ ಸಹಮತ ವ್ಯಕ್ತ ಪಡಿಸಿದ್ದರು. ಮುಖ್ಯಮಂತ್ರಿ ಸ್ಥಾನದಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಡೆದು ಕೊಳ್ಳುತ್ತಿರುವ ರೀತಿ ಇದಲ್ಲ ಎಂದು ಬಿಜೆಪಿ ತಕ್ಷಣ ಪ್ರತಿಕ್ರಿಯಿಸಿದೆ.
ಯಾವುದಾದರೂ ಸಂದೇಶವನ್ನು ರಿಟ್ವೀಟ್ ಮಾಡಿದರೆ ಅದಕ್ಕೆ ತನ್ನ ಸಹಮತವಿದೆ ಎಂದರ್ಥ ಎನ್ನುವ ಕನಿಷ್ಠ ಜ್ಞಾನ ಕೇಜ್ರಿವಾಲ್ ಅವರಿಗೆ ಇಲ್ಲದಾಯಿತೇ ಎಂದು ಬಿಜೆಪಿ ಬೇಸರ ವ್ಯಕ್ತ ಪಡಿಸಿದೆ.
ವಿಶಾಲ್ ದದ್ಲಾನಿ ಹಿಂದಿ, ತೆಲುಗು ಮತ್ತು ಮರಾಠಿ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಒಂದು ಹಾಡನ್ನು ವಿಶಾಲ್ ದದ್ಲಾನಿ ಹಾಡಿದ್ದರು (ಪುನೀತ್ ಅಭಿನಯದ 'ನಿನ್ನಿಂದಲೇ' ಧ್ವನಿಸುರುಳಿ ವಿಮರ್ಶೆ)
ದದ್ಲಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಬಗ್ಗೆ ಅನೇಕ ಮೊನಚಾದ ಟ್ವೀಟ್ ಮಾಡಿದ್ದಾರೆ.
|
ವಿಶಾಲ್ ದದ್ಲಾನಿ ಟ್ವೀಟ್
ಒಬ್ಬ ನರಹಂತಕ, ಇನ್ನೊಬ್ಬ ಮೂರ್ಖ. ಈ ಇಬ್ಬರ ಮಧ್ಯೆ ಭಾರತದ ಭವಿಷ್ಯ ಏನಾಗ ಬೇಡ ಎಂದು ಸೋಮವಾರ (ಜ 27) ವಿಶಾಲ್ ದದ್ಲಾನಿ ಟ್ವೀಟ್ ಮಾಡಿದ್ದರು. ವಿಶಾಲ್ ದದ್ಲಾನಿ ಟ್ವೀಟ್ ಅಕೌಂಟಿಗೆ 485,000 ಜನ ಹಿಂಬಾಲಕರಿದ್ದಾರೆ.

ನಾನು ಯಾರನ್ನೂ ಹೆಸರಿಸುವುದಿಲ್ಲ
ನನ್ನ ಟ್ವೀಟ್ ಸಂದೇಶದಲ್ಲಿ ಯಾರನ್ನೂ ಹೆಸರಿಸುವುದಿಲ್ಲ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆಂದು ನಿಮಗೆಲ್ಲಾ ತಿಳಿದಿದೆ. ಯಾರಿಗೆ ಮತ ಹಾಕಬೇಕೆಂದು ಹೇಳುವುದಿಲ್ಲ, ಅದು ನಿಮ್ಮ ಆಯ್ಕೆ ಎಂದು ದದ್ಲಾನಿ ಟ್ವೀಟ್ ಮಾಡಿದ್ದಾರೆ.

ಮೋದಿ ಪ್ರಧಾನಿಯಾಗಬಾರದು
ಮೋದಿ ಪ್ರಧಾನಿಯಾಗಬಾರದು, ಅವರ ಟ್ರ್ಯಾಕ್ ರೆಕಾರ್ಡ ನನಗೆ ಇಷ್ಟವಾಗುವುದಿಲ್ಲ. ಆದರೆ ನೀವು ಅವರ ಪರವಾಗಿ ಮತ ಚಲಾಯಿಸಿದರೆ ಅಭಿವೃದ್ದಿ ಕೆಲಸ ಮಾಡಿಸಿ. ಪ್ರಧಾನಿಯಾದವನು ಜಾತಿ ಹೆಸರಿನಲ್ಲಿ ದೇಶ ವಿಭಜಿಸಬಾರದು ಎಂದು ದದ್ಲಾನಿ ಟ್ವೀಟ್ ಮಾಡಿದ್ದಾರೆ.
|
ಗುಜರಾತ್ ಅಭಿವೃದ್ದಿ ಆಗಿದೆಯೇ?
ಗುಜರಾತ್ ರಾಜ್ಯವನ್ನು ದೇಶದಲ್ಲೇ ಅಭಿವೃದ್ದಿಯಾದ ಮೊದಲ ದೇಶವೆನ್ನುವವರು ಆ ರಾಜ್ಯದ ಮೇಲಿರುವ 1.45 ಲಕ್ಷ ಕೋಟಿ ಸಾಲದ ಬಗ್ಗೆ ಏನನ್ನುತ್ತಾರೆ. ಅಹಮದಾಬಾದಿನ ಜುಹಾಪುರಕ್ಕೆ ಭೇಟಿ ನೀಡಿ ಮೋದಿ ಅಭಿವೃದ್ದಿ ಬಗ್ಗೆ ತಿಳಿಯುತ್ತೆ.

ನನಗೆ ಬೆದರಿಕೆ ಇದೆ
ರಾಹುಲ್ ಮತ್ತು ಮೋದಿ ಬಗ್ಗೆ ಟ್ವೀಟ್ ಮಾಡಿದ ಮೇಲೆ ನನಗೆ ಬೆದರಿಕೆ ಇದೆ. ನಾನು ಇದಕ್ಕೆ ಜಗ್ಗುವುದಿಲ್ಲ, ನಾನು ಕಳುಹಿಸಿದ ಟ್ವೀಟ್ ಸಂದೇಶ ಅದು ನನ್ನ ಅಭಿಪ್ರಾಯ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications