ಜಮ್ಮು-ಕಾಶ್ಮೀರದಲ್ಲಿ ಭೀಕರ ಅಪಘಾತ: 13 ಮಂದಿ ಬಲಿ
ಕಿಶ್ತ್ವಾರ್, ಆಗಸ್ಟ್ 21: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನ ಚೆನಬ್ ನದಿಯಲ್ಲಿ ವಾಹನವೊಂದು ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 13 ಜನ ಸ್ಥಳದಲ್ಲೇ ಮೃತರಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಿಶ್ತ್ವಾರ್ ನಿಂದ್ ಪದ್ದಾರ್ ಗೆ ತೆರಳುತ್ತಿದ್ದ ವಾಹನ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಘಟನೆಯಲ್ಲಿ 5 ವರ್ಷದ ಚಿಕ್ಕ ಮಗುವೊಂದು ಬದುಕುಳಿದಿದ್ದು, ಮಿಕ್ಕವರೆಲ್ಲರೂ ಮೃತರಾಗಿದ್ದಾರೆಂದು ಕೆಲವು ಮೂಲಗಳು ತಿಳಿಸಿವೆ.
Kishtwar: 11 dead bodies recovered, 5-year-old injured child shifted to hospital, after a vehicle carrying 'Machel Mata' devotees rolled down in river Chenab 28 kilometres from Kishtwar towards Padder, earlier today. #JammuAndKashmir pic.twitter.com/lAtl5AFzZy
— ANI (@ANI) August 21, 2018
ಉತ್ತರಾಖಂಡದಲ್ಲಿ ಪ್ರಪಾತಕ್ಕೆ ಉರುಳಿದ ಬಸ್ಸು: 14 ಮಂದಿ ದುರ್ಮರಣ
ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜಮ್ಮು ಕಾಶ್ಮೀರದ ಮಚೈಲ್ ಮಠ ಎಂಬಲ್ಲಿಗೆ ಪ್ರಯಾಣಿಕರೆಲ್ಲರೂ ತೀರ್ಥಯಾತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ಚಂಡಿ ದೇವತೆಯ ದರ್ಶನಕ್ಕಾಗಿ ಸಹಸ್ರಾರು ಜನರು ಈ ಮಾರ್ಗವಾಗಿ ಹೋಗುತ್ತಾರೆ.
ಬಸ್ಸೊಂದು ಪ್ರಪಾತಕ್ಕೆ ಉರುಳಿದ ಪರಿಣಾಮ 14 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಉತ್ತರಾಖಂಡದ ತೆಹ್ರಿ ಎಂಬಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.