Jammu Kashmir and Haryana Election Results 2024 Live:ಹರಿಯಾಣಕ್ಕೆ ಅಚ್ಚರಿಯ ಸಿಎಂ, ಕಾಶ್ಮೀರದಲ್ಲಿ ಒಮರ್‌ ದರ್ಬಾರ್‌

ಜಮ್ಮು ಕಾಶ್ಮೀರ, ಹರಿಯಾಣದಲ್ಲಿ ಇಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಒಟ್ಟು ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಮೊದಲ ಹಂತದಲ್ಲಿ 24 ಸ್ಥಾನಗಳಿಗೆ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ 26 ಮತ್ತು ಮೂರನೇ ಹಂತದಲ್ಲಿ 40 ಸ್ಥಾನಗಳಿಗೆ ಮತದಾನ ನಡೆದಿದೆ.

90 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆಯಾಗಿ ಶೇ.63.88ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ. ಮೂರು ಹಂತಗಳಲ್ಲಿ ಶಾಂತಿಯುವಾಗಿ ಚುನಾವಣೆ ನಡೆದಿದ್ದು, ಆರ್ಟಿಕಲ್ 370 ರದ್ದಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದರೆ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಭಾರತೀಯ ಜನತಾ ಪಾರ್ಟಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

Jammu Kashmir and Haryana Assembly Election Results 2024 Live Updates in Kannada

ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಸೂತ್ರದ ಜೊತೆ ಸ್ಪರ್ಧೆ ಮಾಡಿವೆ. ಬಿಜೆಪಿ ಮತ್ತು ಪಿಡಿಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, ಜಮ್ಮು ಕಾಶ್ಮೀರದಲ್ಲಿ ಎಕ್ಸಿಟ್ ಪೋಲ್‌ಗಳು ಎನ್‌ಸಿ-ಕಾಂಗ್ರೆಸ್ ಮೈತ್ರಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಿಸಿದೆ. 2014ರ ಚುನಾವಣೆಯಲ್ಲಿ ಗೆದ್ದಿದ್ದ 25 ಸ್ಥಾನಗಳಲ್ಲಿ ಬಿಜೆಪಿ ಸ್ವಲ್ಪ ಸುಧಾರಿಸಿಕೊಳ್ಳುವ ನಿರೀಕ್ಷೆಯಿದೆ. 2014ರ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ಪಿಡಿಪಿ ಈ ಬಾರಿ 10ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಹರಿಯಾಣದ ಎಲ್ಲಾ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಿತು. ಹರಿಯಾಣದಲ್ಲಿ ಶೇ. 67.90ರಷ್ಟು ಮತದಾನವಾಗಿದೆ. ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಜನನಾಯಕ್ ಜನತಾ ಪಕ್ಷ (ಜೆಜೆಪಿ), ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಪ್ರಮುಖ ಪಕ್ಷಗಳಾಗಿ ಸ್ಪರ್ಧಿಸಿವೆ. ಇಂದು ಮತ ಎಣಿಕೆ ನಡೆಯುವ ಹಿನ್ನೆಲೆ ಕೇಂದ್ರಗಳ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿರುತ್ತದೆ.

9:25 PM, 8 Oct

ಕಾಂಗ್ರೆಸ್ ಸೋತಾಗೆಲ್ಲಾ ಮತಯಂತ್ರವನ್ನು ದೂಷಿಸುವ ಪರಿಪಾಠ ರೂಢಿಸಿಕೊಂಡಿದೆ. ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದಾಗ ಸಂಭ್ರಮಿಸಿದ್ದರು, ಆದರೆ ಈಗ ಸೋತಾಗ ಇವಿಎಂ ಅನ್ನು ದೂರುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟೀಕಿಸಿದ್ದಾರೆ.

8:35 PM, 8 Oct

ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸ್ಥಿರ ಮತ್ತು ಜವಾಬ್ದಾರಿಯು ಸರ್ಕಾರವನ್ನು ರಚನೆ ಮಾಡುತ್ತೇವೆ. ಬಿಜೆಪಿ ಆಡಳಿತದ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ ಎಂದು ಈ ಚುನಾವಣೆ ಫಲಿತಾಂಶದಿಂದ ಗೊತ್ತಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.

Top Fight - ಸೆಂಟ್ರಲ್ ಶಾಲ್ಟೆಂಗ್

image

ತಾರಿಕ್ ಹಮೀದ್ ಕರ್ರಾ

Won

image

ಅಬ್ದುಲ್ ಖಯೂಮ್ ಭಟ್

Lost

Top Fight - ಲ್ಯಾಂಗೇಟ್

image

ಖುರ್ಷೀದ್ ಅಹ್ಮದ್ ಶೇಖ್

Won

image

ಇರ್ಷಾದ್ ಹುಸೇನ್ ಗನೈ

Lost

Top Fight - ಕರ್ನಾಲ್

image

ಜಗಮೋಹನ್ ಆನಂದ್

Leading

image

ಸುಮಿತ್ರಾ ವಿರ್ಕ್

Trailing

Top Fight - ಅಟೆಲಿ

image

ಆರ್ತಿ ಸಿಂಗ್ ರಾವ್

Won

image

ಅನಿತಾ ಯಾದವ್

Lost

Top Fight - ಅಟೆಲಿ

image

ಆರ್ತಿ ಸಿಂಗ್ ರಾವ್

Won

image

ಅನಿತಾ ಯಾದವ್

Lost

Top Fight - ಉಚನಾ ಕಾಲನ್

image

ದೇವೇಂದ್ರ ಅತ್ರಿ

Won

image

ಬ್ರಿಜೇಂದ್ರ ಸಿಂಗ್

Lost

Top Fight - ಪಾಣಿಪತ್ ನಗರ

image

ಪ್ರಮೋದ್ ಕುಮಾರ್ ವಿಜಿ

Won

image

ವರೀಂದರ್ ಕುಮಾರ್ ಶಾ

Lost

8:04 PM, 8 Oct

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನ ನಂಬಿಕೆ ಇಟ್ಟಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

7:09 PM, 8 Oct

ಹರಿಯಾಣ ವಿಧಾನಸಭಾ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಳಲ್ಲಿ ಇತರೆ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ ಸಜ್ಜಾಗಿದೆ.

6:23 PM, 8 Oct

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಿಡಿಪಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವಲ್ಲಿ ಸಫಲವಾಗಿದೆ. ಎಎಪಿ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.

5:50 PM, 8 Oct

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ವೇಳೆ ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದರು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿರಲಿಲ್ಲ ಎನ್ನುವಂತೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.

Top Fight - ಲಾಡ್ವಾ

image

ನಯಾಬ್ ಸಿಂಗ್ ಸೈನಿ

Leading

image

ಸಪ್ನಾ ಬರ್ಸಾಮಿ

Trailing

5:17 PM, 8 Oct

ಹರಿಯಾಣದ ಹಿಸಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಗೆ ಪಕ್ಷೇತರ ಅಭ್ಯರ್ಥಿ ಮಣ್ಣು ಮುಕ್ಕಿಸಿದ್ದಾರೆ. ದೇಶದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾದ ಸಾವಿತ್ರಿ ಜಿಂದಾಲ್ ಅವರು, ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ ಸಿಗದ ಕಾರಣ ಅವರು ಪಕ್ಷೇತರವಾಗಿ ನಿಂತು ಗೆದ್ದಿದ್ದಾರೆ.

Top Fight - ಬನಿಹಾಲ್

image

ಶಾಜದ್ ಶಾಹೀನ್

Leading

image

ಮೊಹಮ್ಮದ್ ಸಲೀಂ ಭಟ್

Trailing

Top Fight - ಶ್ರೀಗುಫ್ವಾರಾ - ಬಿಜ್ಬೆಹರಾ

image

ಬಶೀರ್ ಅಹ್ಮದ್ ಶಾ

Leading

image

ಇಲ್ತಿಜಾ ಮೆಹಬೂಬಾ ಮುಫ್ತಿ

Trailing

5:14 PM, 8 Oct

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಅವರಿಗೆ ಮತದಾರ ಆಘಾತ ನೀಡಿದ್ದಾನೆ. ನೌಶೆರಾ ವಿಧಾನಸಭಾ ಕ್ಷೇತ್ರದಲ್ಲಿ ಅವರು ಎನ್‌ಸಿ ಅಭ್ಯರ್ಥಿ ಸುರಿಂದರ್ ಚೌಧರಿ ವಿರುದ್ಧ 7000 ಮತಗಳ ಅಂತರದಲ್ಲಿ ಸೋತಿದ್ದು, ಪಕ್ಷಕ್ಕೆ ಮುಜುಗರ ತಂದಿದೆ.

Top Fight - ಬನಿಹಾಲ್

image

ಶಾಜದ್ ಶಾಹೀನ್

Leading

image

ಮೊಹಮ್ಮದ್ ಸಲೀಂ ಭಟ್

Trailing

Top Fight - ಮುಲಾನಾ

image

ಪೂಜಾ

Leading

image

ಸಂತೋಷ್ ಚೌಹಾಣ್ ಸರ್ವಾನ್

Trailing

Top Fight - ಅಂಬಾಲಾ ಕ್ಯಾಂಟ್

image

ಅನಿಲ್ ವಿಜ್

Leading

image

ಓಂಕಾರ್ ಸಿಂಗ್

Trailing

Top Fight - ಎಲೆನಾಬಾದ್

image

ಭರತ್ ಸಿಂಗ್ ಬೇನಿವಾಲ್

Leading

image

ಅಭಯ್ ಸಿಂಗ್ ಚೌತಾಲಾ

Trailing

Top Fight - ಲಾಡ್ವಾ

image

ನಯಾಬ್ ಸಿಂಗ್ ಸೈನಿ

Leading

image

ಸಪ್ನಾ ಬರ್ಸಾಮಿ

Trailing

5:02 PM, 8 Oct

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಬಗ್ಗೆ ಮಾತನಾಡಿದ ಸಂಸದೆ ಕುಮಾರಿ ಸೆಲ್ಜಾ, ಈ ಫಲಿತಾಂಶ ನಿರಾಸೆ ತಂದಿದೆ ಎಂದಿದ್ದಾರೆ. ಮತ ಎಣಿಕೆ ಆರಂಭವಾಗುವವರೆಗೂ ನಾವು ಗೆಲ್ಲುವ ವಿಶ್ವಾಸದಲ್ಲಿದ್ದೆವು, ಆದರೆ ಫಲಿತಾಂಶದಿಂದ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಈ ಸೋಲಿಗೆ ಕಾರಣಗಳೇನು ಎಂದು ನಾವು ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದರು.

5:00 PM, 8 Oct

ಜಮ್ಮು & ಕಾಶ್ಮೀರ ವಿಧಾನಸಭೆ ಚುನಾಚಣೆಯ ಮತ ಎಣಿಕೆ ಇಂದು ನಡೆದಿದ್ದು, ಹಂದ್ವಾರ ಕ್ಷೇತ್ರದಿಂದ ಜೆಪಿಸಿ ಅಭ್ಯರ್ಥಿ ಸಜಾದ್ ಲೋನ್‌ 29,812 ಮತಗಳನ್ನು ಪಡೆಯುವ ಮೂಲಕ 663 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಜೆಎನ್‌ಸಿ ಅಭ್ಯರ್ಥಿ ಛೌದ್ರಿ ಮೊಹಮ್ಮದ್ ರಾಮ್‌ಝಾನ್‌ 29,150 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದಾ ಮೊಹಮ್ಮದ್ ರಾಮ್‌ಝಾನ್‌ 29,150 ಮತಗಳನ್ನು ಪಡೆಯುವ ಮೂಲಕ ಸೋನನುಭವಿಸಿದ್ದಾರೆ.

Top Fight - ಹಂದ್ವಾರ

image

ಸಜದ್ ಗನಿ ಲೋನ್

Won

image

ಗೌಹರ್ ಆಜಾದ್ ಮಿರ್

Lost

4:35 PM, 8 Oct

ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು (ಅಕ್ಟೋಬರ್ 08) ನಡೆದಿದ್ದು, ಪಂಚ್‌ಕುಲ ಕ್ಷೇತ್ರದಲ್ಲಿ 67,397 ಮತಗಳನ್ನು ಪಡೆಯುವ ಮೂಲಕ 1997 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಚಂದರ್‌ಮೋಹನ್‌ ಗೆಲುವು ಸಾಧಿಸಿದ್ದು, 65,400 ಮತಗಳನ್ನು ಪಡೆದಿರುವ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದಾರೆ

Top Fight - ಪಂಚಕುಲ

image

ಚಂದರ್ ಮೋಹನ್

Leading

image

ಸುಶೀಲ್ ಗಾರ್ಗ್

Trailing

4:28 PM, 8 Oct

ಹರಿಯಾಣ ಸಿಎಂ ಆಗಿದ್ದ ಬಿಜೆಪಿಯ ನಯಾಬ್ ಸಿಂಗ್ ಸೈನಿ ಅವರು ಲಾಡ್ವಾ ವಿಧಾನಸಭಾ ಕ್ಷೇತ್ರದಿಂದ 16,054 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೆದ್ದ ಬೆನ್ನಲ್ಲೇ ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರದ ಜ್ಯೋತಿಸರ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು

Top Fight - ಚನಪೋರಾ

image

ಮುಷ್ತಾಕ್ ಗುರು

Leading

image

ಅಲ್ತಾಫ್ ಬುಖಾರಿ

Trailing

READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+