ಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆ
ಶ್ರೀಹರಿಕೋಟಾ, ಸೆಪ್ಟೆಂಬರ್.16: ಇಸ್ರೋ ಇಂದು ರಾತ್ರಿ 10:30 ಕ್ಕೆ ಸರಿಯಾಗಿ ಮಹತ್ವದ ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ. ಭೂ ವೀಕ್ಷಣೆಗಾಗಿ ಇರುವ ಬ್ರಿಟನ್ ನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಜವಾಬ್ದಾರಿಯನ್ನು ಇಸ್ರೋ ಹೊತ್ತುಕೊಂಡಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಸೆಪ್ಟೆಂಬರ್ 16ರ ರಾತ್ರಿ 10:30ಕ್ಕೆ ನೋವಾಸರ್ ಮತ್ತು ಎಸ್ 1-4 ಉಡಾವಣೆ ಮಾಡಲಾಗುತ್ತದೆ.
ಭೂಮಿಯ ಮೇಲೆ ಕಣ್ಗಾವಲು ಇಡುವ ಹಾಗೂ ಸರ್ವೇ ಮಾಡುವ ಬ್ರಿಟನ್ನ 2 ಉಪಗ್ರಹ ಸೇರಿದಂತೆ, ದೇಶದ ನೋವಾಸರ್ ಮತ್ತು ಎಸ್1-4 ಉಪಗ್ರಹಗಳನ್ನ ನಭೋಮಂಡಲಕ್ಕೆ ಸೇರಿಸಲಾಗುವುದು. ಈ ಉಪಗ್ರಹಗಳ ಒಟ್ಟಾರೆ ತೂಕ ಬರೋಬ್ಬರಿ 889 ಕೆಜಿ ಇದೆ.

ನೋವಾಸರ್ ಉಪಗ್ರಹ ಇದು ಅರಣ್ಯದಲ್ಲಿ ದಾರಿಯನ್ನ ತೋರಲಿದೆ. ಅಷ್ಟೇ ಇಲ್ಲ ಇದು ಪ್ರವಾಹ ಹಾಗೂ ವಿಕೋಪಗಳನ್ನ ಮಾನಿಟರಿಂಗ್ ಮಾಡಲಿದೆ. ಇನ್ನು ಎಸ್1- 4 ಹೈರೆಸಲೂಷನ್ ಹೊಂದಿರುವ ಭೂಮಿ ವೀಕ್ಷಣಾ ಉಪಗ್ರಹವಾಗಿದೆ.
ಈ ಸ್ಯಾಟಲೈಟ್ ಮೂಲಕ ಭೂ ಸಂಪನ್ಮೂಲ, ವಾತಾವರಣ, ನಗರಾಡಳಿತ ಹಾಗೂ ಭೂ ವಿಕೋಪಗಳ ಬಗ್ಗೆ ಅಧ್ಯಯನ ಹಾಗೂ ಮಾನಿಟರಿಂಗ್ ಮಾಡಲಿದೆ.
ಇಸ್ರೋ ಇದೇ ಮೊದಲ ಬಾರಿಗೆ ರಾತ್ರಿವೇಳೆ ಉಪಗ್ರಹ ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ. ಬಯಸಿದ ಇಮೇಜಿಂಗ್ ಮತ್ತು ಪ್ರಕಾಶಮಾನ ಪರಿಸ್ಥಿತಿಗಳ ಬಗ್ಗೆ ಸರಿಯಾಗಿ ಅಂದಾಜು ಮಾಡಲು ರಾತ್ರಿಯ ಸಮಯವೇ ಅತ್ಯಂತ ಉತ್ತಮ ಸಮಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತಾಂತ್ರಿಕ ಕಾರಣಗಳಿಗಾಗಿ ರಾತ್ರಿವೇಳೆ ಉಪಗ್ರಹ ಉಡ್ಡಯನ ಮಾಡಲಾಗುತ್ತಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications