Get Updates
Get notified of breaking news, exclusive insights, and must-see stories!

ಕೇದಾರನಾಥಕ್ಕೆ ಹೆಲಿಕಾಪ್ಟರ್ ಸೇವೆ : ದಿನಾಂಕ, ಬುಕ್ಕಿಂಗ್ ಮಾಡುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಏಪ್ರಿಲ್ 25 ರಂದು ಕೇದಾರನಾಥ ಧಾಮದ ದ್ವಾರಗಳು ತೆರೆಯಲಿದ್ದು, ಐಆರ್‌ಸಿಟಿಸಿ ಶೀಘ್ರದಲ್ಲೇ ದೇವಸ್ಥಾನಕ್ಕೆ ಹೆಲಿಕಾಪ್ಟರ್ ಸೇವೆಯ ಆನ್‌ಲೈನ್ ಬುಕಿಂಗ್ ಅನ್ನು ಪ್ರಾರಂಭಿಸಲಿದೆ. ಯಾತ್ರಾರ್ಥಿಗಳು ಈಗ ತಮ್ಮ ಟಿಕೆಟ್‌ಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು.

ಈ ಹೆಲಿಕಾಪ್ಟರ್ ಸೇವೆಗಳ ಪ್ರಾಯೋಗಿಕ ರನ್ ಮಾರ್ಚ್ 31 ರೊಳಗೆ ಪೂರ್ಣಗೊಳ್ಳುತ್ತದೆ. ಹೆಲಿಕಾಪ್ಟರ್ ಬುಕಿಂಗ್ ಏಪ್ರಿಲ್ 1 ರಿಂದ ತೆರೆಯುವ ಸಾಧ್ಯತೆಯಿದೆ. ಫೆಬ್ರವರಿಯಲ್ಲಿ ಡಿಜಿಸಿಎ 2023 ಕ್ಕೆ ಹೆಲಿಕಾಪ್ಟರ್ ತೀರ್ಥಯಾತ್ರೆ ಕಾರ್ಯಾಚರಣೆ ನಡೆಸಲು ಸುತ್ತೋಲೆ ಹೊರಡಿಸಿತ್ತು. ಹೆಲಿಕಾಪ್ಟರ್ ಆಪರೇಟರ್‌ಗಳ ಜವಾಬ್ದಾರಿಗಳನ್ನು ಮತ್ತು ಸುರಕ್ಷಿತ ಮತ್ತು ಸುಗಮ ಹೆಲಿಕಾಪ್ಟರ್ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಆಯಾ ಜಿಲ್ಲಾಡಳಿತಕ್ಕೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

IRCTC To Start Helicopter Services to Kedarnath Dham, cheak details here

ಶ್ರೀ ಕೇದಾರನಾಥ ಧಾಮದ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಟಿಕೆಟ್ ಬುಕಿಂಗ್ ಸೇವೆಯನ್ನು ಒದಗಿಸಲು ಐಆರ್‌ಸಿಟಿಸಿ ಇತ್ತೀಚೆಗೆ ಉತ್ತರಾಖಂಡ್ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದೊಂದಿಗೆ 5 ವರ್ಷಗಳ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಧಿಕೃತ ವೆಬ್‌ಸೈಟ್ ಸೂಚನೆಯ ಪ್ರಕಾರ, "2023ಕ್ಕೆ ಶ್ರೀ ಕೇದಾರನಾಥ ಧಾಮ ಯಾತ್ರೆಗೆ ಹೆಲಿಕಾಪ್ಟರ್ ಸೇವೆಗಳನ್ನು ಐಆರ್‌ಸಿಟಿಸಿ ಹೆಲಿಯಾತ್ರಾ ವೆಬ್‌ಸೈಟ್ ಮೂಲಕ ಬುಕ್ ಮಾಡಲಾಗುತ್ತದೆ" ಎಂದಿದೆ.

ಆದರೆ, ಹೆಲಿಕಾಪ್ಟರ್ ಸೇವೆಗಳನ್ನು ಕಾಯ್ದಿರಿಸಲು, ಕೇದಾರನಾಥದ ದೇಗುಲಕ್ಕೆ ಭೇಟಿ ನೀಡಲು ಯಾತ್ರಾರ್ಥಿಗಳು ಮೊದಲು ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗುತ್ತದೆ. ಟೂರಿಸ್ಟ್ ಕೇರ್ ಉತ್ತರಾಖಂಡ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಮತ್ತು ವಾಟ್ಸಾಪ್ ಸೌಲಭ್ಯದ ಮೂಲಕ ಮೊಬೈಲ್ ಅಪ್ಲಿಕೇಶನ್ ಮೂಲಕ ಸಹ ನೋಂದಣಿ ಮಾಡಬಹುದು. ಯಾತ್ರಾರ್ಥಿಗಳು 91 8394833833 ಈ ಮೊಬೈಲ್ ಸಂಖ್ಯೆಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಯಾತ್ರಾ ಎಂದು ಟೈಪ್ ಮಾಡಬೇಕಾಗುತ್ತದೆ.

ಉತ್ತರಾಖಂಡದ ಚಾರ್ ಧಾಮ್ ಯಾತ್ರೆಯು ಭಾರತದ ಅತ್ಯಂತ ಜನಪ್ರಿಯ ಹಿಂದೂ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಈ ತೀರ್ಥಯಾತ್ರೆಯು ನಾಲ್ಕು ಪವಿತ್ರ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಕರೆದುಕೊಂಡು ಹೋಗುತ್ತದೆ. ಏಪ್ರಿಲ್ 25 ರಂದು ಕೇದಾರನಾಥ ಧಾಮದ ಬಾಗಿಲುಗಳು ಮತ್ತು ಏಪ್ರಿಲ್ 27 ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಿದ್ದು, ಗಂಗೋತ್ರಿ ದೇವಾಲಯ ಸಮಿತಿಯು ಏಪ್ರಿಲ್ 22 ರಂದು ಅಕ್ಷಯ ತೃತೀಯದಿಂದ ದೇವಾಲಯದ ಬಾಗಿಲು ತೆರೆಯಲಿದೆ.

IRCTC To Start Helicopter Services to Kedarnath Dham, cheak details here

ಚಾರ್ ಧಾಮ್ ಯಾತ್ರೆಗೆ ಒಟ್ಟು 6.34 ಲಕ್ಷ ಭಕ್ತರು ನೋಂದಣಿ ಮಾಡಿಕೊಂಡಿದ್ದು, ಕೇದಾರನಾಥ ಧಾಮಕ್ಕೆ 2.41 ಲಕ್ಷ, ಯಮನೋತ್ರಿಗೆ 95,107 ಮತ್ತು ಗಂಗೋತ್ರಿ ಧಾಮಕ್ಕೆ 96,449 ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಭಾನುವಾರ ತಿಳಿಸಿದೆ.

ಮಾರ್ಚ್ 25 ರಂದು, ಗಡ್ವಾಲ್ ವಿಭಾಗದ ಗುರುತಿಸಲಾದ ವೈದ್ಯಕೀಯ ಘಟಕಗಳಲ್ಲಿ ಆರೋಗ್ಯ ತಪಾಸಣೆಗಾಗಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಡೈರೆಕ್ಟರ್ ಜನರಲ್, ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕರು ಮತ್ತು ಸಿಎಸ್ಆರ್ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ (ಎಚ್‌ಪಿಇ) ನಡುವೆ ಸಹಿ ಹಾಕಲಾಯಿತು.

ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಎಟಿಎಂ (ATM) ಅನ್ನು ಸ್ಥಾಪಿಸಲಾಗುವುದು. ಈ ಸೌಲಭ್ಯದಿಂದ ಭಕ್ತರಿಗೆ ಸಾಕಷ್ಟು ಅನುಕೂಲವಾಗಲಿದೆ. ಚಾರ್ ಧಾಮ್ ಯಾತ್ರೆ ಮಾರ್ಗದಲ್ಲಿ ವೈದ್ಯಕೀಯ ಸೌಲಭ್ಯಗಳು ಸಿಗಲಿವೆ. ಈ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಡೈರೆಕ್ಟರ್ ಜನರಲ್, ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕರು ಮತ್ತು ಸಿಎಸ್ಆರ್ ಹೆವ್ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸ್ (ಎಚ್‌ಪಿಇ) ಒಪ್ಪಂದ ಮಾಡಿಕೊಂಡಿವೆ.

ಇನ್ನು, ಏಪ್ರಿಲ್ 15 ರೊಳಗೆ ಪ್ರಯಾಣದ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು ಎಂದು ಸಿಎಂ ಪುಷ್ಕರ್ ಸಿಂ ಧಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯಾತ್ರಾ ಮಾರ್ಗದ ರಸ್ತೆಗಳ ಸುಧಾರಣೆಯ ಜೊತೆಗೆ ಪ್ರಯಾಣಿಕರ ಅನುಕೂಲಕ್ಕೆ ಸಂಬಂಧಿಸಿದ ವ್ಯವಸ್ಥೆಗಳ ಬಗ್ಗೆ ಪರಿಣಾಮಕಾರಿ ಯೋಜನೆಯೊಂದಿಗೆ ಕೆಲಸ ಮಾಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+