ವೆಬ್ಸೈಟ್ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು!
ನವದೆಹಲಿ, ಮೇ 30: ಭಾರತೀಯ ರೈಲ್ವೆಯ ಅನೇಕ ಕುಂದುಕೊರತೆಗಳನ್ನು ಸರಿಪಡಿಸಲು ಟ್ವಿಟ್ಟರ್ ಸುಲಭ ಮತ್ತು ಸರಳ ಸಂಹವನ ಮಾರ್ಗವಾಗಿ ದೊರಕಿದೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ನೆರವಾಗುವ, ಟಿಕೆಟ್ ಬುಕಿಂಗ್ ವೇಳೆ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಇಂಡಿಯನ್ ರೈಲ್ವೇ ಸೇವಾ ಟ್ವಿಟ್ಟರ್ ಖಾತೆ ಸ್ಪಂದಿಸುತ್ತಿದೆ.
ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ಭಾರತೀಯ ರೈಲ್ವೆ ಯಡವಟ್ಟು ಮಾಡಿಕೊಳ್ಳುವ ತಮ್ಮ ಬಳಕೆದಾರರ ಕಾಲೆಳೆಯುವುದರಲ್ಲಿಯೂ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ.
ಐಆರ್ಸಿಟಿಸಿ (ಭಾರತೀಯ ರೈಲ್ವೆ) ಆಪ್ ಬಳಕೆದಾರ ಆನಂದ್ ಕುಮಾರ್ ಎಂಬುವವರು ರೈಲ್ವೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ವೀಟ್ ಮಾಡಿದ್ದರು. ತಮ್ಮ ದೂರಿನಲ್ಲಿ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಟ್ವೀಟ್ ಮಾಡಿದ್ದರು.

ಐಆರ್ಸಿಟಿಸಿ ಆಪ್ ತೆರೆದರೆ ಅಶ್ಲೀಲ ಜಾಹೀರಾತುಗಳೇ ಕಾಣಿಸುತ್ತಿವೆ ಎಂದು ಅವರು ಆರೋಪಿಸಿದ್ದರು. ಮೊಬೈಲ್ನಲ್ಲಿ ಕಾಣಿಸಿಕೊಂಡ ಜಾಹೀರಾತುಗಳ ಸ್ಕ್ರೀನ್ ಶಾಟ್ ಕೂಡ ತೆಗೆದು ಕಳುಹಿಸಿದ್ದರು.
'ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ಆಪ್ನಲ್ಲಿ ಪದೇ ಪದೇ ಅಶ್ಲೀಲ ಮತ್ತು ಅಸಹ್ಯಕರ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಇದು ತುಂಬಾ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡುತ್ತಿದೆ. ರೈಲ್ವೆ ಸಚಿವಾಲಯ, ಐಆರ್ಸಿಟಿಸಿ ಅಧಿಕಾರಿಗಳು ಮತ್ತು ಪಿಯೂಷ್ ಗೋಯಲ್ ದಯವಿಟ್ಟು ಇದರತ್ತ ಗಮನ ಹರಿಸಿ' ಎಂದು ಆನಂದ್ ಕುಮಾರ್ ಟ್ವೀಟ್ ಮಾಡಿದ್ದರು.
ಇದಕ್ಕೆ ಐಆರ್ಸಿಟಿಸಿಯ ಗ್ರಾಹಕ ಕೇಂದ್ರದ ಖಾತೆಯಲ್ಲಿ ತಮಾಷೆಯಾಗಿ ಕಾಳೆಯುವ ಪ್ರತಿಕ್ರಿಯೆ ನೀಡಲಾಗಿದೆ. ಮೊದಲು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡಿಕೊಳ್ಳಿ ಎಂದು ಅದು ಸಲಹೆ ನೀಡಿದೆ.
#JCBkikhudai ki sari limelight le gaya anand kumar #JCBKiKhudaai #IRCTC pic.twitter.com/3wcMAoOhyU
— Gulshan (@jalazverma) 29 May 2019
'ಜಾಹೀರಾತುಗಳನ್ನು ಪೂರೈಸಲು ಐಆರ್ಸಿಟಿಸಿ ಗೂಗಲ್ನ ಜಾಹೀರಾತು ಸೇವಾ ಸಾಧನ ಎಡಿಎಕ್ಸ್ಅನ್ನು ಬಳಸುತ್ತಿದೆ. ಈ ಜಾಹೀರಾತುಗಳು ಬಳಕೆದಾರರನ್ನು ಗುರಿಯಾಗಿಸಲು ಕುಕಿಗಳನ್ನು ಬಳಸುತ್ತದೆ. ಬಳಕೆದಾರನ ಬ್ರೌಸಿಂಗ್ ಇತಿಹಾಸ ಮತ್ತು ಬ್ರೌಸಿಂಗ್ ನಡತೆಗಳಿಗೆ ಅನುಗುಣವಾಗಿ ಜಾಹೀರಾತುಗಳು ಬರುತ್ತವೆ. ಇಂತಹ ಜಾಹೀರಾತುಗಳನ್ನು ತಡೆಯಲು ಎಲ್ಲ ಬ್ರೌಸರ್ ಕುಕಿಗಳನ್ನು ಹಾಗೂ ಹಿಸ್ಟರಿಯನ್ನು ಸ್ವಚ್ಛಗೊಳಿಸಿ ಮತ್ತು ಅಳಿಸಿ ಹಾಕಿ' ಎಂದು ಐಆರ್ಸಿಟಿಸಿ ಅಧಿಕೃತ ಖಾತೆ ಪ್ರತಿಕ್ರಿಯೆ ನೀಡಿದೆ.
ಐಆರ್ಸಿಟಿಸಿ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ಟ್ವಿಟ್ಟರ್ನಲ್ಲಿ ತಮಾಷೆಯ ಮೀಮ್ಸ್ಗಳ ಮಹಾಪೂರವೇ ಹರಿದುಬರುತ್ತಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications