ಇಸ್ರೋದಿಂದ ಮತ್ತೊಂದು ವಿಕ್ರಮ, ಆಸ್ಟ್ರೋಸ್ಯಾಟ್ ಉಡಾವಣೆ
ಶ್ರೀಹರಿಕೋಟಾ, ಸೆ. 28: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಪ್ರಪ್ರಥಮ ಬಾರಿಗೆ ಭಾರತ ತನ್ನದೇ ಆದ ಟೆಲಿಸ್ಕೋಪ್ ವೊಂದನ್ನು ಬಾಹ್ಯಾಕಾಶದಲ್ಲಿ ಹೊಂದಬಹುದಾಗಿದೆ. ಆಸ್ಟ್ರೋಸ್ಯಾಟ್ ಸೇರಿದಂತೆ ವಿದೇಶದ 6 ಉಪಗ್ರಹಗಳನ್ನು ಹೊಂದಿದ್ದ ಪಿಎಸ್ ಎಲ್ ವಿ ಸಿ 30 ರಾಕೆಟ್ ಯಶಸ್ವಿಯಾಗಿ ಸೋಮವಾರ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದೆ.
ಸುಮಾರು 320 ಟನ್ ತೂಗುವ ವಿಶಿಷ್ಟ ಉಪಗ್ರಹ ಆಸ್ಟ್ರೋಸ್ಯಾಟ್ ಮೂಲಕ ಬ್ರಹ್ಮಾಂಡ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ವಿಜ್ಞಾನಿಗಳು ಯೋಜನೆ ಹಾಕಿಕೊಂಡಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ತನ್ನದೇ ಆದ ಬಾಹ್ಯಾಕಾಶ ನಿರ್ವಹಣಾ ಉಪಗ್ರಹ ಹೊಂದಿರುವ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿದೆ.
Polar Satellite launch vehicle PSLV C-30 carrying India’s satellite Astrosat launched from Sriharikota. pic.twitter.com/gN7KU1kaoS
— ANI (@ANI_news) September 28, 2015 ಚೀನಾ ಕೂಡಾ ಈ ರೀತಿಯ ಬಾಹ್ಯಾಕಾಶ ಅಬ್ಸವೇಟರಿ ಹೊಂದಿಲ್ಲ. ಯುಎಸ್ಎ, ಯುರೋಪಿಯನ್ ಯೂನಿಯನ್ ಹಾಗೂ ಜಪಾನ್ ಮಾತ್ರ ಬಾಹ್ಯಾಕಾಶದಲ್ಲಿ ತಮ್ಮದೇ ಟೆಲಿಸ್ಕೋಪ್ ಸ್ಥಾಪಿಸಿ ಸಂಶೋಧನೆ ನಡೆಸುತ್ತಿವೆ.
ಆಸ್ಟ್ರೋಸ್ಯಾಟ್ ನಿಂದ ಇಸ್ರೋಗಿರುವ ನಿರೀಕ್ಷೆಗಳು:
* ಕಪ್ಪುರಂಧ್ರ ಹಾಗೂ ಅವಳಿ ನಕ್ಷತ್ರ ಪುಂಜಗಳಲ್ಲಿನ ಶಕ್ತಿ ಪ್ರಕ್ರಿಯೆಯ ಮೇಲೆ ನಿಗಾ ಇರಿಸುವುದು
* ನ್ಯೂಟ್ರಾನ್ ನಕ್ಷತ್ರಗಳ ಕಾಂತಕ್ಷೇತ್ರಗಳ ಅಂದಾಜು ಲೆಕ್ಕಾಚಾರ.
* ನಮ್ಮ ಗ್ಯಾಲಕ್ಸಿ ಇಂದ ಆಚೆ ಇರುವ ನಕ್ಷತ್ರ ಪುಂಜಗಳ ಶಕ್ತಿ ಪ್ರಕ್ರಿಯೆಮ್ ನಕ್ಷತ್ರಗಳ ಹುಟ್ಟಿನ ಬಗ್ಗೆ ಅಧ್ಯಯನ
* ಆಕಾಶದಲ್ಲಿರುವ ಅತಿ ಪ್ರಬಲ ಎಕ್ಸರೇ ಕಿರಣ ಪತ್ತೆ ಕಾರ್ಯ
* ನೇರಳಾತೀತ ಪ್ರದೇಶದಲ್ಲಿ ಬ್ರಹ್ಮಾಂಡ ಕುರಿತ ಸೀಮಿತ ಕ್ಷೇತ್ರ ಸಮೀಕ್ಷೆ ಹಾಗೂ ಅಧ್ಯಯನ
ಇದಲ್ಲದೆ, ವಿವಿಧ ಆಕಾಶಕಾಯಗಳ ರಚನೆ ವಿನ್ಯಾಸ ವಿವರಗಳು, ಕಪ್ಪುರಂಧ್ರ, ಧೂಮಕೇತು, ಗ್ರಹಗಳು, ನಕ್ಷತ್ರಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಮೇಲೆ ಸದಾ ನಿಗಾ ಇಡಲು ನಮ್ಮದೇ ಆದ ಒಂದು ಸಾಧನೆ ನಮಗಾಗಿ ಬಾಹ್ಯಾಕಾಶದಲ್ಲಿ ಸದಾಕಾಲ ಕಾರ್ಯನಿರ್ವಹಿಸಲಿದೆ.
PSLV-C30 successfully launches ASTROSAT into the orbit pic.twitter.com/tzhDYJOP9j
— ISRO (@isro) September 28, 2015 ಭಾರತದಲ್ಲಿ ಭೂ ಸ್ಥಿರ ಟೆಲಿಸ್ಕೋಪ್ ಗಳನ್ನು ಪುಣೆ ಹಾಗೂ ಲಡಾಕ್ ನಲ್ಲಿ ಹೊಂದಿದೆ. ಈ ಟೆಲಿಸ್ಕೋಪ್ ಗಳು ರೇಡಿಯೋ ತರಂಗಗಳು ಹಾಗೂ ಇನ್ ಫ್ರಾ ರೆಡ್ ಕಿರಣಗಳನ್ನು ಮಾತ್ರ ಗುರುತಿಸಬಲ್ಲುದು. ಹೆಚ್ಚಿನ ಫ್ರಿಕ್ವೆನ್ಸಿಯಲ್ಲಿರುವ ಅತಿನೇರಳೆ ವಿಕಿರಣ(UV rays), ಎಕ್ಸ್ ರೇ ಹಾಗೂ ಗಾಮಾ ರೇ ಗಳನ್ನು ಗುರುತಿಸಲು ತಡೆಗಟ್ಟಲು ಬೇಕಾದ ಮಾಹಿತಿ ಪಡೆಯಲು ಇತರೆ ದೇಶ ಹೆಚ್ಚಾಗಿ ನಾಸಾದ ಮೊರೆ ಹೋಗಬೇಕಿತ್ತು. ಅದರೆ, ಈಗ ಯಾವುದೇ ನಕ್ಷತ್ರಗಳಿಂದ ಬರುವ ಕಿರಣಗಳು ಭೂಮಿಯ ವಾತಾವರಣದ ಒಳಹೊಕ್ಕುವ ಮುಂಚೆಯೇ ಮಾಹಿತಿ ಸಿಗುತ್ತದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications