ಇಸ್ರೋದಿಂದ ಮತ್ತೊಂದು ವಿಕ್ರಮ, ಆಸ್ಟ್ರೋಸ್ಯಾಟ್ ಉಡಾವಣೆ
ಶ್ರೀಹರಿಕೋಟಾ, ಸೆ. 28: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಪ್ರಪ್ರಥಮ ಬಾರಿಗೆ ಭಾರತ ತನ್ನದೇ ಆದ ಟೆಲಿಸ್ಕೋಪ್ ವೊಂದನ್ನು ಬಾಹ್ಯಾಕಾಶದಲ್ಲಿ ಹೊಂದಬಹುದಾಗಿದೆ. ಆಸ್ಟ್ರೋಸ್ಯಾಟ್ ಸೇರಿದಂತೆ ವಿದೇಶದ 6 ಉಪಗ್ರಹಗಳನ್ನು ಹೊಂದಿದ್ದ ಪಿಎಸ್ ಎಲ್ ವಿ ಸಿ 30 ರಾಕೆಟ್ ಯಶಸ್ವಿಯಾಗಿ ಸೋಮವಾರ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದೆ.
ಸುಮಾರು 320 ಟನ್ ತೂಗುವ ವಿಶಿಷ್ಟ ಉಪಗ್ರಹ ಆಸ್ಟ್ರೋಸ್ಯಾಟ್ ಮೂಲಕ ಬ್ರಹ್ಮಾಂಡ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ವಿಜ್ಞಾನಿಗಳು ಯೋಜನೆ ಹಾಕಿಕೊಂಡಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ತನ್ನದೇ ಆದ ಬಾಹ್ಯಾಕಾಶ ನಿರ್ವಹಣಾ ಉಪಗ್ರಹ ಹೊಂದಿರುವ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿದೆ.
Polar Satellite launch vehicle PSLV C-30 carrying India’s satellite Astrosat launched from Sriharikota. pic.twitter.com/gN7KU1kaoS
— ANI (@ANI_news) September 28, 2015 ಚೀನಾ ಕೂಡಾ ಈ ರೀತಿಯ ಬಾಹ್ಯಾಕಾಶ ಅಬ್ಸವೇಟರಿ ಹೊಂದಿಲ್ಲ. ಯುಎಸ್ಎ, ಯುರೋಪಿಯನ್ ಯೂನಿಯನ್ ಹಾಗೂ ಜಪಾನ್ ಮಾತ್ರ ಬಾಹ್ಯಾಕಾಶದಲ್ಲಿ ತಮ್ಮದೇ ಟೆಲಿಸ್ಕೋಪ್ ಸ್ಥಾಪಿಸಿ ಸಂಶೋಧನೆ ನಡೆಸುತ್ತಿವೆ.
ಆಸ್ಟ್ರೋಸ್ಯಾಟ್ ನಿಂದ ಇಸ್ರೋಗಿರುವ ನಿರೀಕ್ಷೆಗಳು:
* ಕಪ್ಪುರಂಧ್ರ ಹಾಗೂ ಅವಳಿ ನಕ್ಷತ್ರ ಪುಂಜಗಳಲ್ಲಿನ ಶಕ್ತಿ ಪ್ರಕ್ರಿಯೆಯ ಮೇಲೆ ನಿಗಾ ಇರಿಸುವುದು
* ನ್ಯೂಟ್ರಾನ್ ನಕ್ಷತ್ರಗಳ ಕಾಂತಕ್ಷೇತ್ರಗಳ ಅಂದಾಜು ಲೆಕ್ಕಾಚಾರ.
* ನಮ್ಮ ಗ್ಯಾಲಕ್ಸಿ ಇಂದ ಆಚೆ ಇರುವ ನಕ್ಷತ್ರ ಪುಂಜಗಳ ಶಕ್ತಿ ಪ್ರಕ್ರಿಯೆಮ್ ನಕ್ಷತ್ರಗಳ ಹುಟ್ಟಿನ ಬಗ್ಗೆ ಅಧ್ಯಯನ
* ಆಕಾಶದಲ್ಲಿರುವ ಅತಿ ಪ್ರಬಲ ಎಕ್ಸರೇ ಕಿರಣ ಪತ್ತೆ ಕಾರ್ಯ
* ನೇರಳಾತೀತ ಪ್ರದೇಶದಲ್ಲಿ ಬ್ರಹ್ಮಾಂಡ ಕುರಿತ ಸೀಮಿತ ಕ್ಷೇತ್ರ ಸಮೀಕ್ಷೆ ಹಾಗೂ ಅಧ್ಯಯನ
ಇದಲ್ಲದೆ, ವಿವಿಧ ಆಕಾಶಕಾಯಗಳ ರಚನೆ ವಿನ್ಯಾಸ ವಿವರಗಳು, ಕಪ್ಪುರಂಧ್ರ, ಧೂಮಕೇತು, ಗ್ರಹಗಳು, ನಕ್ಷತ್ರಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಮೇಲೆ ಸದಾ ನಿಗಾ ಇಡಲು ನಮ್ಮದೇ ಆದ ಒಂದು ಸಾಧನೆ ನಮಗಾಗಿ ಬಾಹ್ಯಾಕಾಶದಲ್ಲಿ ಸದಾಕಾಲ ಕಾರ್ಯನಿರ್ವಹಿಸಲಿದೆ.
PSLV-C30 successfully launches ASTROSAT into the orbit pic.twitter.com/tzhDYJOP9j
— ISRO (@isro) September 28, 2015 ಭಾರತದಲ್ಲಿ ಭೂ ಸ್ಥಿರ ಟೆಲಿಸ್ಕೋಪ್ ಗಳನ್ನು ಪುಣೆ ಹಾಗೂ ಲಡಾಕ್ ನಲ್ಲಿ ಹೊಂದಿದೆ. ಈ ಟೆಲಿಸ್ಕೋಪ್ ಗಳು ರೇಡಿಯೋ ತರಂಗಗಳು ಹಾಗೂ ಇನ್ ಫ್ರಾ ರೆಡ್ ಕಿರಣಗಳನ್ನು ಮಾತ್ರ ಗುರುತಿಸಬಲ್ಲುದು. ಹೆಚ್ಚಿನ ಫ್ರಿಕ್ವೆನ್ಸಿಯಲ್ಲಿರುವ ಅತಿನೇರಳೆ ವಿಕಿರಣ(UV rays), ಎಕ್ಸ್ ರೇ ಹಾಗೂ ಗಾಮಾ ರೇ ಗಳನ್ನು ಗುರುತಿಸಲು ತಡೆಗಟ್ಟಲು ಬೇಕಾದ ಮಾಹಿತಿ ಪಡೆಯಲು ಇತರೆ ದೇಶ ಹೆಚ್ಚಾಗಿ ನಾಸಾದ ಮೊರೆ ಹೋಗಬೇಕಿತ್ತು. ಅದರೆ, ಈಗ ಯಾವುದೇ ನಕ್ಷತ್ರಗಳಿಂದ ಬರುವ ಕಿರಣಗಳು ಭೂಮಿಯ ವಾತಾವರಣದ ಒಳಹೊಕ್ಕುವ ಮುಂಚೆಯೇ ಮಾಹಿತಿ ಸಿಗುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications