ಭಾರತ ಸ್ಟಾರ್ಟ್ ಅಪ್ ರಾಜಧಾನಿ ಆಗಲಿದೆ: ಮೋದಿ
ಬೆಂಗಳೂರು, ಡಿ. 27: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಆಕಾಶವಾಣಿ ಕಾರ್ಯಕ್ರಮದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ಬಗ್ಗೆ ಮಾತನಾಡಿ, ವಿಶ್ವದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಭಾರತವನ್ನು ಬೆಳಸಬೇಕಿದೆ ಎಂದರು.ಈ ಬಗ್ಗೆ ಹೊಸ ಯೋಜನೆಯನ್ನು ಜನವರಿ 16ರಂದು ಘೋಷಿಸುವುದಾಗಿ ಹೇಳಿದರು.
ಪ್ರಧಾನಿ ಅವರು ತಮ್ಮ 15ನೇ ಮನದ ಮಾತು ಕಾರ್ಯಕ್ರಮದಲ್ಲಿ ಮೊದಲಿಗೆ ಸಮಸ್ತ ನಾಗರಿಕರಿಗೆ ಕ್ರಿಸ್ ಮಸ್ ಹಾಗೂ ಹೊಸ್ ವರ್ಷಾಚರಣೆಯ ಶುಭ ಹಾರೈಕೆ ಸಲ್ಲಿಸಿದರು.

ನಂತರ ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆ, ಗ್ರಾಮಗಳ ನೈರ್ಮಲೀಕರಣ, ವಿದ್ಯುತೀಕರಣ, ನರೇಂದ್ರ ಮೋದಿ ಅಪ್ಲಿಕೇಷನ್, ರಾಷ್ಟ್ರೀಯ ಯುವ ದಿನ, ವಿಕಲಾಂಗರನ್ನು ಯಾವ ಹೆಸರಿನಲ್ಲಿ ಕರೆಯಬೇಕು? ಪಹಲ್ ಯೋಜನೆ ಗಿನ್ನಿಸ್ ದಾಖಲೆ ಬಗ್ಗೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.
ಸ್ಟಾರ್ಟ್ ಅಪ್ ಇಂಡಿಯಾ: ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಯೋಜನೆ ಬಗ್ಗೆ ಜನವತರಿ 16ರಂದು ಪ್ರಕಟಣೆ ಹೊರಡಿಸಲಾಗುತ್ತದೆ.
ವಿಶ್ವದ ಸ್ಟಾರ್ಟ್ ಅಪ್ ಕಂಪನಿಗಳ ರಾಜಧಾನಿಯಾಗಿ ಭಾರತವನ್ನು ರೂಪಿಸುವತ್ತ ನಾವು ಹೆಜ್ಜೆ ಹಾಕಬೇಕಿದೆ. ದೇಶದ ಐಐಟಿ, ಐಐಎಂ ಇನ್ನಿತರ ವಿದ್ಯಾಸಂಸ್ಥೆಗಳ ಜೊತೆ ನೇರ ಸಂಪರ್ಕ ಒದಗಿಸಲಾಗುವುದು ಎಂದರು. 15ನೇಮನ್ ಕಿ ಬಾತ್ ಕಾರ್ಯಕ್ರಮದ ವಿಡಿಯೋ:
* ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಉತ್ತಮ ಚರ್ಚೆಯೊಂದಿಗೆ ಸಂಸತ್ತಿನಲ್ಲಿ ಆವರಿಸಲಾಗುವುದು.
* ದೇಶದ ನೂರಾರು ಕೋಟಿ ಮಂದಿ ತಮ್ಮ ಕರ್ತವ್ಯವನ್ನು ನಿಭಾಯಿಸುವ ಅವಶ್ಯಕತೆ ಇದೆ. ಜನವರಿ 26ರಂದು ಈ ಬಗ್ಗೆ ಶಾಲೆಗಳಲ್ಲಿ ಪ್ರಬಂಧ, ಚರ್ಚಾ ಸ್ಪರ್ಧೆ ಏರ್ಪಡಲಿದೆ.
* ಎಲ್ ಪಿಜಿ ಸಬ್ಸಿಡಿ ಹಿಂತಿರುಗಿಸುವ ಕ್ರಿಯೆ, ಪಹಲ್ ಯೋಜನೆ ಮೂಲಕ 15ಕೋಟಿ ಜನರಿಗೆ ಉಪಯೋಗವಾಗಿದೆ.
* ಎಂನರೇಗಾ ಯೋಜನೆ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಸೇರಲಿದೆ. ಒಟ್ಟಾರೆ 40,000 ಕೋಟಿ ಮೊತ್ತ ನೇರವಾಗಿ ಬ್ಯಾಂಕ್ ಸೇರುತ್ತಿದ್ದು ಹೊಸ ದಾಖಲೆಯಾಗಿದೆ.
* ವಿಕಲಾಂಗರು ಎನ್ನಬೇಡಿ ಅವರನ್ನು ದಿವ್ಯಾಂಗರು ಎಂದು ಕರೆಯಿರಿ. ವಿಶೇಷ ಚೇತನವುಳ್ಳ ಇವರನ್ನು ಎಲ್ಲರಂತೆ ಕಾಣಬೇಕಿದೆ. ತಂತ್ರಜ್ಞಾನದ ನೆರವಿನಿಂದ ಇವರು ಕೂಡಾ ನೆಮ್ಮದಿಯ ಬದುಕು ಕಾಣಬಹುದಾಗಿದೆ.
* ಈ ಬಾರಿಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮದಿನ)ಜನವರಿ 12ರಂದು ಆಚರಣೆಗೂ ಮುನ್ನ ನಿಮ್ಮ ಸಲಹೆ ಸೂಚನೆಯನ್ನು ನಾನು ನರೇಂದ್ರ ಮೋದಿ ಅಪ್ಲಿಕೇಷನ್ ಮೂಲಕ ಪಡೆಯಲು ಬಯಸಿದ್ದೇನೆ.
* ಗ್ರಾಮಗಳಲ್ಲಿನ ಶೌಚಾಲಯ ನೈರ್ಮಲೀಕರಣದಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ದಿಲಿಪ್ ಸಿಂಗ್ ಮಾಳವೀಯ ಅವರನ್ನು ಅಭಿನಂದಿಸುತ್ತೇನೆ. ಪ್ರವಾಸಿ ತಾಣಗಳು, ಹಳ್ಳಿಗಳಲ್ಲಿನ ಸ್ವಚ್ಛತೆಗಾಗಿ ನಾವು ಶ್ರಮಿಸಬೇಕಿದೆ. 'ಅತಿಥಿ ದೇವೋ ಭವ' ಉಕ್ತಿಯನ್ನು ಸಾಕಾರಗೊಳಿಸಬೇಕಿದೆ.
* ಹಬ್ಬದ ಆಚರಣೆ ಜೊತೆಗೆ ಆರ್ಥಿಕ ಪ್ರಗತಿ, ಉದ್ಯೋಗಕ್ಕೂ ಹೊಸ ವರ್ಷ ಹೊಸ ಅವಕಾಶಗಳನ್ನು ತರಲಿ ಎಂದು ಆಶಿಸುತ್ತೇನೆ.
(ಒನ್ ಇಂಡಿಯಾ ಸುದ್ದಿ)
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications