Gujarat Assembly Elections 2022: ಮೋದಿಗೆ ತಮ್ಮದೇ ದಾಖಲೆ ಮುರಿಯುವ ಬಯಕೆ
ಅಹಮದಾಬಾದ್, ನವೆಂಬರ್ 7: ತವರು ರಾಜ್ಯ ಗುಜರಾತ್ನಲ್ಲಿ ತಮ್ಮದೇ ಆದ ಚುನಾವಣಾ ದಾಖಲೆಯನ್ನು ಮುರಿಯುವ ಬಯಕೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯನ್ನು ಗೆಲ್ಲುವಲ್ಲಿ ತಮ್ಮದೇ ದಾಖಲೆಯನ್ನು ಮುರಿಯಲು ತಮ್ಮನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗುಜರಾತ್ನ ಜನರಿಗೆ ಮನವಿ ಮಾಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ಮಾಡಿಕೊಂಡ ಮತದಾರರನ್ನು ಸೆಳೆಯಲು ಮುಂದಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನಾಯಕತ್ವದಲ್ಲಿ ತಮ್ಮ ಪಕ್ಷವು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಬೇಕು ಎಂದು ಅವರು ಪರೋಕ್ಷವಾಗಿ ಸುಳಿವು ನೀಡಿದರು. ಮೋದಿ ಅವರ ಎಲ್ಲಾ ಹಳೆಯ ದಾಖಲೆಗಳನ್ನು (2002 ರ ವಿಧಾನಸಭಾ ಚುನಾವಣೆಯಲ್ಲಿ 127 ಸ್ಥಾನಗಳು) ಮುರಿದು ಈ ಬಾರಿ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಲ್ಸಾದ್ ಜಿಲ್ಲೆಯ ನಾನಾ ಪೊಂಡಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರತಿಯೊಬ್ಬ ಗುಜರಾತಿಯೂ ಹೇಗೆ ಕೊಡುಗೆ ನೀಡಿದ್ದಾರೆ ಎಂಬುದರ ಕುರಿತು ಮಾತನಾಡಿದರು. ಗುಜರಾತಿಗರ ಸಹಕಾರದಿಂದ "ನಾನು ಗುಜರಾತ್ ಉಳಿದಿದ್ದೇನೆ" ಎಂಬ ಹೇಳಿದರು.

ತಮ್ಮದೇ ದಾಖಲೆ ಮುರಿಯುವ ಬಯಕೆ ಹೊಂದಿದೆ ಮೋದಿ
20 ವರ್ಷಗಳ ಹಿಂದೆ ಬುಡಕಟ್ಟು ಪ್ರದೇಶಗಳು ಅಭಿವೃದ್ಧಿ ಹೊಂದಿಲ್ಲ ಎಂದು ಮೋದಿ ಬುಡಕಟ್ಟು ಜನಾಂಗದವರಿಗೆ ಹೇಳಿದರು. ಹೀಗಾಗಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಬುಡಕಟ್ಟು ವಲಯದ ಅಭಿವೃದ್ಧಿಯನ್ನು ಪ್ರಾರಂಭಿಸಿದೆ. ಅವರಿಗೆ ಸೂಕ್ತವಾದ ಶಿಕ್ಷಣ ತಲುಪಿದೆ ಎಂದರು.
ಬಿಜೆಪಿ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ 'ಕನ್ಯಾ ಕೆಳವಾಣಿ' ಮೂಲಕ ಗಮನಹರಿಸಿತು. ಇದು 20 ವರ್ಷಗಳ ನಂತರ ಫಲಿತಾಂಶವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಮೀನುಗಾರ ಸಮುದಾಯದ ಅಭಿವೃದ್ಧಿ ಮತ್ತು ಪ್ರಗತಿಗಾಗಿ, ಬಿಜೆಪಿ ಅನೇಕ ಮೀನುಗಾರಿಕೆ ಬಂದರುಗಳನ್ನು ಅಭಿವೃದ್ಧಿಪಡಿಸಿದೆ. ಅವರಿಗೆ ಮೀನುಗಾರಿಕೆ ಸುಲಭವಾಗಿದೆ ಎಂದು ಮೋದಿ ಹೇಳಿದರು.

10 ವರ್ಷಗಳ ಸಾಧನೆ ಹಂಚಿಕೊಂಡ ಮೋದಿ
10 ವರ್ಷಗಳ ಹಿಂದೆ ವಿದ್ಯುತ್ ಸರಬರಾಜು ಎಲ್ಲರಿಗೂ ತಲುಪಲಿಲ್ಲ ಮತ್ತು ದಿನದಲ್ಲಿ ಒಂದು ಭಾಗಕ್ಕೆ ಲಭ್ಯವಿತ್ತು. ಸಂಜೆ ಜನರು ಊಟಕ್ಕೆ ಕುಳಿತಾಗ ವಿದ್ಯುತ್ ಇರಲಿಲ್ಲ. ಆದರೆ ಈಗ ದೂರದ ಪ್ರದೇಶದ ಜನರು ತಡೆರಹಿತ ವಿದ್ಯುತ್ ಸರಬರಾಜು ಸೌಲಭ್ಯವನ್ನು ಪಡೆಯುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಅದೇ ರೀತಿ ಪ್ರತಿ ಮನೆಗೆ ನಲ್ಲಿಯ ಮೂಲಕ ನೀರು ತಲುಪಿಸಲಾಗಿದೆ ಎಂದು ಮೋದಿ ಹೇಳಿದರು.

ಗುಜರಾತ್ನಲ್ಲಿ ಮತ್ತೆ ಬಿಜೆಪಿ ಬರಲಿದೆ- ನಡ್ಡಾ
ಇನ್ನೂ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷವು 'ಆರಾಮವಾಗಿ' ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ, "ನಾವು ಸಂಪ್ರದಾಯವನ್ನು ಬದಲಾಯಿಸುತ್ತೇವೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳುತ್ತೇವೆ" ಎಂದು ಹೇಳಿದರು.
"ನಾವು 365 ದಿನ 24x7 ಜನರಿಗಾಗಿ ಕೆಲಸ ಮಾಡುತ್ತೇವೆ. ಹಿಮಾಚಲ ಪ್ರದೇಶ ನನ್ನ ತವರು ರಾಜ್ಯ, ಆದರೆ ನಾನು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ, ನನಗೆ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ, ಯಾವುದೇ ವೈಯಕ್ತಿಕ ಪಾಲನ್ನು ಹೊಂದಿಲ್ಲ. ಬಿಜೆಪಿ ಒಂದು ಸಿದ್ಧಾಂತ ಆಧಾರಿತ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿನ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ. ಭಾರಿ ಜನಬೆಂಬಲದಿಂದಾಗಿ ಅವರು ಮತ್ತೆ ಆಡಳಿತಕ್ಕೆ ಬರುತ್ತಾರೆ'' ಎಂದರು. ಗುಜರಾತ್ನಲ್ಲಿ, ನಡ್ಡಾ "ನಮ್ಮ ಪ್ರಮುಖ ಹೋರಾಟ ಕಾಂಗ್ರೆಸ್ನೊಂದಿಗೆ, ಎಎಪಿ ಅಲ್ಲ. ನಮ್ಮದು ಕೇಡರ್ ಆಧಾರಿತ ಪಕ್ಷ ಮತ್ತು ಎಎಪಿ ಬ್ಯಾನರ್ ಆಧಾರಿತ ಪಕ್ಷ" ಎಂದು ಹೇಳಿದರು.

'ನಮ್ಮದು ಜವಾಬ್ದಾರಿಯುತ ಪಕ್ಷ'- ನಡ್ಡಾ
HP ಯಲ್ಲಿ ತಮ್ಮ ಪಕ್ಷದ ಸಾಧನೆಗಳನ್ನು ಪಟ್ಟಿ ಮಾಡಿದ ನಡ್ಡಾ, AIIMS, IIM ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯನ್ನು ಸ್ಥಾಪಿಸಲಾಗಿದೆ. "ಕಾಂಗ್ರೆಸ್ ಭರವಸೆಗಳನ್ನು ಈಡೇರಿಸುತ್ತದೆ ಎಂದು ಅವರ ಸ್ವಂತ ಹಿರಿಯ ನಾಯಕರೇ ನಂಬುವುದಿಲ್ಲ. ಯಾವುದೇ ಕೆಲಸವನ್ನು ಈವರೆಗೆ ಶ್ರದ್ಧೆಯಿಂದ ಮಾಡಲಾಗಿಲ್ಲ. ನಮ್ಮದು ಜವಾಬ್ದಾರಿಯುತ ಪಕ್ಷ ಮತ್ತು ನಾವು ಸಾರ್ವಜನಿಕರಿಗೆ ಮೋಸ ಮಾಡುವುದಿಲ್ಲ'' ಎಂದು ನಡ್ಡಾ ಹೇಳಿದ್ದಾರೆ.
ನಡ್ಡಾ ಅವರು ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯನ್ನು 'ಪ್ರಾಯಶ್ಚಿತ ಯಾತ್ರೆ' ಎಂದು ಕರೆದಿದ್ದಾರೆ. "ಅವರು ಮೊದಲು 15 ದಿನಗಳು ಇಲ್ಲಿಯೇ ಇರುತ್ತಾರೆ ಮತ್ತು 15 ದಿನಗಳವರೆಗೆ ವಿದೇಶಕ್ಕೆ ಹೋಗುತ್ತಾರೆ. ಇದು ಅವರ ದಾಖಲೆಯಾಗಿದೆ.












Click it and Unblock the Notifications