ರಫೆಲ್ ಡೀಲ್ ರದ್ದಾಗಲ್ಲ, ರಾಹುಲ್- ಹೊಲ್ಲಾಂಡೆ ಕೂಗಿಗೆ ಜೇಟ್ಲಿ ಬ್ರೇಕ್!
ನವದೆಹಲಿ, ಸೆಪ್ಟೆಂಬರ್ 23: ವಿವಾದಿತ ರಫೆಲ್ ಒಪ್ಪಂದದ ಬಗ್ಗೆ ಭಾರತ ಹಾಗೂ ಫ್ರಾನ್ಸಿನ ವಿಪಕ್ಷ ನಾಯಕರು ಒಂದೇ ರಾಗದಲ್ಲಿ ದನಿಯೆತ್ತಿರುವುದು ಕಾಕತಾಳೀಯವಲ್ಲ, ರಫೆಲ್ ಡೀಲ್ ರದ್ದುಗೊಳ್ಳುವುದು, ಸಿಎಜಿ ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾನುವಾರದಂದು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಫ್ರಾನ್ಸಿನ ಮಾಜಿ ಅಧ್ಯಕ್ಷ ಹೊಲ್ಲಾಂಡೆ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಬಗ್ಗೆ ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 21ರಂದು ರಫೆಲ್ ಡೀಲ್ ಬಗ್ಗೆ ಹೇಳಿಕೆ ನೀಡಿದ್ದ ಹೊಲ್ಲಾಂಡೆ, ರಿಲಯನ್ಸ್ ಜತೆ ಒಪ್ಪಂದಕ್ಕೆ ಒಳಗಾಗುವಂತೆ ಫ್ರೆಂಚ್ ಸಂಸ್ಥೆಗೆ ಭಾರತ ಸರ್ಕಾರದಿಂದ ನಿರ್ದೇಶನ ಸಿಕ್ಕಿತ್ತು ಎಂದಿದ್ದರು. ಇದಕ್ಕೂ ಮುನ್ನ ಆಗಸ್ಟ್ 30ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಮುಂಬರುವ ವಾರಗಳಲ್ಲಿ ಕೆಲವು ಬಾಂಬ್ ಗಳು ಪ್ಯಾರೀಸ್ ನಿಂದ ಸ್ಫೋಟಗೊಳ್ಳಲಿದೆ ಎಂದಿದ್ದರು.

ರಾಹುಲ್ ಗಾಂಧಿ ಅವರು ಶನಿವಾರದಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಚೌಕಿದಾರ್ ಅಲ್ಲ, ಕಳ್ಳ ಎಂದು ಜರೆದಿದ್ದರು.
ಜೇಟ್ಲಿ ಸ್ಪಷ್ಟನೆ: 2007ರ ಒಪ್ಪಂದಕ್ಕಿಂತಲೂ 2016ರ ಒಪ್ಪಂದದಲ್ಲಿ ಒಂದು ವಿಮಾನದ ಮೇಲೆ ಶೇ.20ರಷ್ಟು ದರ ಕಡಿತಗೊಳಿಸಲಾಗಿದೆ. ಬೆಲೆ ಮತ್ತು ವೆಚ್ಚದ ವಿಚಾರವನ್ನು ಸಿಎಜಿ ನೋಡಿಕೊಳ್ಳುತ್ತಿದೆ. ಮೂಲ ಒಪ್ಪಂದಕ್ಕಿಂತಲೂ ನಮ್ಮ ಒಪ್ಪಂದ ಅಗ್ಗವೋ ಅಲ್ಲವೋ ಎಂಬುದನ್ನು ಸಿಎಜಿ ಪರಿಶೀಲಿಸಲಿದೆ. ಕಾಂಗ್ರೆಸ್ ಕೂಡ ಸಿಎಜಿ ಎದುರು ತನ್ನದೇ ವಾದ ಮಂಡಿಸಿದೆ. ಶೀಘ್ರವೇ ಸತ್ಯಾಂಶ ಹೊರಬೀಳಲಿದೆ" ಎಂದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications