ಎಸ್ಪಿ- ಬಿಎಸ್ಪಿ ದೋಸ್ತಿಯ ಶಕ್ತಿ ಅರ್ಥ ಮಾಡಿಕೊಳ್ಳದೆ ಸೋತೆವು: ಯೋಗಿ
ಲಖನೌ, ಮಾರ್ಚ್ 14 : "ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಪ್ರಾಮುಖ್ಯತೆ ತಿಳಿದುಕೊಳ್ಳುವುದರಲ್ಲಿ ನಾವು ವಿಫಲ ಆದೆವು. ಅದೇ ನಮ್ಮ ಸೋಲಿಗೆ ಕಾರಣ" ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿನ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ವಿಶ್ಲೇಷಿಸಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಯೋಗಿ ಆದಿತ್ಯನಾಥ್ ಬುಧವಾರ ಈ ಬಗ್ಗೆ ಮಾತನಾಡಿ, ಪಕ್ಷದಲ್ಲಿನ ಅತಿಯಾದ ಆತ್ಮವಿಶ್ವಾಸ ಕೈ ಕೊಟ್ಟಿದೆ. ಈ ಎರಡು ಸ್ಥಾನಗಳ ಉಪ ಚುನಾವಣೆಗೆ ಹೊಸ ರಣತಂತ್ರ ರೂಪಿಸಲು ಪ್ರಯತ್ನಿಸಬೇಕಿತ್ತು ಎಂದು ಅವರ ಹೇಳಿದ್ದಾರೆ. ಉತ್ತರಪ್ರದೇಶದ ಗೋರಖ್ ಪುರ ಹಾಗೂ ಫುಲ್ ಪುರ್ ನ ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದೆ.
ಯೋಗಿ ಆದಿತ್ಯನಾಥ್ ಹಾಗೂ ಕೇಶವ ಪ್ರಸಾದ್ ಮೌರ್ಯ ಅವರಿಂದ ಎರಡು ಸ್ಥಾನಗಳು ತೆರವಾಗಿದ್ದರಿಂದ ಉಪ ಚುನಾವಣೆ ನಡೆದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಭಾರೀ ಅಂತರದಿಂದಲೇ ಜಯಿಸಿದ್ದರು. ಆದರೆ ಈಗಿನ ಉಪಚುನಾವಣೆ ಫಲಿತಾಂಶ ಉಲ್ಟಾ ಹೊಡೆದಿದೆ.
2014ರ ಲೋಕಸಭಾ ಚುನಾವಣೆ ವೇಳೆ ಎರಡೂ ಕ್ಷೇತ್ರಗಳಲ್ಲಿ ಬಂದಿದ್ದ ಫಲಿತಾಂಶದ ವಿವರ ಇಲ್ಲಿದೆ.
ಗೋರಖ್
ಪುರ
ಲೋಕಸಭಾ
ಕ್ಷೇತ್ರ
ಬಿಜೆಪಿ:
5,39,127
ಸಮಾಜವಾದಿ
ಪಕ್ಷ
:
2,26,344
ಬಹುಜನ
ಸಮಾಜ
ಪಕ್ಷ
:176412
ಕಾಂಗ್ರೆಸ್:
45719
ಫುಲ್
ಪುರ್
ಲೋಕಸಭಾ
ಕ್ಷೇತ್ರ
ಬಿಜೆಪಿ:
5,03,564
ಸಮಾಜವಾದಿ
ಪಕ್ಷ
:
1,95,256
ಬಹುಜನ
ಸಮಾಜ
ಪಕ್ಷ
:
1,63,710
ಕಾಂಗ್ರೆಸ್:
58,127