Vande Bharat Train: ವಂದೇ ಭಾರತ್ ಸಿಬ್ಬಂದಿಗೆ ಥಳಿಸಿದ ವೃದ್ಧ ಪ್ರಯಾಣಿಕ: ವಿಡಿಯೋ ವೈರಲ್
ನೀವು ಸಸ್ಯಾಹಾರಿಯೇ? ಹೌದಾದರೆ ಕೆಲವೊಮ್ಮೆ ಆಕಸ್ಮಿಕವಾಗಿ ಮಾಂಸಾಹಾರ ಸಿಗುತ್ತದೆ. ಅದನ್ನು ನೀವು ತಿಳಿಯದೆ ತಿನ್ನುತ್ತಿರಬಹುದು. ಅದು ಸಸ್ಯಾಹಾರವಲ್ಲ ಮಾಂಸಾಹಾರ ಎಂದು ನಿಮಗೆ ತಿಳಿದಾಗ ನಿಮಗೆ ಹೇಗನಿಸುತ್ತದೆ?
ಪ್ರೀಮಿಯಂ ವಂದೇ ಭಾರತ್ ರೈಲಿನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಕಳೆದ ವಾರ ಹೌರಾದಿಂದ ರಾಂಚಿಗೆ ವಂದೇ ಭಾರತ್ ರೈಲಿನಲ್ಲಿ ಮಾಂಸಾಹಾರಿ ಬಡಿಸಿದ್ದಕ್ಕಾಗಿ ವೃದ್ಧ ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದು ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಜುಲೈ 26ರಂದು ನಡೆದಿದೆ. ಈ ಘಟನೆಯ ವಿಡಿಯೋವನ್ನು ಆ ದಿನ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ-ಪ್ರಯಾಣಿಕ ಕುನಾಲ್ ವರ್ಮಾ ಅವರು ತಮ್ಮ 'ಎಕ್ಸ್' ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.
ವಯಸ್ಸಾದ ಪ್ರಯಾಣಿಕರೊಬ್ಬರು ವಂದೇ ಭಾರತ್ ರೈಲಿನಲ್ಲಿ ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ತಿಳಿಯದೆ ಮಾಂಸಾಹಾರವನ್ನು ನೀಡಲಾಯಿತು. ವಯಸ್ಸಾದ ಪ್ರಯಾಣಿಕ ಆಹಾರ ಪ್ಯಾಕೆಟ್ ಅನ್ನು ನೋಡದೆ ಅದನ್ನು ತೆರೆದು ಒಂದು ಭಾಗದಷ್ಟು ಆಹಾರವನ್ನು ತಿಂತಿದ್ದಾರೆ.
ಇದರಿಂದ ಕೋಪಗೊಂಡ ವಯಸ್ಸಾದ ಪ್ರಯಾಣಿಕ ರೈಲಿನಲ್ಲಿ ಗಲಾಟೆಯನ್ನು ಮಾಡಿದ್ದಾರೆ. ರೈಲಿನ ಕ್ಯಾಟರಿಂಗ್ ವಿಭಾಗಕ್ಕೆ ಕರೆ ಮಾಡಲು ಒತ್ತಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಪೋಲೀಸ್ ಸಿಬ್ಬಂದಿಯೊಂದಿಗೆ ಅಡುಗೆ ವಿಭಾಗದ ಜನರು ಮತ್ತು ಊಟ ಬಡಿಸಿದ ಸಿಬ್ಬಂದಿ ಬಂದರು. ಸಿಬ್ಬಂದಿಯನ್ನು ನೋಡಿದ ಕೂಡಲೇ ವೃದ್ಧ ಪ್ರಯಾಣಿಕ ಆತನ ಮೇಲೆ ಕೈ ಮಾಡಿದ್ದಾರೆ.
Vande Bharat by mistake served Non-Veg food to a old person. He didn't saw instructions and ate the food. Being vegetarian he realised it tastes like non-veg so he got furious & gave 2 tight slap to the waiter.
— Kunal Verma (@itsmekunal07) July 27, 2024
Vande Bharat - Howrah to Ranchi
Date - 26/ July/ 24
Live recording- pic.twitter.com/Mg0skE3KLo
ಆದರೆ ವೃದ್ಧ ಪ್ರಯಾಣಿಕ ಕಪಾಳಮೋಕ್ಷ ಮಾಡಿದ್ದರಿಂದ ರೈಲಿನಲ್ಲಿದ್ದ ಇತರ ಕೆಲವು ಪ್ರಯಾಣಿಕರು ಆಕ್ರೋಶಗೊಂಡರು. ಈ ಪೈಕಿ ಒಬ್ಬ ಪ್ರಯಾಣಿಕರು ಮುದುಕನ ಮೇಲೆ ಕೂಗಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು ವೇಟರ್ ಬಳಿ ಕ್ಷಮೆಯಾಚಿಸಬೇಕು ಎಂದು ವೃದ್ಧನಿಗೆ ಹೇಳಿದರು. ಸಹ ಪ್ರಯಾಣಿಕರು ವಯೋವೃದ್ಧ ಪ್ರಯಾಣಿಕರ ಬಳಿ ಸಿಬ್ಬಂದಿಗೂ ಕ್ಷಮೆಯಾಚಿಸುವಂತೆ ಕೇಳಿದರು. ಇದು ಸಹ ವೀಡಿಯೊದಲ್ಲಿ ಕಾಣಬಹುದು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ್ ಚರಣ್, 'ತಪ್ಪಾಗಿ ಬಡಿಸಲಾಗಿದೆ, ಆದರೆ ಅವರು ಅದನ್ನು ಸೇವಿಸಲಿಲ್ಲ. ಸಹ ಪ್ರಯಾಣಿಕರು ಕಪಾಳಮೋಕ್ಷ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆನಂತರ ಸಮಸ್ಯೆಯನ್ನು ಪರಿಹರಿಸಲಾಯಿತು' ಎಂದು ಹೇಳಿದ್ದಾರೆ.
ವಿಡಿಯೊದಲ್ಲಿ ಒಬ್ಬ ಪೊಲೀಸ್ ಕೂಡ ಕಾಣಿಸಿಕೊಂಡಿದ್ದು, ಅವರು ವಿಷಯವನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಜನರ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕನ ತಪ್ಪಿನ ಬಗ್ಗೆ ಬರೆದು ಸಿಬ್ಬಂದಿಗೆ ಕ್ಷಮೆ ಕೇಳಬೇಕು ಎಂದು ಬರೆದರೆ, ಕೆಲವರು ಸಿಬ್ಬಂದಿ ದೊಡ್ಡ ತಪ್ಪು ಮಾಡಿದ್ದಾರೆ ಎಂದು ವೃದ್ಧನ ಮೇಲೆ ಸಹಾನುಭೂತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಇದು ರೈಲ್ವೆ ಆಡಳಿತದ ತಪ್ಪು ಎಂದು ಹೇಳುತ್ತಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications