Delhi Earthquake: ಇಂದು ಬೆಳಗ್ಗೆ ದಹಲಿಯಲ್ಲಿ 4.4 ತೀವ್ರತೆಯ ಭಾರೀ ಭೂಕಂಪ... ಜನ ಆತಂಕ
ನವದೆಹಲಿ, ಜುಲೈ 10: ರಾಷ್ಟ್ರ ರಾಜಧಾನಿ ದೆಹಲಿಯ ಉತ್ತರದ ಹಲವು ಭಾಗದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ದೆಹಲಿ-ಎನ್ಸಿಆರ್ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿ ಆಗಿದೆ. ದೆಹಲಿಯ ಮನೆಯಿಂದ ಹೊರ ನಾಗರಿಕರು ಆತಂಕಗೊಂಡಿದ್ದರು.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪವು 4.4 ತೀವ್ರತೆ ದಾಖಲಾಗಿದೆ. ಇದರ ಕೇಂದ್ರಬಿಂದು ಹರಿಯಾಣದ ಜಜ್ಜರ್ನಲ್ಲಿ 10 ಕಿಲೋಮೀಟರ್ ಆಳದಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.

ಬೆಳಗ್ಗೆ ಎದ್ದ ದೆಹಲಿ ಜನರಿಗೆ ಈ ಭೂಕಂಪನ ಆಘಾತ ನೀಡಿತು. ಏಕೆಂದರೆ 4.4 ತೀವ್ರತೆಯ ಭೂಕಂಪನದಿಂದ ಇಲ್ಲಿ ಕಟ್ಟಡಗಳು ನಡುಗಿದವು. ಮನೆಯಲ್ಲಿ ಉದ್ಯೋಗ ಇತರ ಕೆಲಸಗಳಿಗೆ ಸಿದ್ಧವಾಗುತ್ತಿದ್ದವರನ್ನು ಮನೆಯಿಂದ ಹೊರ ಓಡುವಂತೆ ಮಾಡಿತು. ಸದ್ಯದವರೆಗೆ ದೆಹಲಿಯ ಎನ್ಸಿಆರ್ ಹಾಗೂ ಇತರ ಕಡೆ ಯಾವುದೇ ಹಾನಿ ಅಥವಾ ಗಂಭೀರ ಸಮಸ್ಯೆಗಳು ಉಂಟಾಗಿದ್ದರ ಬಗ್ಗೆ ವರದಿ ಆಗಿಲ್ಲ.
ಕೇವಲ ದೆಹಲಿಯಲ್ಲಿ ಮಾತ್ರವಲ್ಲದೇ ಹರಿಯಾಣ ತೀವ್ರತೆ ಕೊಂಚ ಹೆಚ್ಚಿತ್ತು ಎನ್ನಲಾಗಿದೆ. ಈ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಕೆಲವು ಭಾಗಗಳಲ್ಲಿ ಭೂಮಿ ಕಂಪನಿಸಿದ ಅನುಭವ ಆಗಿದೆ. ಇಲ್ಲಿನ ಜನರು ಸಹ ಆತಂಕಗೊಂಡಿದ್ದಾರೆ. ಈ ಕುರಿತು ಕೆಲವೇ ನಿಮಿಷಗಳಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೂರ್ಣ ಮಾಹಿತಿ ಒದಗಿಸಲಿದೆ.
EQ of M: 4.4, On: 10/07/2025 09:04:50 IST, Lat: 28.63 N, Long: 76.68 E, Depth: 10 Km, Location: Jhajjar, Haryana.
— National Center for Seismology (@NCS_Earthquake) July 10, 2025
For more information Download the BhooKamp App https://t.co/5gCOtjcVGs @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/uDNjvD8rWT
ಭೂಕಂಪನ ಬಗ್ಗೆ ಸ್ಥಳೀಯರು ಹೇಳುವುದೇನು
ಬೆಳಗ್ಗೆ ಎದ್ದು ಟೀ ಕುಡಿಯುವಾಗ ಜೋರು ಶಬ್ದ ಕೇಳಿಸಿತುಭ. ಮನೆ ಕಂಪನಿಸಿದಂತೆ ಭೂಕಂಪನ ಅನುಭವವಾಯಿತು. ನಾನು ಎಲ್ಲರನ್ನೂ ಕಟ್ಟಡದಿಂದ ಹೊರಗೆ ಬರುವಂತೆ ಸೂಚಿಸಿದೆ. ಅದರಂತೆ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದರು ಎಂದು ಹರಿಯಾಣದ ಗುರುಗ್ರಾಮ್ ನಿವಾಸಿ ಒಬ್ಬರು ANI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದರು
ಅದೇ ರೀತಿ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಭೂಮಿ ಕಂಪಿಸಿದ ಅನುಭವ ಅಲ್ಲಿನ ನಿವಾಸಿಗಳಿಗೆ ಆಗಿದೆ. ಭೂಮಿ ನಡುಗುತ್ತಿದ್ದಂತೆ ಎಚ್ಚರವಾಯಿತು. ಅದೇ ಸಮಯದಲ್ಲೇ ನಾನು ಎಚ್ಚರಗೊಂಡೆ. ದಿಢೀರ್ ಘಟನೆ ನಡೆದಿದ್ದು ನೋಡಿ ಆಘಾತವಾಯಿತು. ದೆಹಲಿಯ ಎನ್ಸಿಆರ್ ಆಗಾಗ್ಗೆ ಭೂಕಂಪಗಳನ್ನು ಸಂಭವಿಸುತ್ತಿವೆ. ಇದು ಸಾಮಾನ್ಯ ಎಂಬಂತಾಗಿದೆ. ನಾವು ಮಾತ್ರ ಸುರಕ್ಷತೆ ವಹಿಸಬೇಕು ಎಂದು ಸ್ಥಳೀಯರ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.
ಈ ವರ್ಷದ ಆರಂಭದಲ್ಲಿ, ಫೆಬ್ರವರಿ 17 ರಂದು, ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ಅಂದು ಬೆಳಗ್ಗೆ 5:36 ಗಂಟೆಗೆ 4.0 ತೀವ್ರತೆ ಮತ್ತು 5 ಕಿಲೋಮೀಟರ್ ಆಳದಲ್ಲಿ ಭೂಕಂಪ ಆಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿತ್ತು. ಇದು ಪ್ರಬಲ ಭೂಕಂಪನ ಎಂದು ನಿವಾಸಿಗಳು ಎಂದಿನಂತೆ ಭಯಬೀತರಾಗಿದ್ಳದರು. ಇದೀಗ ಮತ್ತೆ ಬೆಳಗ್ಗೆ ಹೊತ್ತು ಭೂಕಂಪನ ಸಂಭವಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications