ಬಿಪರ್ಜೋಯ್ ಚಂಡಮಾರುತ: ರಾಜಸ್ಥಾನದಲ್ಲಿ ಭಾರೀ ಮಳೆಗೆ 8 ಸಾವು, 17,000 ಮಂದಿ ಸ್ಥಳಾಂತರ
ಜೈಪುರ, ಜೂನ್. 20: ಚಂಡಮಾರುತ 'ಬಿಪರ್ಜೋಯ್'ನಿಂದ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ರಾಜ್ಯದಲ್ಲಿ ಇದುವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಸುಮಾರು 15,000 ರಿಂದ 17,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬಿಪರ್ಜೋಯ್ ಚಂಡಮಾರುತ ಕ್ರಮೇಣ ಬಲವನ್ನು ಕಳೆದುಕೊಳ್ಳುತ್ತಿರುವುದರಿಂದ ರಾಜಸ್ಥಾನವು ಸತತ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುದೆ. ರಾಜ್ಯದ ಐದು ಜಿಲ್ಲೆಗಳ ಪೈಕಿ ಜಲೋರ್, ಸಿರೋಹಿ ಮತ್ತು ಬಾರ್ಮರ್ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜೀವ ಮತ್ತು ಆಸ್ತಿಪಾಸ್ತಿಗಳ ನಷ್ಟವನ್ನು ಕಡಿಮೆ ಮಾಡಲು ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಸಲಹೆ ನೀಡಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅತ್ಯಂತ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮಂಗಳವಾರ ಬೆಳಗ್ಗೆ 24 ಗಂಟೆಗಳಲ್ಲಿ ಅಜ್ಮೀರ್, ಭಿಲ್ವಾರಾ, ಧೋಲ್ಪುರ್, ಬರಾನ್, ಚಿತ್ತೋರ್ಗಢ, ಬುಂಡಿ, ಸವಾಯಿಮಾಧೋಪುರ್ ಮತ್ತು ಕರೌಲಿ ಜಿಲ್ಲೆಗಳಲ್ಲಿ 'ಭಾರೀ'ಯಿಂದ 'ಅತಿ ಭಾರೀ' ಮಳೆ ದಾಖಲಾಗಿದೆ.
ಧೋಲ್ಪುರ ಮತ್ತು ಅಜ್ಮೀರ್ನ ಕೆಲವು ಸ್ಥಳಗಳು ನೀರು ನಿಲ್ಲುವ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಜ್ಮೀರ್ನ ಅನಾ ಸಾಗರ್ ಕೆರೆ ತುಂಬಿ ಹರಿದಿದೆ.
ಪರಿಸ್ಥಿತಿ ಅವಲೋಕಿಸಿದ ಸಿಎಂ ಅಶೋಕ್ ಗೆಹ್ಲೋಟ್
ತೀವ್ರ ಮಳೆಯ ಚಟುವಟಿಕೆಗಳ ನಡುವೆ ಹಲವಾರು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ ಎಂದು ವರದಿಯಾಗಿದೆ. ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ಪೀಡಿತ ಜಿಲ್ಲೆಗಳಲ್ಲಿ ಸುಮಾರು 15,000 ರಿಂದ 17,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 2,000 ವಿದ್ಯುತ್ ಕಂಬಗಳು ಮತ್ತು ಅನೇಕ ರಸ್ತೆಗಳು ಹಾನಿಗೊಳಗಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಹೆಚ್ಚಿನ ಸಂಖ್ಯೆಯ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಪೂರೈಕೆಗೆ ಸವಾಲಾಗಿದೆ. "ಜಿಲ್ಲಾಡಳಿತವು ಎಸ್ಡಿಆರ್ಎಫ್ನ ನಿಯಮಗಳ ಪ್ರಕಾರ ಜಾನುವಾರು ಮತ್ತು ಮನೆಗಳಿಗೆ ಉಂಟಾದ ಹಾನಿಯನ್ನು ಸಮೀಕ್ಷೆ ನಡೆಸುತ್ತಿದೆ. ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಯಾವುದೇ ರೀತಿಯ ವಿಪತ್ತು ಬಂದರೂ ಜನರಿಗೆ ತೊಂದರೆಯಾಗದಂತೆ ನಾವು ಈಗಾಗಲೇ ಸಿದ್ಧತೆಗಳನ್ನು ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೇನೆಯ ಎರಡು ತಂಡಗಳನ್ನು ಕರೆಯಲಾಗಿದೆ. ಎಸ್ಡಿಆರ್ಎಫ್ನ 17 ತಂಡಗಳು ಮತ್ತು ಎನ್ಡಿಆರ್ಎಫ್ನ 8 ತಂಡಗಳು ರಾಜ್ಯದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಅಶೋಕ್ ಗೆಹ್ಲೋಟ್ ಅವರು ಬುಧವಾರ ಪಾಲಿ ಮತ್ತು ಜೋಧ್ಪುರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ.
ಸುಮಾರು 60 ವರ್ಷಗಳಲ್ಲಿ ಗುಜರಾತ್ಗೆ ಅಪ್ಪಳಿಸಿದ ಮೂರನೇ ಚಂಡಮಾರುತ 'ಬಿಪರ್ಜೋಯ್' ಗುರುವಾರ ಸಂಜೆ 'ಅತಿ ತೀವ್ರ ಚಂಡಮಾರುತ'ವಾಗಿ ಕರಾವಳಿ ರಾಜ್ಯದಲ್ಲಿ ಭೂಕುಸಿತ ಮಾಡಿದೆ. ಇದಾದ ನಂತರ ಮರುಭೂಮಿ ರಾಜ್ಯ ರಾಜಸ್ಥಾನವನ್ನು ಪ್ರವೇಶಿಸಿದೆ. ಪ್ರಸ್ತುತ ಈಶಾನ್ಯ ರಾಜಸ್ಥಾನ ಮತ್ತು ಉತ್ತರ ಪ್ರದೇಶ ಪ್ರದೇಶಕ್ಕೆ ಹೊಂದಿಕೊಂಡಂತೆ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಬುಧವಾರದ ನಂತರ, ಭಾರೀ ಮಳೆಯ ಪ್ರಮಾಣವು ನಿಧಾನವಾಗುವ ಮುನ್ಸೂಚನೆಯಿದೆ. ಆದರೂ, ಜೂನ್ 24 ರಿಂದ 25 ರವರೆಗೆ ಪೂರ್ವ ರಾಜಸ್ಥಾನವು ಮತ್ತೊಮ್ಮೆ ಮಳೆ ಚಟುವಟಿಕೆಗಳ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ರೈಲುಗಳ ರದ್ದು
ಚಂಡಮಾರುತದಿಂದಾಗಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ರಾಜಸ್ಥಾನದಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದ ಐದು ಸ್ಥಳಗಳಲ್ಲಿ ಹಳಿಗಳನ್ನು ಕಿತ್ತು ಹಾಕಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಜೋಧ್ಪುರ-ಭಿಲ್ಡಿ ಎಕ್ಸ್ಪ್ರೆಸ್ (04841), ಭಿಲ್ಡಿ-ಜೋಧ್ಪುರ ಎಕ್ಸ್ಪ್ರೆಸ್ (04842), ಮಂಗಳವಾರ ಜೋಧ್ಪುರ-ಪಾಲನ್ಪುರ್ ಎಕ್ಸ್ಪ್ರೆಸ್ (14893) ಮತ್ತು ಬುಧವಾರ ಪಾಲನ್ಪುರ್-ಜೋಧ್ಪುರ್ ಎಕ್ಸ್ಪ್ರೆಸ್ (14894) ಸೇರಿದಂತೆ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ವಾಯುವ್ಯ ರೈಲ್ವೆ ಪ್ರಕಟಿಸಿದೆ.












Click it and Unblock the Notifications