ಯಾರಿಗುಂಟು ಯಾರಿಗಿಲ್ಲ, ಒಂದು ರುಪಾಯಿಗೆ ಒಂದು ಸೀರೆ ಎಂದಿದ್ದೇ ತಡ!
ಯಾರಿಗುಂಟು ಯಾರಿಗಿಲ್ಲ, ಈಗಲೇ ಪಡೆದುಕೊಳ್ಳಿ 'ಒಂದು ರುಪಾಯಿಗೆ ಒಂದು ಚೆಂದದ ಸೀರೆ' ಎಂಬ ಕ್ಲಿಯೆರೆನ್ಸ್ ಸೇಲ್ ಆಫರ್ ಕೇಳಿಸಿಕೊಂಡಿದ್ದೇ ತಡಾ, ಗಲ್ಲಿ ಗಲ್ಲಿಗಳಿಂದ ಓಡೋಡಿ ಬಂದ ಮಹಿಳಯರು ಆ ಅಂಗಡಿಯ ಮುಂದೆ ಜಮಾಯಿಸಿಬಿಟ್ಟರು. ಮುಂದೇನಾಯ್ತು
ವಾರಣಾಸಿ, ಫೆಬ್ರವರಿ 17: ಯಾರಿಗುಂಟು ಯಾರಿಗಿಲ್ಲ, ಈಗಲೇ ಪಡೆದುಕೊಳ್ಳಿ 'ಒಂದು ರುಪಾಯಿಗೆ ಒಂದು ಚೆಂದದ ಸೀರೆ' ಎಂಬ ಕ್ಲಿಯೆರೆನ್ಸ್ ಸೇಲ್ ಆಫರ್ ಕೇಳಿಸಿಕೊಂಡಿದ್ದೇ ತಡಾ, ಗಲ್ಲಿ ಗಲ್ಲಿಗಳಿಂದ ಓಡೋಡಿ ಬಂದ ಮಹಿಳಯರು ಆ ಅಂಗಡಿಯ ಮುಂದೆ ಜಮಾಯಿಸಿಬಿಟ್ಟರು. ವಾರಣಾಸಿಯಲ್ಲಿ ಯಾವುದೋ ಸಿನಿಮಾ ದೃಶ್ಯ ನೋಡಿದಂತೆ ಇತ್ತು ಸೀರೆ ಪ್ರಸಂಗ.
ವಾರಾಣಾಸಿಯ ಮೆಹಮೂರ್ಗಂಜ್ ಪ್ರದೇಶದ ಅಂಗಡಿಯೊಂದರ ಮಾಲೀಕ ನೀಡಿದ ಕ್ಲಿಯೆರೆನ್ಸ್ ಸೇಲ್ ಆಫರ್ ಭಾರಿ ಗೊಂದಲ, ಟ್ರಾಫಿಕ್ ಜಾಮ್ ಗೆ ಕಾರಣವಾಯಿತು.

ಹಳೆ ಸ್ಟಾಕ್ ಕ್ಲಿಯರ್ ಮಾಡುವ ಸಲುವಾಗಿ 1 ರೂಪಾಯಿಗೆ ಒಂದು ಸೀರೆ ಎಂಬ ಘೋಷಣೆ ಮಾಡಿದ ಸುದ್ದಿ ಕೇಳಿದ ನೂರಾರು ಮಹಿಳೆಯರು ಅಂಗಡಿ ಎದುರು ಜಮಾಯಿಸಿದ್ದರು. ಇಡೀ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು ತಿಳಿದು ಏನಾಗಿದೆ ನೋಡೋಣ ಎಂದು ಬಂದ ಪೊಲೀಸರು ಅವಾಕ್ಕಾದರು.
ಕೂಡಲೇ ನೆರೆದಿದ್ದ ಮಹಿಳೆಯರನ್ನು ಚದುರಿಸಿದ್ದಾರೆ. ನಿರೀಕ್ಷೆಗೂ ಮೀರಿ ಮಹಿಳೆಯರು ಅಂಗಡಿಗೆ ಬಂದಿದ್ದು ಕಂಡ ಮಾಲೀಕ ಆಫರ್ ಹಿಂಪಡೆದಿದ್ದಾನೆ. 1 ರೂ. ಗೆ ಸೀರೆ ಎಂಬ ಆಫರ್ ನೀಡಿದ್ದು ನಿಜವಾದರೂ ಅದರ ಹಿಂದೆ ಒಂದು ಟ್ರಿಕ್ ಇತ್ತು. ಸೀರೆ ಖರೀದಿಸುವುದಕ್ಕೂ ಮುನ್ನ 500 ರೂ. ಬೆಲೆ ಬಾಳುವ ಯಾವುದಾದರೂ ವಸ್ತು ಖರೀದಿಸುವ ನಿಬಂಧನೆಯನ್ನು ಹಾಕಲಾಗಿತ್ತು. ಮಹಿಳೆಯರಿಗೆ ನಿಬಂಧನೆಗಿಂತ ಒಂದು ರುಪಾಯಿಗೆ ಬನಾರಸಿ ಸೀರೆ ಸಿಗುತ್ತದೆ ಎಂಬುದು ಕಣ್ಣರಳುವಂತೆ ಮಾಡಿತ್ತು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications