ಪಾಳಿ ಬದಲಾಯಿಸಿದರೆ ಮಿದುಳು ಮುದಿಯಾಗುತ್ತೆ
ಕಚೇರಿಯಲ್ಲಿ ನಿರಂತರವಾಗಿ ಕೆಲಸದ ಪಾಳಿ ಬದಲಾಯಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಮಿದುಳು ನೈಜ ವಯಸ್ಸಿಗಿಂತ 6.5 ವರ್ಷ ಹೆಚ್ಚು ಮುದಿಯಾಗುತ್ತದೆ..!
ಆತಂಕವಾಯಿತೇ..? ಹೌದು, ಅಧ್ಯಯನವೊಂದರ ಪ್ರಕಾರ ಕಚೇರಿಯಲ್ಲಿ ಕನಿಷ್ಠ 10 ವರ್ಷಗಳ ಕಾಲ ನಿರಂತರವಾಗಿ ಕೆಲಸದ ಪಾಳಿ ಬದಲಾಯಿಸುವವರು ಮಾನಸಿಕ ಸಂವೇದನಾ ಶಕ್ತಿ ಹಾಗೂ ದೈಹಿಕ ಆರೋಗ್ಯವನ್ನು ವೇಗವಾಗಿ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಇಂತವರಿಗೆ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು, ಆಲ್ಸರ್, ಡಯಾಬಿಟೀಸ್ ಸೇರಿದಂತೆ ಅಜೀರ್ಣ ಸಮಸ್ಯೆ ಹೆಚ್ಚಾಗುತ್ತಿದೆ.

ಈ ಕುರಿತು ಫ್ರಾನ್ಸ್ ದೇಶದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಮೂರು ಸಾವಿರ ಜನರನ್ನು 1996, 2001 ಹಾಗೂ 2006ರಲ್ಲಿ ಅಧ್ಯಯನಕ್ಕೊಳಪಡಿಸಿದ್ದು, ಮಿದುಳಿನ ಆರೋಗ್ಯದ ಕುರಿತು ಎಚ್ಚರಿಕೆ ನೀಡಿದೆ.
ರಾತ್ರಿ ಅಥವಾ ಬೆಳಗ್ಗಿನ ಪಾಳಿಯಲ್ಲಿ ದುಡಿದವರಲ್ಲಿ ನೆನಪಿನ ಶಕ್ತಿ ಹಾಗೂ ಯೋಚಿಸುವ ವೇಗ ಸೇರಿದಂತೆ ಒಟ್ಟು ಮಿದುಳಿನ ಸಾಮರ್ಥ್ಯವು ಸಾಮಾನ್ಯ ಪಾಳಿ (ಬೆಳಗ್ಗೆ 8ರಿಂದ ಸಂಜೆ 6)ಯಲ್ಲಿ ಕೆಲಸ ಮಾಡಿದವರಿಗಿಂತ ಕಡಿಮೆ ಕಂಡುಬಂದಿದೆ. ಅಲ್ಲದೆ, ಆಗಾಗ ಬೆಳಗ್ಗೆ, ಸಾಮಾನ್ಯ ಹಾಗೂ ರಾತ್ರಿ ಪಾಳಿಯನ್ನು ನಿರಂತರವಾಗಿ 10 ವರ್ಷ ಬದಲಾಯಿಸುತ್ತ ಕೆಲಸ ಮಾಡಿದವರಲ್ಲಿಯೂ ಈ ಸಮಸ್ಯೆ ಕಂಡುಬಂದಿದೆ.
ಅಷ್ಟೇ ಅಲ್ಲ, ಅನಿಯಮಿತ ಪಾಳಿಯಲ್ಲಿ ಕೆಲಸ ಮಾಡಿದವರು ಸಾಮಾನ್ಯ ಸಮಯಕ್ಕೆ ಬದಲಾದರೂ ಸುಧಾರಿಸಿಕೊಳ್ಳಲು ಕನಿಷ್ಠ ಐದು ವರ್ಷಗಳೇ ಬೇಕಾದವು. ಪಾಳಿ ಕೆಲಸ ಬದಲಾವಣೆಯಿಂದ ವೈಯಕ್ತಿಕ ಆರೋಗ್ಯವಷ್ಟೇ ಅಲ್ಲದೆ, ಸಮಾಜದಲ್ಲಿಯೂ ಅಸಹನೆ ಹೆಚ್ಚಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು "Occupational and Environmental Medicine" ಜರ್ನಲ್ ನಲ್ಲಿ ತಿಳಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications