Aadhaar Card: ಇನ್ಮುಂದೆ ಆಧಾರ್ ಕಾರ್ಡ್ ಬೇಕಿಲ್ಲ! ನಿಮ್ಮ ಫೇಸ್ ನೋಡಿಯೇ ಪರಿಶೀಲನೆ: ಕೇಂದ್ರ ಸರ್ಕಾರ
ನವದೆಹಲಿ, ಏಪ್ರಿಲ್ 09: ಭಾರತದ ನಾಗರಿಕರ ಆಧಾರ್ ಗುರುತಿನ ಚೀಟಿಯಲ್ಲಿ ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆ ಕಾರಣದಿಂದ ಕೇಂದ್ರ ಸರ್ಕಾರ ಮಹತ್ವದ ಬಲಾವಣೆ ಮಾಡಿದೆ. ಬಳಕೆದಾರರ ಆಧಾರ್ ಪರಿಶೀಲನೆ ಇನ್ನುಮುಂದೆ ಭೌತಿಕವಾಗಿ ಅಲ್ಲದೇ ಡಿಜಿಟಲ್ ರೂಪದಲ್ಲಿ ಪರಿಶೀಲನೆ ಆಗಲಿದೆ. ಈ ಮೂಲಕ ಆಧಾರ್ ಗುರುತಿನ ಚೀಟಿ ವಿಚಾರದಲ್ಲಿ ಸರ್ಕಾರದ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಕುರಿತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಮಂಗಳವಾರ ಕೇಂದ್ರ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರು ಆಧಾರ್ ಕಾರ್ಡ್ಗಳನ್ನು ಎಲ್ಲೆಂದರಲ್ಲಿ ಭೌತಿಕವಾಗಿ ಇಲ್ಲವೇ ಅದರ ಫೋಟೋ ಒಯ್ಯುವ ಪ್ರಮೆಯವೇ ಬರುವುದಿಲ್ಲ. ವ್ಯಕ್ತಿಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು, ಹಂಚಿಕೆಗೆ ಸರ್ಕಾರದ ಈ ಆಪ್ಲಿಕೇಷನ್ ಸಹಾಯಕ್ಕೆ ಬರುತ್ತದೆ ಎಂದು ಆಪ್ ಬಿಡುಗಡೆ ನಂತರ ಸಚಿವರು ಮಾಹಿತಿ ನೀಡಿದ್ದಾರೆ.

ಆಧಾರ್ ಪರಿಶೀಳನೆ ವಿಧಾನ ಸರಳ
ತಂತ್ರಜ್ಞಾನ ಬೆಳೆದಂತೆಲ್ಲ ಎಲ್ಲ ಮಾಹಿತಿ ಆನ್ಲೈನ್ನಲ್ಲಿ ಅಡಕವಾಗಿಸಲಾಗುತ್ತಿದೆ. ಅದೇ ರೀತಿ ಆಧಾರ್ ಮಾಹಿತಿ ಡಿಜಿಟಲ್ ರೂಪ ಪಡೆಯಲಿದೆ. ಸರ್ಕಾರದ ಈ ನಿರ್ಧಾರ ಡಿಜಿಟಲ್ ನಾವೀನ್ಯತೆ ಮಹತ್ವದ ಸಾರುತ್ತದೆ. ಡಿಜಿಟಲ್ ಆಧಾರ್ನಿಂದ ಪರಿಶೀಲನೆ ಮತ್ತಷ್ಟು ಸರಳವಾಗುತ್ತದೆ. ಅದರ ಪ್ರಕ್ರಿಯೆಯ ವೇಗ ಹೆಚ್ಚುತ್ತದೆ. ಈ ಡಿಜಿಟಲ್ ಆಧಾರ್ ಪೇಸ್ ಐಡಿ ದೃಢೀಕರಣ ಹೊಂದಿರುತ್ತದೆ. ಹೀಗಾಗಿ ಸುರಕ್ಷಿತವು ಹೌದು ಎಂದಿದ್ದಾರೆ.
ನಿಮ್ಮ ಒಪ್ಪಿಗೆ ಇಲ್ಲದೇ ಮಾಹಿತಿ ಸಿಗದು..!
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಳಕೆದಾರರ ಮುಖ (ಫೇಸ್ ಐಡಿ) ಗುರುತಿನ ಆಧಾರದಲ್ಲಿ ಹೊಸ ಆಧಾರ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತದೆ. ಈ ಆಪ್ ಒಂದಿದ್ದರೆ ಸಾಕು. ಭೌತಿಕ ಕಾರ್ಡ್, ಆಧಾರ ಫೋಟೋಗಳು ಅಗತ್ಯ ಬೀಳುವುದಿಲ್ಲ. ಆಪ್ ಇಲ್ಲವೇ ಸುರಕ್ಷಿತ ಡಿಜಿಟಲ್ ವಿಧಾನ ಮೂಲಕ ಬಳಕೆದಾರರ ಒಪ್ಪಿಗೆಯೊಂದಿಗೆ ಆಧಾರ ಮಾಹಿತಿ, ಸಂಖ್ಯೆ ಹಂಚಿಕೊಳ್ಳಬಹುದಾಗಿದೆ. ಇಂತದ್ದೊಂದು ಅಧಿಕಾರ ಬಳಕೆದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.
UPI ರೀತಿ ಆಧಾರ್ ಆಪ್ ಕಾರ್ಯ ನಿರ್ವಹಣೆ
ಒಂದೇ ಒಂದು ಟ್ಯಾಪ್ ಮೂಲಕ ಬಳಕೆದಾರರು ಅಗತ್ಯ ಡೇಟಾ ಮಾತ್ರ ಶೇರ್ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ವೈಯಕ್ತಿಕ ಸುರಕ್ಷಿತವಾಗಿರುವ ಜೊತೆಗೆ ಅದರ ಮೇಲೆ ಪೂರ್ತಿ ನಿಯಂತ್ರಣ ಇರುತ್ತದೆ. ಬಳಕೆದಾರರ ಫೇಸ್ ಐಡಿ ದೃಢೀಕರಣ ಮಾಡುವುದು ಈ ಆಪ್ನ ಪ್ರಮುಖ ವೈಶಿಷ್ಟ್ಯವಾಗಿದೆ. ಗುರುತಿನ ಚೀಟಿ, ಮಾಹಿತಿ ಪರಿಶೀಲನೆ ಹೆಚ್ಚು ಸರಳವಾಗಿರುತ್ತದೆ. ಇದರೊಂದಿಗೆ ಯುಪಿಐ ರೀತಿ ಆಪ್ QR ಕೋಡ್ ಅನ್ನು ಸ್ಕ್ಯಾನ್ ಮಾಡಿಯೂ ಪರಿಶೀಲಿಸಬಹುದು.

ಒಂದು ಆಧಾರ್ ಒಬ್ಬರೇ ಬಳಕೆ: ದುರುಪಯೋಗ ಅಸಾಧ್ಯ
ಯುಪಿಐ ಬ್ಯಾಂಕಿಂಗ್ ನಷ್ಟೇ ಆಧಾರ್ ಪರಿಶೀಲನೆಯನ್ನು ಕೇಂದ್ರ ಸರ್ಕಾರ ಸರಳಗೊಳಿಸಿದೆ. ಇದರಿಂದ ಕಾರ್ಡ್ ಕಳೆದುಕೊಳ್ಳುವ, ಹೊಸ ಕಾರ್ಡ್ ಮಾಡಿಸುವ ಭೀತಿಯು ಇರುವುದಿಲ್ಲ. ಸರ್ಕಾರ ಇಲ್ಲಿ ಗೌಪ್ಯತೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭವಿಷ್ಯದಲ್ಲಿ ವಿಮಾನ ನಿಲ್ದಾಣ, ಅಂಗಡಿ, ಹೋಟೆಲ್ಗಳಲ್ಲಿ ನೀವು ಆಧಾರ್ ಕಾರ್ಡ್, ಅದರ ಪ್ರತಿ ನೀಡುವ ಅಗತ್ಯವು ಇರುವುದಿಲ್ಲ.
ಸದ್ಯ ಆಪ್ ಬೀಟಾ ಪರೀಕ್ಷಾ ಹಂತದಲ್ಲಿದ್ದು, ಪ್ರಬಲ ಗೌಪ್ಯತಾ ಸುರಕ್ಷತೆ, ವಿನ್ಯಾಸೊಂದಿಗೆ ಸೇವೆ ಅಣಿಯಾಗಲಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಆಧಾರ್ ವಿವರಗಳನ್ನು ನಕಲಿ ಮಾಡಲು, ಸಂಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಧಾರ್ ಡೇಟಾ ದುರುಪಯೋಗ ತಪ್ಪಿಸಬಹುದಾಗಿದೆ. ಒಂದು ಆಧಾರ್ ಒಬ್ಬರಿಂದಲೇ ಬಳಕೆ ಆಗಲಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications