BSNL: ಗ್ರಾಹಕಸ್ನೇಹಿ ಯೋಜನೆ ಘೋಷಣೆ! ₹299ಗೆ ಇಷ್ಟೆಲ್ಲ ಸೇವೆ ಲಭ್ಯ
ಕೇಂದ್ರ ಸರ್ಕಾರಿ ಅಧೀನದ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಹೊಸ ಹೊಸ ಪ್ಲಾನ್ ಘೋಷಣೆ ಮಾಡುತ್ತಿದೆ. ಇತ್ತೀಚೆಗೆ ಆಗಸ್ಟ್ ಸ್ವಾತಂತ್ರೋತ್ಸವ ಪ್ರಯುಕ್ತ ಒಂದು ರೂಪಾಯಿಗೆ ಒಂದು ತಿಂಗಳ ಪ್ಲಾನ್ ಘೋಷಣೆ ಮಾಡಲಾಗಿತ್ತು. ಇದೀಗ ರೂಪಾಯಿ 299 ಗೆ ಗ್ರಾಹಕ ಸ್ನೇಹಿ ಪ್ಲಾನ್ ಅನ್ನು ಘೋಷಣೆ ಮಾಡಲಾಗಿದೆ. ಇದರ ವ್ಯಾಲಿಡಿಟಿ, ಸೇವೆಯ ಇತರ ಮಾಹಿತಿ ಇಲ್ಲಿದೆ.
ಪ್ರಮುಖ ನಗರಗಳಲ್ಲಿ 4ಜಿ ಸೇವೆ ಆರಂಭಿಸಿರುವ ಬಿಎಸ್ಎನ್ಎಲ್ ಈಗಾಗಲೇ ಒಂದು ಲಕ್ಷ ಟವರ್ ನಿರ್ಮಿಸಿದ್ದು, ಹೆಚ್ಚುವರಿ ಟವರ್ ಸ್ಥಾಪನೆಗೆ ಮುಂದಾಗಿದೆ. ಇದರೊಂದಿಗೆ 5 ಜಿ ಸೇವೆ ಅಪ್ಗ್ರೇಡ್ ಆಗಲು ಸಜ್ಜಾಗಿದೆ. ಇದೆಲ್ಲದ ಮಧ್ಯ ಗ್ರಾಹಕರ ಬೇಡಿಕೆಗಳನ್ನು ಮರೆಯದ ಟೆಲಿಕಾಂ ಕಂಪನಿಯು 299 ರೂಪಾಯಿಗೆ ಒಂದು ತಿಂಗಳ ಮೊಬೈಲ್ ರೀಚಾರ್ಜ್ ಪ್ಲಾನ್ ನೀಡಿದೆ.

ಬಿಎಸ್ಎನ್ಎಲ್ ಗ್ರಾಹಕರು ಈ 299 ರೂಪಾಯಿ ಪ್ಲಾನ್ ಪಡೆದಲ್ಲಿ ನೀವು, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 3ಜಿಬಿ ದರದಲ್ಲಿ ಒಟ್ಟು 90 ಜಿಬಿ ಇಂಟರ್ನೆಟ್ ಸಿಗಲಿದೆ. 30 ದಿನಗಳವರೆಗೆ ಪ್ರತಿದಿನ 100 SMS ಸೌಲಭ್ಯ ನಿಮ್ಮದಾಗುತ್ತದೆ. ಒಂದು ವೇಳೆ ನೀವು ದೈನಂದಿನ ಡೇಟಾ 3ಜಿಬಿ ಮಿತಿ ಪೂರ್ಣಗೊಳಿಸಿದರೂ ಸಹಿತ ನಿಮಗೆ 40kbps ಇಂಟರ್ನೆಟ್ ಸೌಕರ್ಯ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ನೀವು BSNL ಅಧೀಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಬಿಎಸ್ಎನ್ಎಲ್ ಸೇವೆ ಪ್ರಸ್ತುತದಲ್ಲಿ ಹೇಗಿದೆ?
ನಗರ ಪ್ರದೇಶಗಳನ್ನು ಒಳಗೊಂಡಂತೆ ಗ್ರಾಮೀಣ ಭಾಗಗಳಲ್ಲಿ BSNL ಸೇವೆ ಹದಗೆಟ್ಟಿದೆ. ಒಂದು ಕಾಲದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಸಂಪರ್ಕಿಸುತ್ತಿದ್ದ ಈ ಬಿಎಸ್ಎನ್ಎಲ್ ಇಂದು ಕರೆ ಮಾಡಿದರೆ, ಸಮರ್ಪಕ ಕರೆಗಳು ಹೋಗುತ್ತಿಲ್ಲ. ನೆಟ್ವರ್ಕ್ ಸಮಸ್ಯೆ ಹೇಳತೀರದಷ್ಟಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಸಮಸ್ಯೆ ಸರಿ ಮಾಡುವುದಾಗಿ ಹೇಳುತ್ತಲೇ ಇರುವ ಕಂಪನಿ ಅಧಿಕಾರಿಗಳು ಹಾಗೂ ಸಹಾಯವಾಣಿ ಸಿಬ್ಬಂದಿಯು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.
ಮೊದಲಿದ್ದ 3ಜಿ ಸೇವೆ ಚೆನ್ನಾಗಿತ್ತು. ಅದರೆ 4ಜಿ ಸೇವೆ ಅಪ್ಗ್ರೇಡ್ ಆಗುವ ಧಾವಂತದಲ್ಲಿ ಬಿಎಸ್ಎನ್ಎಲ್ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಕರೆ ವೇಳೆ ನೆಟ್ ವರ್ಕ್ ಸಮಸ್ಯೆ, ದಿಢೀರ್ ಕರೆ ಕಡಿತ, ಸಿಗ್ನಲ್ ತೋರಿಸದೇ ಇರುವುದು ಸೇರಿ ಗ್ರಾಹಕರು ಕಿರಿ ಅನುಭವಿಸುತ್ತಿದ್ದಾರೆ. ಮರಳಿ ಏರ್ಟೆಲ್, ಜಿಯೋದತ್ತ ಮುಖ ಮಾಡಿದ್ದಾರೆ ಅನೇಕರು ಹೇಳಿಕೊಂಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications