Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!
ದೆಹಲಿ ಮಾರ್ಚ್ 28: ಲೋಕಸಭಾ ಚುನಾವಣೆಗೂ ಮುನ್ನ ಹಲವಾರು ಸಮೀಕ್ಷೆಗಳ ವರದಿ ಬಹಿರಂಗಗೊಳ್ಳುತ್ತಿದ್ದು ಬಹುತೇಕ ಸಮೀಕ್ಷಗಳಲ್ಲಿ ನರೇಂದ್ರ ಮೋದಿಗೆ ಮತದಾರರು ಜೈಕಾರ ಹಾಕಿದ್ದಾರೆ. ಈ ನಡುವೆ ಏಷ್ಯಾನೆಟ್ ಡಿಜಿಟಲ್ ನೆಟ್ವರ್ಕ್ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಆಡಳಿತ ನಡೆಸಲು ಜನ ಮಹದಾಸೆಯನ್ನು ಹೊಂದಿರುವುದು ಕಂಡು ಬಂದಿದೆ.
ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವೇ ಸೂಕ್ತ ಎಂದು ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ 'ಇಂಡಿಯಾ' ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಏಷ್ಯಾನೆಟ್ ಡಿಜಿಟಲ್ ನೆಟ್ವರ್ಕ್ ಸಮೀಕ್ಷೆ ಹೇಳಿದೆ.

ಮೋದಿ ಅಲೆಯನ್ನು ತಡೆಯಲು ಇಂಡಿಯಾ ಕೂಟಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆಯಿಂದ ಅವರ ಪಕ್ಷಕ್ಕೆ ಹೆಚ್ಚು ಲಾಭವಿಲ್ಲ ಎಂದೂ ಈ ಸಮೀಕ್ಷೆ ನುಡಿದಿದೆ. ಏಷ್ಯಾನೆಟ್ ಡಿಜಿಟಲ್ ನೆಟ್ವರ್ಕ್ ಆನ್ಲೈನ್ನಲ್ಲಿ ನಡೆಸಿದ ಮೆಗಾ 'ಮೂಡ್ ಆಫ್ ದ ನೇಷನ್' ಸಮೀಕ್ಷೆಯ ಪ್ರಕಾರ ಮುಂದಿನ ಚುನಾವಣೆಯಲ್ಲಿ ಎನ್ಡಿಎಗೆ ಪೈಪೋಟಿ ನೀಡಲು ವಿಪಕ್ಷಗಳು ದೊಡ್ಡ ಮಟ್ಟದ ಸಾಹಸ ಪ್ರದರ್ಶನ ಮಾಡಬೇಕಿದೆ ಎನ್ನುವುದು ಕಂಡುಬಂದಿದೆ.
ಏಷ್ಯಾನೆಟ್ ಡಿಜಿಟಲ್ ನೆಟ್ವರ್ಕ್ ನ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮಾರ್ಚ್ 13-ಮಾರ್ಷ್ 27ರ ನಡುವೆ ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿಯಲ್ಲಿ ನಡೆಸಿದ ವ್ಯಾಪಕ ಸಮೀಕ್ಷೆಗೆ 7,59,340 ಪ್ರತಿಕ್ರಿಯೆಗಳು ಬಂದಿವೆ. ಪ್ರಸ್ತುತ ಭಾರತದ ನೈಜ ಚಿತ್ರಣ ಹಾಗೂ ಭಾರತದದ ಮೂಲೆ ಮೂಲೆಗಳಲ್ಲಿ ಚರ್ಚೆ ಆಗುತ್ತಿರುವ ವಿಷಯಗಳ ಕುರಿತು ಸಮೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಹಾಗಾದರೆ ಯಾವ ವಿಷಯಕ್ಕೆ ಜನ ಬೆಂಬಲ ಎಷ್ಟು ಇದೆ ಎಂದು ತಿಳಿಯೋಣ.

ಯಾವ ವಿಷಯಕ್ಕೆ ಜನ ಬೆಂಬಲ ಎಷ್ಟು?
| ವಿಷಯ | ಹೌದು | ಇಲ್ಲ | ಗೊತ್ತಿಲ್ಲ |
| ಮೋದಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಿಗ್ರಹ ಆಗಿದೆಯೇ? | 60.40% | 30.12% | 9.59% |
| ಮೋದಿ ಆಡಳಿತದಲ್ಲಿ ಜಾಗತಿಕವಾಗಿ ಭಾರತದ ಹಿರಿಮೆ ಹೆಚ್ಚಾಗಿದೆಯೇ? | 70.27% | 17.18% | 3.59% |
| ಈ ಬಾರಿ ಕಾಂಗ್ರೆಸ್ ತನ್ನ ಸ್ಥಾನ ಬಲ ಹೆಚ್ಚಿಸಿಕೊಳ್ಳಲಿದೆಯೇ? | 26.98% | 63.94% | 9.15% |
| ಪ್ರಸಕ್ತ ನಡೆಯುತ್ತಿರುವ ರೈತ ಪ್ರತಿಭಟನೆ ಚುನಾವಣೆ ಮೇಲೆ ಪರಿಣಾಮ ಬೀರಲಿದಿಯೇ? | 44.03% | 49.67% | 6.31% |
| ಉತ್ತರ-ದಕ್ಷಿಣ ವಿಭಜನೆಗೆ ಉದ್ದೇಶಪೂರ್ವಕ ಯತ್ನ ನಡೆದಿದೆಯೇ? | 51.36% | 35.28% | 13.37% |
| ರಾಮಮಂದಿರ ಕೂಡಾ ಚುನಾವಣೆಯಲ್ಲಿ ಪ್ರಮುಖ ವಿಷಯವೇ? | 57.16% | 31.16% | 11.68% |
| ವಿಷಯ | ಉತ್ತಮ | ತೃಪ್ತಿದಾಯಕ | ಗೊತ್ತಿಲ್ಲ |
| ವಿದೇಶಾಂಗ ನೀತಿ ನಿರ್ವಹಣೆಯಲ್ಲಿ ಮೋದಿ ಸರ್ಕಾರದ ಸಾಧನೆ | 56.39% | 15.13% | 13.37% |
-ಯಾವ ವಿಷಯಕ್ಕೆ ಜನ ಬೆಂಬಲ ಎಷ್ಟು?
| ವಿಷಯ | ಅವಶ್ಯಕತೆಗಿಂತ ಹೆಚ್ಚು ಪಿಎಂ ಅಭ್ಯರ್ಥಿಗಳು | ನಾಯಕತ್ವದ ಕೊರತೆ | ಗುರಿ ಇಲ್ಲದೆ ಇರುವುದು | ಇವೆಲ್ಲವೂ |
| ವಿಪಕ್ಷಗಳು ಇಂದು ಎದುರಿಸುತ್ತಿರುವ ಪ್ರಮೂಖ ಸಮಸ್ಯೆ ಏನು? | 13.34% | 25.20% | 13.24% | 48.24% |
| ವಿಷಯ | ಬೆಲೆ ಏರಿಕೆ | ನಿರುದ್ಯೋಗ | ಮಣಿಪುರ ಹಿಂಸೆ | ಇಂಧನ ದರ |
| ಮೋದಿ ಸರ್ಕಾರದ ದೊಡ್ಡ ವೈಫಲ್ಯಗಳು ಯಾವವು | 16.62% | 21.33% | 32.86% | 26.20% |
| ವಿಷಯ | ಜಾತಿ ಲೆಕ್ಕಾಚಾರ | ಅಭ್ಯರ್ಥಿ ಹಿನ್ನೆಲೆ | ಅಭಿವೃದ್ಧಿ | ಉಚಿತ ಕೊಡುಗೆ |
| ಮತ ಚಲಾವಣೆ ವೇಳೆ ಯಾವ ವಿಷಯ ಪರಿಗಣನೆಗಳು | 2.86% | 14.40% | 80.50% | 2.32% |
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ












Click it and Unblock the Notifications