Get Updates
Get notified of breaking news, exclusive insights, and must-see stories!

ಆರ್ಯನ್ ಖಾನ್ ಪ್ರಕರಣ: ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು

ದೆಹಲಿ ಮೇ 12: ಎರಡು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಕೇಂದ್ರೀಯ ತನಿಖಾ ದಳ ಶುಕ್ರವಾರ ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ. ಸಮೀರ್ ವಾಂಖೆಡೆ ಸೇರಿದಂತೆ ಮೂವರು ಸಾರ್ವಜನಿಕ ಸೇವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, 29 ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ.

ವಿಜಿಲೆನ್ಸ್ ವರದಿಯ ಆಧಾರದ ಮೇಲೆ ಸಿಬಿಐ ನಡೆಸಿದ ಪ್ರಾಥಮಿಕ ತನಿಖೆಯ ನಂತರ ಭಾರತೀಯ ಕಂದಾಯ ಸೇವೆಯ ಅಧಿಕಾರಿ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ವಿಲಿಜೆನ್ಸ್ ವಿಚಾರಣೆ ವೇಳೆ ಸಮೀರ್ ವಾಂಖೆಡೆ ಭ್ರಷ್ಟಾಚಾರದ ಮೂಲಕ ಆಸ್ತಿ ಗಳಿಸಿರುವುದು ಪತ್ತೆಯಾಗಿತ್ತು.

Aryan Khan cas

ಅಕ್ಟೋಬರ್ 2021 ರಲ್ಲಿ, ವಾಂಖೆಡೆ ನೇತೃತ್ವದ ತಂಡವು ಮುಂಬೈ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್‌ನಲ್ಲಿ ಕಾರ್ಡೆಲಿಯಾ ಕ್ರೂಸ್ ಮೇಲೆ ದಾಳಿ ನಡೆಸಿತು. ಈ ಘಟನೆ ಬಳಿಕ ಆರ್ಯನ್ ಖಾನ್ ಮತ್ತು ಇತರರನ್ನು ಬಂಧಿಸಿತ್ತು.

ಜೊತೆಗೆ ಮಾದಕವಸ್ತು ಹೊಂದುವಿಕೆ, ಸೇವನೆ ಮತ್ತು ಕಳ್ಳಸಾಗಣೆ ಆರೋಪಗಳನ್ನು ದಾಖಲಿಸಲಾಯಿತು. 22 ದಿನಗಳನ್ನು ಜೈಲಿನಲ್ಲಿ ಕಳೆದಿದ್ದ ಆರ್ಯನ್ ಖಾನ್ ಅವರಿಗೆ ಮೇ 2022 ರಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎನ್‌ಸಿಬಿ ಕ್ಲೀನ್ ಚಿಟ್ ನೀಡಿತು.

Aryan Khan cas

ಎನ್‌ಸಿಬಿ ತಂಡ ಮತ್ತು ವಾಂಖೆಡೆ ವಿರುದ್ಧ ಹೆಚ್ಚಿನ ಕೈವಾಡದ ಆರೋಪದ ಕಾರಣ ಪ್ರತ್ಯೇಕ ವಿಜಿಲೆನ್ಸ್ ವಿಚಾರಣೆ ನಡೆಸಲಾಯಿತು. ವಾಂಖೆಡೆ ಅವರನ್ನು ನಂತರ ಚೆನ್ನೈನಲ್ಲಿರುವ DG ತೆರಿಗೆದಾರರ ಸೇವಾ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು.

ಎನ್‌ಸಿಬಿ ತನಿಖೆಯ ಭಾಗವಾಗಿ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2021 ರಂದು ಬಂಧಿಸಲಾಯಿತು. ಜೊತೆಗೆ ಆರ್ಯನ್‌ ಖಾನ್ 20 ದಿನಗಳಿಗಿಂತ ಹೆಚ್ಚು ಜೈಲಿನಲ್ಲಿ ಕಳೆಯಬೇಕಾಯಿತು.

ಪ್ರಕರಣದ ಟೈಮ್‌ಲೈನ್ ಇಲ್ಲಿದೆ:

ಅಕ್ಟೋಬರ್ 2, 2021: ಎನ್‌ಸಿಬಿ ರಹಸ್ಯವಾಗಿ ಹೋಗಿ ಮುಂಬೈನಿಂದ ಗೋವಾಗೆ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತು. ಏಜೆನ್ಸಿ ಕೊಕೇನ್, ಚರಸ್, MDMA ಮಾತ್ರೆಗಳು ಮತ್ತು MD ಅನ್ನು ದಾಳಿಯ ವೇಳೆ ವಶಕ್ಕೆ ತೆಗೆದುಕೊಂಡಿತ್ತು.

ಅಕ್ಟೋಬರ್ 3 (2021): ದಾಳಿಯ ಬಳಿಕ ಆರ್ಯನ್ ಖಾನ್ ಅವರನ್ನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರೊಂದಿಗೆ ಬಂಧಿಸಲಾಯಿತು. ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ಅವರನ್ನು ಒಂದು ದಿನದ ರಿಮಾಂಡ್‌ಗೆ ಕಳುಹಿಸಲಾಯಿತು. 20 ಜನರನ್ನು ಬಂಧಿಸಿದ ಪ್ರಕರಣದಲ್ಲಿ ಆರ್ಯನ್ 'ಆರೋಪಿ ನಂಬರ್ 1' ಆಗಿದ್ದಾರೆ.

ಅಕ್ಟೋಬರ್ 4 (2021): ಎನ್‌ಸಿಬಿ ಪ್ರಕಾರ, ಆರ್ಯನ್ ಖಾನ್ ಅವರ ಫೋನ್‌ನಲ್ಲಿ ಕಂಡುಬಂದ ಸಂದೇಶಗಳು ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯನ್ನು ಸೂಚಿಸುತ್ತವೆ. ಹೀಗಾಗಿ ಅಕ್ಟೋಬರ್ 7 ರವರೆಗೆ ಆರೋಪಿಯನ್ನು ಕಸ್ಟಡಿಯಲ್ಲಿಡಲು ನ್ಯಾಯಾಲಯವು NCB ಅನುಮತಿಗೆ ಅಸ್ತು ಎಂದಿತ್ತು. ಅಕ್ಟೋಬರ್ 7: ಹೆಚ್ಚುವರಿ ಕಸ್ಟಡಿಗಾಗಿ ಏಜೆನ್ಸಿಯ ಕೋರಿಕೆಯನ್ನು ನ್ಯಾಯಾಲಯ ವಜಾಗೊಳಿಸಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆರ್ಯನ್ ಖಾನ್ ಈ ವೇಳೆ ಜಾಮೀನಿಗೆ ಅರ್ಜಿ ಸಲ್ಲಿಸಿದರು.

ಅಕ್ಟೋಬರ್ 8 (2021): ಆರ್ಯನ್‌ ಖಾನ್ ಜಾಮೀನು ಕೋರಿಕೆಯನ್ನು ತಿರಸ್ಕರಿಸಲಾಯಿತು. ಅಕ್ಟೋಬರ್ 9: ಆರ್ಯನ್ ಖಾನ್ ಪುನ: ನ್ಯಾಯಾಲಯದಲ್ಲಿ ಜಾಮೀನು ಕೋರಿದರು. ತನ್ನ ಮೇಲೆ ತಪ್ಪಾಗಿ ಆರೋಪ ಹೊರಿಸಲಾಗಿದೆ ಮತ್ತು ತನ್ನ ಬಳಿ ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ ಎಂದು ಆರ್ಯನ್‌ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದರು.

ಅಕ್ಟೋಬರ್ 11 (2021): ಆರ್ಯನ್ ಖಾನ್ ಅವರ ವಕೀಲರು ಅವರ ಜಾಮೀನು ಅರ್ಜಿಯ ತ್ವರಿತ ವಿಚಾರಣೆಗೆ ಮನವಿ ಮಾಡಿದರು. ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು NCB ಹೆಚ್ಚಿನ ಸಮಯವನ್ನು ಕೋರಿತು. ನ್ಯಾಯಾಲಯದ ಮನವಿಗೆ ಪ್ರತಿಕ್ರಿಯೆ ನೀಡಲು ಎನ್‌ಸಿಬಿಗೆ ಅಕ್ಟೋಬರ್ 13ರವರೆಗೆ ಕಾಲಾವಕಾಶ ನೀಡಲಾಯಿತು. ಅಕ್ಟೋಬರ್ 13: ಜಾಮೀನು ಅರ್ಜಿಯನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ವಿಚಾರಣೆ ನಡೆಸಿತು ಮತ್ತು ಅದನ್ನು ಮರುದಿನಕ್ಕೆ ಮುಂದೂಡಿತು. ಅಕ್ಟೋಬರ್ 14: ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಜಾಮೀನು ಅರ್ಜಿಯ ನಿರ್ಧಾರವನ್ನು ಅಕ್ಟೋಬರ್ 20 ರವರೆಗೆ ಮುಂದೂಡಿತು. ಅಕ್ಟೋಬರ್ 20: ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಹೊರಡಿಸಿದ 18 ಪುಟಗಳ ಆದೇಶವು ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಅಕ್ಟೋಬರ್ 26 (2021): ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರು ಸಲ್ಲಿಸಿದ ಜಾಮೀನು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿತು.

ಅಕ್ಟೋಬರ್ 28 (2021): ಬಾಂಬೆ ಹೈಕೋರ್ಟ್ ಕೆಲವು ಷರತ್ತುಗಳ ಮೇಲೆ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಜಾಮೀನು ನೀಡಿತು.

ಅಕ್ಟೋಬರ್ 30 (2021): ಆರ್ಯನ್ ಖಾನ್ 11.02 ಕ್ಕೆ ಜೈಲಿನಿಂದ ಬಿಡುಗಡೆಯಾದರು. ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದ ಶಾರುಖ್ ಖಾನ್ ಅವರನ್ನು ಅವರ ಸಿಬ್ಬಂದಿ ಕಾರಿನೊಳಗೆ ಕರೆದೊಯ್ಯುತ್ತಾರೆ. ಅವರು ಮನ್ನತ್‌ಗೆ ಹೋಗುತ್ತಾರೆ, ಅಲ್ಲಿ ಎಸ್‌ಆರ್‌ಕೆ ಅವರ ಅಭಿಮಾನಿಗಳು 'ಸ್ಟೇ ಸ್ಟ್ರಾಂಗ್' ಪೋಸ್ಟರ್‌ಗಳೊಂದಿಗೆ ಅವರನ್ನು ಸ್ವಾಗತಿಸುತ್ತಾರೆ.

ನವೆಂಬರ್ 2021: ಇಲ್ಲಿಯವರೆಗೆ, ಈ ಪ್ರಕರಣವನ್ನು ಮುಂಬೈ ವಲಯದ ಎನ್‌ಸಿಬಿ ತನಿಖೆ ನಡೆಸುತ್ತಿತ್ತು. ಇದರಲ್ಲಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಇದ್ದರು. ನವೆಂಬರ್‌ನಲ್ಲಿ, ದೆಹಲಿಯ NCB ಪ್ರಧಾನ ಕಛೇರಿಯ ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವು ಪ್ರಕರಣವನ್ನು ವಹಿಸಿಕೊಂಡಿತು.

ಡಿಸೆಂಬರ್ 2021: ಸಮೀರ್ ವಾಂಖೆಡೆ ಅವರ ಅಧಿಕಾರದ ಅವಧಿ ಕೊನೆಗೊಂಡಿತು. ಜೊತೆಗೆ ಆರ್ಯನ್ ಖಾನ್ ಎನ್‌ಸಿಬಿ ಮುಂಬೈ ಕಚೇರಿಯ ಮುಂದೆ ಸಾಪ್ತಾಹಿಕ ಹಾಜರಾಗುವುದರಿಂದ ಪರಿಹಾರವನ್ನು ಪಡೆಯುತ್ತಾರೆ. ಮಾರ್ಚ್ 2022: SIT ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲು ಹೆಚ್ಚಿನ ಸಮಯವನ್ನು ಬಯಸುತ್ತದೆ ಮತ್ತು NDPS ನ್ಯಾಯಾಲಯವು 60 ದಿನಗಳನ್ನು ನೀಡುತ್ತದೆ.

ಏಪ್ರಿಲ್ 2022: ಪ್ರಮುಖ ಸಾಕ್ಷಿಯಾದ ಪ್ರಭಾಕರ್ ಸೈಲ್ ಹೃದಯಾಘಾತದಿಂದ ನಿಧನರಾದರು. ಇವರು ಆರ್ಯನ್ ಖಾನ್ ಅವರನ್ನು ಬಂಧಿಸಲು ಎನ್‌ಸಿಬಿಯೊಳಗೆ ಹಣದ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಸೈಲ್ ಅವರು ಎನ್‌ಸಿಬಿ ಸಾಕ್ಷಿ ಕೆಪಿ ಗೋಸಾವಿ ಅವರ ಅಂಗರಕ್ಷಕ ಎಂದು ಹೇಳಿಕೊಂಡಿದ್ದರು ಮತ್ತು ಆರ್ಯನ್ ಖಾನ್ ಅವರನ್ನು ಬಂಧಿಸಿದಾಗ, ಗೋಸಾವಿ ಅವರು ಫೋನ್‌ ಕರೆಯಲ್ಲಿ ₹ 25 ಕೋಟಿ ಪಾವತಿ ಮಾಡಿ ಆರ್ಯನ್ ಬಿಡುಗಡೆಗೆ ಡೀಲ್ ಮಾಡಿಕೊಂಡಿದ್ದರು ಎಂದು ಸೈಲ್ ಆರೋಪಿಸಿದ್ದರು.

ಮೇ 27, 2022: ಎನ್‌ಸಿಬಿ ಚಾರ್ಜ್‌ಶೀಟ್ ಸಲ್ಲಿಸಿತು, ಇದರಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+