ಕಾಶ್ಮೀರದ ಟಾಪ್ 12 ಭಯೋತ್ಪಾದಕರ ಪಟ್ಟಿ ಬಹಿರಂಗ
ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರದ ಭಯಾನಕ ಉಗ್ರರ ಪಟ್ಟಿ ಬಹಿರಂಗವಾಗಿದೆ. ಸಶಸ್ತ್ರಧಾರಿಗಳಾಗಿ ಸುತ್ತುತ್ತಿರುವ ಟಾಪ್ 12 ಭಯೋತ್ಪಾದಕರ ಪಟ್ಟಿ ಇಲ್ಲಿದೆ.
ಶ್ರೀನಗರ, ಜೂನ್ 01: ಕಣಿವೆ ರಾಜ್ಯದ ಜಮ್ಮು ಮತ್ತು ಕಾಶ್ಮೀರದ ಭಯಾನಕ ಉಗ್ರರ ಪಟ್ಟಿ ಬಹಿರಂಗವಾಗಿದೆ. ಸಶಸ್ತ್ರಧಾರಿಗಳಾಗಿ ಸುತ್ತುತ್ತಿರುವ ಟಾಪ್ 12 ಭಯೋತ್ಪಾದಕರ ಪಟ್ಟಿ ಇಲ್ಲಿದೆ.
ಭಾರತದ ಗಡಿ ಭದ್ರತಾ ಪಡೆ, ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಅಧಾರದ ಮೇಲೆ ಮೋಸ್ಟ್ ಬಹುಬೇಡಿಕೆಯ ಭಯೋತ್ಪಾದಕರು ಇಲ್ಲಿದ್ದಾರೆ. 12 ಮಂದಿಯ ಪಟ್ಟಿಯನ್ನು ಗ್ರೇಡಿಂಗ್ ಮೂಲಕ ವಿಭಾಗಿಸಲಾಗಿದೆ. ಯಾವ ಸಂಘಟನೆ, ಯಾರ ಬೆಂಬಲಿಗ ಎಂಬುದನ್ನು ವಿವರಿಸಲಾಗಿದೆ.[ಭಾರತ ಸೇನೆಯಿಂದ ಪ್ರತೀಕಾರ, 6 ಪಾಕ್ ಸೈನಿಕರ ಸಾವು]
ಬುರ್ಹಾನ್ ವನಿ ಹಾಗೂ ಸಬ್ಜರ್ ಭಟ್ ಅವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೇತೃತ್ವ ವಹಿಸಿಕೊಂಡ ಬಳಿಕ ಹೆಚ್ಚೆಚ್ಚು ವಿದ್ಯಾವಂತ ಯುವಕರು ಉಗ್ರ ಸಂಘಟನೆಗಳತ್ತ ಮುಖ ಮಾಡುತ್ತಿದ್ದಾರೆ. ವನಿ ಹಾಗೂ ಭಟ್ ಇಬ್ಬರೂ 21 ವರ್ಷ ಆಸುಪಾಸಿನ ವಯೋಮಾನದಲ್ಲೇ ಉಗ್ರ ಸಂಘಟನೆಯ ಮುಂದಾಳತ್ವ ವಹಿಸಿಕೊಂಡವರು. ಉಗ್ರರ ವಿವರ ಮುಂದೆ ಓದಿ...

ಕಾಶ್ಮೀರದ ಒಸಾಮಾ
* ವಾಸೀಮ್ ಎಎಚ್ ಅಲಿಯಾಸ್ ಒಸಾಮಾ.
* ಶೋಪಿಯಾನ್ ಪ್ರಾಂತ್ಯದ ನಿವಾಸಿ.
* A+ ಭಯೋತ್ಪಾದಕ
* ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ.

ಅಬು ದುಜಾನಾ
ಅಬು ದುಜಾನಾ- ವರ್ಷಕ್ಕೆ ಮೂರು ಬಾರಿಯಾದ್ರೂ ಏಜೆನ್ಸಿಗಳ ಕಣ್ಣಿಗೆ ಕಾಣದಂತೆ ಮಾಯವಾಗುವ ಈತ ಲಷ್ಕರ್ ಇ ತೋಯ್ಬಾ ಸಂಘಟನೆಯ ಪ್ರಮುಖ ಉಗ್ರ.

ಜಾಕೀರ್ ರಷಿದ್ ಭಟ್
ಜಾಕೀರ್ ರಷಿದ್ ಭಟ್: ಹಿಜ್ಬುಲ್ ಸಂಘಟನೆಯಿಂದ ಹೊರ ಬಂದಿದ್ದಾನೆ. ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆ ವೈಮನಸ್ಯ ಬೆಳೆಸಿಕೊಂಡಿದ್ದಾನೆ. A++ ಭಯೋತ್ಪಾದಕ.

ಜುನೈದ್ ಮಟ್ಟೂ
ಜುನೈದ್ ಮಟ್ಟೂ: -ಕಳೆದ ಎರಡು ವರ್ಷಗಳಿಂದ ಲಷ್ಕರ್ ಉಗ್ರನಾಗಿ ಗುರುತಿಸಿಕೊಂಡಿದ್ದಾನೆ. ಈತ A ಕೆಟಗರಿ ಭಯೋತ್ಪಾದಕ.

ಶೌಕತ್ ತಕ್
ಶೌಕತ್ ತಕ್: ಹುಫೈಜಾ ಹೆಸರಿನಿಂದಲೂ ಗುರುತಿಸಿಕೊಂಡಿದ್ದಾನೆ. A++ ಭಯೋತ್ಪಾದಕ ಎಂದು ಹೆಸರಿಸಲಾಗಿದೆ.

ಯಾಸಿನ್ ಇಟ್ಟೂ
ಯಾಸಿನ್ ಇಟ್ಟೂ- ಹಿಜ್ಬುಲ್ ಸಂಘಟನೆಗ ಸೇರಿರುವ ಈಗ ಎ ಕೆಟಗರಿ ಭಯೋತ್ಪಾದಕ.

ರಿಯಾಜ್ ನಾಯ್ಕೂ
ರಿಯಾಜ್ ನಾಯ್ಕೂ: ಕಾಶ್ಮೀರದಲ್ಲಿ ಹಿಜ್ಬುಲ್ ನ ನೂತನ ನಾಯಕ. ಭಯಾನಕ ಉಗ್ರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾನೆ ಎಂದು ಗುಪ್ತಚರ ಇಲಾಖೆ ಹೇಳಿದೆ
-

ಅಬು ಹಮಾಸ್
ಅಬು ಹಮಾಸ್ : A++ ಉಗ್ರ, 2016ರಿಂದ ಸಕ್ರಿಯನಾಗಿರುವ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ.

ಜೀನತ್
ಜೀನತ್ ಅಲಿಯಾಸ್ ಅಲ್ಕಾಮಾ ಶೋಪಿಯಾನ್ ಪ್ರದೇಶದ ನಿವಾಸಿ. ಲಷ್ಕರ್ ಸಂಘಟನೆಯ ಉಗ್ರ.

ಸದ್ದಾಂ ಪದ್ದಾರ್
ಸದ್ದಾಂ ಪದ್ದಾರ್- ಹಿಜ್ಬುಲ್ ನ ಬುರ್ಹಾನ್ ವನಿ ಬಣದಲ್ಲಿ ಕಾಣಿಸಿಕೊಂಡಿರುವ ಸದ್ದಾಂ ಕೂಡಾ ಶೋಪಿಯಾನ್ ಪ್ರಾಂತ್ಯದ ನಿವಾಸಿ.

ಬಷೀರ್
ಬಷೀರ್ ವನಿ -ಲಷ್ಕರ್ ಭಯೋತ್ಪಾದಕ A++ ಕೆಟಗರಿಯ ಉಗ್ರ.

ಅಲ್ತಾಫ್ ದರ್
ಅಲ್ತಾಫ್ ದರ್ ಅಲಿಯಾಸ್ ಕಾಚ್ರೋ, ಹಿಜ್ಬುಲ್ ಸಂಘಟನೆಯ ಉಗ್ರ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications