ಜಿಯೋ ಜತೆ ಪೈಪೋಟಿ: ಏರ್ಟೆಲ್, ವೊಡಾಫೋನ್ ಹೊಸ ನಿರ್ಣಯ, ಗ್ರಾಹಕರ ಮೇಲೆ ಪರಿಣಾಮ
ನವದೆಹಲಿ, ಅಕ್ಟೋಬರ್ 05: ಜಿಯೋ ಜೊತೆ ಪೈಪೋಟಿ ನೀಡಲಾಗದೆ ಒದ್ದಾಡುತ್ತಿರುವ ಏರ್ಟೆಲ್, ವೊಡಾಫೋನ್ ಕಂಪಡನಿಗಳು ಹೊಸ ನಿರ್ಣಯವೊಂದನ್ನು ತಳೆದಿವೆ. ಇದರ ಪರಿಣಾಮ ಏರ್ಟೆಲ್, ವೊಡಾಫೋನ್, ಐಡಿಯಾ ಬಳಕೆದಾರರ ಮೇಲೆ ಆಗಲಿದೆ.
ಇಂಟರ್ಕನೆಕ್ಟ್ ಯೂಸರ್ ಫೀ ಅನ್ನು ಜಿಯೋಕ್ಕೆ ಸರಿಸಮಾನಿ ಮಾಡಿಕೊಳ್ಳಲೆಂದು ಏರ್ಟೆಲ್, ವೋಡಾಫೋನ್ ಐಡಿಯಾ ಸಂಸ್ಥೆಗಳು ತಾವು ನೀಡುತ್ತಿದ್ದ ರಿಂಗರ್ ಅವಧಿಯನ್ನು ಕಡಿಮೆಗೊಳಿಸಿವೆ.
ಈ ಮೊದಲು ಕರೆ ಮಾಡಿದಾಗ 45 ಸೆಕೆಂಡ್ಗಳಷ್ಟು ಕಾಲ ಮೊಬೈಲ್ ರಿಂಗ್ ಆಗಿ ನಂತರ ಕಟ್ ಆಗುತ್ತಿತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಬದಲಿಗೆ ಕೇವಲ 25 ಸೆಕೆಂಡ್ಗಳಷ್ಟೆ ರಿಂಗ್ ಆಗಿ ಕರೆ ಕಟ್ ಆಗುತ್ತದೆ.

ಕೇವಲ 25 ಸೆಕೆಂಡ್ ಅಷ್ಟೆ ರಿಂಗ್ ಆಗುತ್ತದೆ
ಏರ್ಟೆಲ್ನಿಂದ ಯಾವುದೇ ನೆಟ್ವರ್ಕ್ಗೆ ಹೋದ ಕರೆ ಇನ್ನು ಮುಂದೆ ಕೇವಲ 25 ಸೆಕೆಂಡ್ಗಳಷ್ಟು ಮಾತ್ರವೇ ರಿಂಗ್ ಆಗಲಿದೆ. 25 ಸೆಕೆಂಡ್ ಒಳಗಾಗಿ ಗ್ರಾಹಕ ಫೋನ್ ರಿಸೀವ್ ಮಾಡಲಿಲ್ಲವೆಂದರೆ ಕರೆ ಕಟ್ ಆಗಲಿದೆ.

ಜಿಯೋ ಸಹ ರಿಂಗರ್ ಅವಧಿ ಇಳಿಸಿತ್ತು
ಜಿಯೋ ಸಹ ರಿಂಗರ್ ಅನ್ನು ಕೇವಲ 20 ಸೆಕೆಂಡ್ಗೆ ಇಳಿಸಿತ್ತು. ಆದರೆ ಏರ್ಟೆಲ್ ಮತ್ತು ಇತರ ನೆಟ್ವರ್ಕ್ಗಳು ಪ್ರತಿಭಟಿಸಿದ ನಂತರ ರಿಂಗರ್ ಅನ್ನು 25 ಸೆಕೆಂಡ್ಗೆ ಹೆಚ್ಚಿಸಿದೆ. ಕೆಲವು ಪ್ರದೇಶಗಳಲ್ಲಿ ರಿಂಗರ್ ಸಮಯ ಇನ್ನೂ ಸ್ವಲ್ಪ ಹೆಚ್ಚಿದೆ.

ಬೇರೆ ನೆಟ್ವರ್ಕ್ಗೆ ಕರೆ ಹೋದಾಗ ಹಣ ಹಂಚಿಕೆ
ಯಾವುದೇ ನೆಟ್ವರ್ಕ್ನಿಂದ ಬೇರೆ ನೆಟ್ವರ್ಕ್ಗೆ ಕರೆ ಹೋದಾಗ ಹಂಚಿಕೆ ಆಗಬೇಕಾದ ಹಣವನ್ನು ಇಂಟರ್ಕನೆಕ್ಟ್ ಯೂಸರ್ ಫೀ (ಐಯುಸಿ) ಎನ್ನಲಾಗುತ್ತದೆ. ಈ ವರೆಗೆ ಏರ್ಟೆಲ್ ಮತ್ತು ವೋಡಾ ಐಡಿಯಾಗಳು ಈ ಮಾದರಿಯಲ್ಲಿ ಹಣಗಳಿಸುತ್ತಿತ್ತು. ಆದರೆ ಜಿಯೋ ತನ್ನ ಕರೆ ಅವಧಿಯನ್ನು ಮೊಟಕುಗೊಳಿಸಿದ ಮೇಳೆ ಜಿಯೋ ಯಿಂದ ಬೇರೆ ನೆಟ್ವರ್ಕ್ಗೆ ಮಿಸ್ಡ್ಕಾಲ್ಗಳೇ ಹೆಚ್ಚಾಗಿ ಬೇರೆ ನೆಟ್ವರ್ಕ್ನಿಂದ ಜಿಯೋಗೆ ಕರೆ ಹೋಗುವುದು ಹೆಚ್ಚಾಗಿತ್ತು.

ಜಿಯೋದ ಬುದ್ಧಿವಂತಿಕೆ ಅರ್ಥಮಾಡಿಕೊಂಡ ಏರ್ಟೆಲ್
ಜಿಯೋದ ಬುದ್ಧಿವಂತಿಕೆ ಅರಿತ ಏರ್ಟೆಲ್ ಮತ್ತು ಇತರ ನೆಟ್ವರ್ಕ್ ಸಂಸ್ಥೆಗಳು ಕೂಡಲೇ ತಮ್ಮ ರಿಂಗರ್ ಅವಧಿಯನ್ನೂ ಸಹ ಕಡಿಮೆ ಮಾಡಿದೆ. ಆದರೆ ಇದರಿಂದ ಗ್ರಾಹಕರಿಗೆ ತೊಂದರೆ ಆಗಲಿದೆ. ಕೆಲವೇ ಸೆಕೆಂಡ್ಗಳಲ್ಲಿ ಕರೆ ಕಟ್ ಆಗಲಿದ್ದು, ಮತ್ತೆ ಕರೆ ಮಾಡಿ ಮಾತನಾಡಲು ಸಮಯ ವ್ಯರ್ಥವಾಗಲಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications