Dowry Doctor: 50 ಕೋಟಿ ವಧುದಕ್ಷಿಣೆ ಕೇಳಿದ ಏಮ್ಸ್ ವೈದ್ಯೆ- ಸಖತ್ ವೈರಲ್ ಆಯ್ತು ಪೋಸ್ಟ್- ಅಯ್ಯಯ್ಯೋ.. ವರನೇ...!
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್ನಲ್ಲಿ, ಏಮ್ಸ್ನಲ್ಲಿ ವೈದ್ಯೆಯಾಗಿರುವ ಮಹಿಳೆ ತಮ್ಮ ಮದುವೆಗೆ ವಧುದಕ್ಷಿಣೆಯಾಗಿ 50 ಕೋಟಿ ರೂಪಾಯಿ ನೀಡುವಂತೆ ವರನಿಗೆ ಡಿಮ್ಯಾಂಡ್ ಮಾಡಿದ್ದಾರೆ. ಇದನ್ನು ಕೇಳಿ ಸೋಷಿಯಲ್ ಮೀಡಿಯಾ ಧಂಗಾಗಿ ಹೋಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಮೆಂಟ್ಗಳು ಹರಿದಾಡುತ್ತಿವೆ. ವೈದ್ಯರ ಬುದ್ಧಿವಂತಿಕೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ಇಷ್ಟು ಹಣ ತೆಗೆದುಕೊಂಡು ವೈದ್ಯರು ಏನು ಮಾಡುತ್ತಾರೆ ಎಂದು ಕೆಲವರು ಕೇಳುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿ ಅಂದರೆ ಹುಡುಗಿ ಸ್ವತಃ ವೈದ್ಯೆ. ಆಕೆಯ ಗಳಿಕೆ ಸಾಮಾನ್ಯ ಹುದ್ದೆಗಳಿಗಿಂತ ಹೆಚ್ಚಾಗಿಯೇ ಇರುತ್ತದೆ. ಅದಾಗ್ಯೂ ವೈದ್ಯೆ 50 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದನ್ನು ಕೇಳಿ ಜನ ಶಾಕ್ ಆಗಿದ್ದಾರೆ.

This is nauseating to read. The guy is a low life 😭
— 𝗡𝗶𝗵𝗮𝗿 𝗗𝗲𝘀𝗮𝗶 MD, DM (@nihardesai7) October 28, 2024
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಡಾಕ್ಟರ್ ಫೀನಿಕ್ಸ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಹೊಂದಿರುವ ಮಹಿಳಾ ಬಳಕೆದಾರರು ತಮ್ಮ ಸ್ನೇಹಿತೆ, ಏಮ್ಸ್ನ ಉನ್ನತ ಶ್ರೇಣಿಯ ಮೂತ್ರಶಾಸ್ತ್ರಜ್ಞರಿಂದ ವಧುದಕ್ಷಿಣೆಯಾಗಿ 50 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪೋಸ್ಟ್ ಪ್ರಕಾರ, ಮದುವೆಯಾಗುವ ಹುಡುಗಿ ಹೈದರಾಬಾದ್ನಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ ಅನಸ್ತೇಶಿಯಾ ಸ್ಪೆಷಲಿಸ್ಟ್. ವೈದ್ಯ ವಧುವಿನ ಈ ಬೇಡಿಕೆಯಿಂದ ವರ ಕಂಗಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬೃಹತ್ ಮೊತ್ತವನ್ನು ಸಂಗ್ರಹಿಸಲು ಅವರ ಕುಟುಂಬ ಎಲ್ಲ ರೀತಿಯ ವ್ಯವಸ್ಥೆ ಕೂಡ ಮಾಡುತ್ತಿದೆಯಂತೆ.
While I agree dowry is wrong , why aren't we considering the difference in branch. Mbbs girls are demanding MD boys. MD girls are demanding DM girls. Don't you fume when you see this? Reverse dowry is also bad!
— Dr. Joel Jack (@JoElJaCkTaLkS) October 28, 2024
ಹುಡುಗ ಮತ್ತು ಹುಡುಗಿ ಇಬ್ಬರೂ ತೆಲುಗು ಕುಟುಂಬದವರು. ತೆಲುಗು ಸಮುದಾಯದಲ್ಲಿ ವಧುದಕ್ಷಿಣೆ ಕಡ್ಡಾಯ ಎಂದು ಹುಡುಗಿಯ ಮನೆಯವರು ವಾದಿಸುತ್ತಾರೆ. ಹೀಗಾಗಿ ವಧುದಕ್ಷಿಣೆ ತೆಗೆದುಕೊಳ್ಳಬೇಕಾದಾಗ ಇಷ್ಟು ವಿದ್ಯಾಭ್ಯಾಸ, ಅರ್ಹತೆ, ರ್ಯಾಂಕ್ ಇದ್ದಾಗ ಡಿಮ್ಯಾಂಡ್ ಇಲ್ಲದೇ ಇದ್ದರೆ ಪ್ರಯೋಜನ ಏನು ಎಂದು ಪೋಸ್ಟ್ ಮಾಡಿರುವ ಮಹಿಳೆ ಬರೆದುಕೊಂಡಿದ್ದಾರೆ.

X ನಲ್ಲಿ ಈ ಪೋಸ್ಟ್ ಅನ್ನು ಅಕ್ಟೋಬರ್ 28 ರಂದು ಬೆಳಿಗ್ಗೆ 11.45 ರ ಸುಮಾರಿಗೆ ಮಾಡಲಾಗಿದೆ. ಈ ಪೋಸ್ಟ್ ಅನ್ನು ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವರದಕ್ಷಿಣೆಯಾಗಿ 50 ಕೋಟಿಯನ್ನು ನೀಡಲು, ಹುಡುಗನ ಪೋಷಕರು ತಮ್ಮ ನಿವೃತ್ತಿಯ ಹಣವನ್ನು ನೀಡಲು ನಿರ್ಧಾರಿಸಿದ್ದಾರೆ ಎನ್ನಲಾಗುತ್ತಿದೆ.
ತೆಲುಗು ಸಮುದಾಯದಲ್ಲಿ ಮದುವೆಯಾದರೆ ವಧುದಕ್ಷಿಣೆ ನೀಡಬೇಕಾಗುತ್ತದೆ ಎಂಬುದು ವಧು ಪೋಷಕರ ವಾದ. ಆದರೆ ಈ ನಿರ್ಧಾರ ಅವನ ಭವಿಷ್ಯವನ್ನು ಅಸುರಕ್ಷಿತವಾಗಿಸುತ್ತದೆ ಮಾತ್ರವಲ್ಲ, ಪೋಷಕರ ಇತರ ಮಕ್ಕಳಿಗೂ ಕಷ್ಟವಾಗುತ್ತದೆ. ಈ ಪೋಸ್ಟ್ಗೆ ಸಾಕಷ್ಟು ಕಾಮೆಂಟ್ಗಳು ಬಂದಿವೆ. ಇವುಗಳಲ್ಲಿ ವಿದ್ಯಾವಂತರು ವರದಕ್ಷಿಣೆ ಪದ್ಧತಿಯನ್ನು ಉತ್ತೇಜಿಸುವುದನ್ನು ಜನರು ಟೀಕಿಸಿದ್ದಾರೆ.
ಪೋಸ್ಟ್ಗೆ ಕಮೆಂಟ್ ಮಾಡಿದ ಜನರು ವರದಕ್ಷಿಣೆ ಕೇಳಿದ ವೈದ್ಯೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಜನ ವಧುವನ್ನು ದುರಾಸೆಯ ಮಹಿಳೆ ಎಂದೂ ಕರೆದಿದ್ದಾರೆ. ಇದೇ ವೇಳೆ ಕೆಲವರು ಈ ವಿಚಾರದಲ್ಲಿ ವಧು ಹಾಗೂ ಆಕೆಯ ಪೋಷಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ವಧು ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕ ಪಡೆದು ಕೆಲಸ ಮಾಡುತ್ತಿದ್ದಾಳೆ ಎಂಬುದು ಪೋಷಕರ ವಾದ. ವರದಕ್ಷಿಣೆಯಿಂದ ಅವಳು ತನ್ನ ಜೀವನದಲ್ಲಿ ಚೆನ್ನಾಗಿ ಬದುಕಬಲ್ಲಳು ಮತ್ತು ತನ್ನದೇ ಆದ ಗುರುತನ್ನು ರಚಿಸಬಹುದು ಎನ್ನುವುದು ಪೋಷಕರ ಆಸೆ. ಆದರೆ ಇದನ್ನು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಬಳಕೆದಾರರು ಬರೆದಿದ್ದಾರೆ. ಜನರು ಹೇಗೆ ನಾಚಿಕೆಯಿಲ್ಲದೆ ಹಣ ಕೇಳುತ್ತಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಜನ ಕಾಮೆಂಟ್ ಮಾಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications