Get Updates
Get notified of breaking news, exclusive insights, and must-see stories!

ಬಿ ಎಸ್ ಪಿ ಮುಖಂಡನ ಹತ್ಯೆ: ಆದಿತ್ಯನಾಥ್ ಗೆ ಸವಾಲು?!

ಅಲಹಾಬಾದಿನ ತಮ್ಮ ಕಚೇರಿಯಿಂದ ಕಾರ್ ಪಾರ್ಕಿಂಗ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಬಿ ಎಸ್ ಪಿ ಮುಖಂಡ ಮೊಹಮ್ಮದ್ ಶಮಿ ಅವರನ್ನು ಗುಂಡಿಕ್ಕಿ ಕೊಲೆಮಾಡಿದ್ದಾರೆ.

ಅಲಹಾಬಾದ್, ಮಾರ್ಚ್ 20: ಮೊಹಮ್ಮದ್ ಶಮಿ (60) ಎಂಬ ಉತ್ತರ ಪ್ರದೇಶದ ಅಲಹಾಬಾದ್ ನ ಬಿ ಎಸ್ ಪಿ ಮುಖಂಡನೊಬ್ಬ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಘಟನೆ ಮಾರ್ಚ್ 19, ಭಾನುವಾರ ರಾತ್ರಿ ನಡೆದಿದೆ.

ಅಲಹಾಬಾದಿನ ತಮ್ಮ ಕಚೇರಿಯಿಂದ ಕಾರ್ ಪಾರ್ಕಿಂಗ್ ಬಳಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮೊಹಮ್ಮದ್ ಶಮಿ ಅವರನ್ನು ಗುಂಡಿಕ್ಕಿ ಕೊಲೆಮಾಡಿದ್ದಾರೆ.[ಯೋಗಿ ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ]

A BSP leader in allahabad shot dead yesterday

ಬಹುಜನ ಸಮಾಜವಾದಿ ಪಕ್ಷದ ಸ್ಥಳೀಯ ಮುಖಂಡರಲ್ಲಿ ಪ್ರಮುಖರಾಗಿದ್ದ ಇವರ ಸಾವಿನಿಂದಾಗಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಎಂದು ಬಿ ಎಸ್ ಪಿ ಬೆಂಬಲಿಗರು ನೂತನ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ! ಹಂತಕರ ಪತ್ತೆಗೆ ತನಿಖೆ ನಡೆಯುತ್ತಿದೆ.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]

ಪ್ರಮಾಣ ವಚನ ಸ್ವೀಕರಿಸಿದ ದಿನವೇ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಗುರುತರ ಹೊಣೆ ಹೆಗಲೇರಿದೆ. ಈ ಜವಾಬ್ದಾರಿಯನ್ನು ಆದಿತ್ಯನಾಥ್ ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+