ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!
ಒಂದು ಷರಟು ತೆಗೆದುಕೊಂಡರೆ ಮತ್ತೊಂದು ಫ್ರೀ! ಎರಡು ಸೀರೆಗೆ ಒಂದರ ಬೆಲೆ ಅಷ್ಟೇ. ಇಂಥ ಕೊಡುಗೆಗಳನ್ನು ಕೇಳಿರ್ತೀರಿ, ನೋಡಿರ್ತೀರಿ ಹಾಗೂ ಪಡೆದಿರ್ತೀರಿ. ಈಗ ಅಂಥ ಆಫರ್ ಗಳನ್ನು ಕೊಡುವ ಸರದಿ ಎಂಜಿನಿಯರ್ ಕಾಲೇಜುಗಳದು. ಏಕೆಂದರೆ, ಅನುಮತಿ ಪಡೆದ ಕೋರ್ಸ್ ಗಳ ಸೀಟು ಭರ್ತಿಯಾಗದೆ ಹಾಗೇ ಉಳಿದುಬಿಟ್ಟರೆ ಖಾಸಗಿ ಕಾಲೇಜುಗಳಲ್ಲಿ ಆ ಕೋರ್ಸ್ ಗಳ ಮಾನ್ಯತೆ ರದ್ದಾಗಬಹುದು.
ಎಂಜಿನಿಯರಿಂಗ್ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲೇಬೇಕು ಅನ್ನೋ ಒತ್ತಡದಲ್ಲಿ ಫೀ 2,500 ರುಪಾಯಿ, ಪುಕ್ಕಟೆ ಲ್ಯಾಪ್ ಟಾಪ್. ಅಷ್ಟೇ ಅಲ್ಲ, ಪುಕ್ಕಟೆ ದ್ವಿಚಕ್ರ ವಾಹನ ಕೂಡ ನೀಡಲಾಗುತ್ತಿದೆಯಂತೆ. ಇವೆಲ್ಲ ವಿದ್ಯಾರ್ಥಿಗಳನ್ನು ಸೆಳೆಯುವುದಕ್ಕೆ ಮಾಡುತ್ತಿರುವ ಮಾರ್ಕೆಟಿಂಗ್ ತಂತ್ರ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ (AICTE) ಬಿಡುಗಡೆ ಮಾಡಿದ ಅಂಕಿ-ಅಂಶದ ಪ್ರಕಾರ, ಎಂಜಿನಿಯರಿಂಗ್ ನ ನಾನಾ ಕೋರ್ಸ್ ಗಳೆಲ್ಲವೂ ಸೇರಿ ಭಾರತದಾದ್ಯಂತ 15.5 ಲಕ್ಷ ಸೀಟುಗಳಿವೆ. ಇನ್ನು ಎಂಜಿನಿಯರಿಂಗ್ ಕಾಅಲೇಜುಗಳ ಸಂಖ್ಯೆ 3291. ಆ ಪೈಕಿ 2016-17ರಲ್ಲಿ ಶೇ 50ರಷ್ಟು ಸೀಟುಗಳು ಖಾಲಿಖಾಲಿ. 2015-16ರಲ್ಲೂ ಅದೇ ಸ್ಥಿತಿ. ಒಟ್ಟು 14.76 ಲಕ್ಷ ಸೀಟುಗಳ ಪೈಕಿ ಅರ್ಧದಷ್ಟನ್ನು ಕೇಳುವವರೇ ಇಲ್ಲ.

ರಿಯಾಯಿತಿ, ಮೊದಲ ಸೆಮಿಸ್ಟರ್ ಫೀ ಪೂರ್ತಿ ಮನ್ನಾ
ಇನ್ನು ಈ ವರ್ಷದ ಕಥೆಯೇ ಕೇಳಿ: ಗುಜರಾತ್ ನಲ್ಲಿನ ನಡೆದ ಮೊದಲ ಸುತ್ತಿನ ಪ್ರವೇಶ ಪ್ರಕ್ರಿಯೆ ನಂತರ 55,422 ಸೀಟುಗಳ ಪೈಕಿ 34,622 ಖಾಲಿಯಿದ್ದವು. ಇಂಥ ಪರಿಸ್ಥಿತಿಯನ್ನು ಎದುರಿಸುವ ಕಾರಣಕ್ಕೆ ಕಾಲೇಜುಗಳು ನಾನಾ ಆಫರ್ ಗಳನ್ನು ಕೊಡುತ್ತಿವೆ. ಶುಲ್ಕದಲ್ಲಿ ರಿಯಾಯಿತಿ, ಮೊದಲ ಸೆಮಿಸ್ಟರ್ ಫೀ ಪೂರ್ತಿ ಮನ್ನಾ, ಪುಕ್ಕಟೆ ಲ್ಯಾಪ್ ಟಾಪ್.

ಕಾಲೇಜು ಫೀ ವರ್ಷಕ್ಕೆ 2,500 ರುಪಾಯಿ ಮಾತ್ರ
ಅಷ್ಟೇ ಅಲ್ಲ, ನಾಲ್ಕು ವರ್ಷದ ಕೋರ್ಸ್ ಫೀ ಒಟ್ಟಿಗೆ ಕಟ್ಟುವವರಿಗೆ ಹಾಸ್ಟೆಲ್ ಮತ್ತು ಸಂಚಾರಕ್ಕೆ ಆಗುವ ವೆಚ್ಚದ ಅರ್ಧದಷ್ಟು ಮಾತ್ರ. ಇನ್ನೂ ಕೆಲವು ಕಡೆ ದ್ವಿಚಕ್ರ ವಾಹನವನ್ನೇ ಬಿಟ್ಟಿ ಕೊಡುತ್ತಿದ್ದಾರೆ. ಗುಜರಾತ್ ನ ಒಂದು ಎಂಜಿನಿಯರಿಂಗ್ ಕಾಲೇಜು ಫೀ ವರ್ಷಕ್ಕೆ 2,500 ರುಪಾಯಿ ಅಂದರೆ ನಂಬ್ತೀರಾ!?

ಒಬ್ಬ ವಿದ್ಯಾರ್ಥಿಗೆ ಪ್ರವೇಶ ಕೊಡಿಸಿದರೆ 10,000 ಕಮಿಷನ್
ಕೆಲ ಕಾಲೇಜುಗಳಲ್ಲಂತೂ ಕಮಿಷನ್ ಏಜೆಂಟ್ ಗಳ ಮೂಲಕ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಹಾಗೆ ಒಬ್ಬ ವಿದ್ಯಾರ್ಥಿಯನ್ನ್ನು ಕರೆತಂದು ಪ್ರವೇಶ ಕೊಡಿಸಿದರೆ 10,000 ಕಮಿಷನ್ ಕೊಡಲಾಗುತ್ತಿದೆ. ಹಲವು ವರ್ಷಗಳಿಂದ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬಹಳ ಮಾನ್ಯತೆ ಇತ್ತು. ಇತ್ತೀಚೆಗೆ ಅಂಥ ಮಾನ್ಯತೆ ಸಿಗುತ್ತಿಲ್ಲ. ಭಾರತದಲ್ಲಿ ಗುಣಮಟ್ಟದ ಎಂಜಿನಿಯರಿಂಗ್ ಗಳು ಹೊರಬರುತ್ತಿಲ್ಲ ಎಂಬ ಆಕ್ಶ್ಶೇಪವೂ ಕೇಳಿಬರುತ್ತಿದೆ.

ಏಕೆ ಈ ರೀತಿ ಕೊಡುಗೆಗಳನ್ನು ಕೊಡ್ತಾರೆ?
ಹ್ಞಾಂ, ಎಂಜಿನಿಯರಿಂಗ್ ಕಾಲೇಜುಗಳು ಏಕೆ ಈ ರೀತಿ ಕೊಡುಗೆಗಳನ್ನು ನೀಡಿ, ವಿದ್ಯಾರ್ಥಿಗಳನ್ನು ಸೆಳೆಯಬೇಕು ಅನ್ನೋ ಪ್ರಶ್ನೆ ನಿಮಗೆ ಬಂದಿರಬಹುದು. ಏಕೆಂದರೆ, ವರ್ಷಗಳ ಕಾಲ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಬಿದ್ದಿದ್ದವು ಅಂದರೆ AICTE ನಿಯಮಗಳ ಅನ್ವಯ ಆ ಕೋರ್ಸ್ ಗಳನ್ನು ನಿಲ್ಲಿಸಿ, ಬಾಗಿಲು ಮುಚ್ಚಿಕೊಂಡು ಹೋಗಿಬೇಕಾಗುತ್ತದೆ. ಆದ್ದರಿಂದಲೇ ಈಗ ಕಾಲೇಜುಗಳೇ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿವೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications