ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕದನವಿರಾಮ ಉಲ್ಲಂಸಿದ ಪಾಕ್: ಓರ್ವ ಬಿಎಸ್ ಎಫ್ ಯೋಧ ಹುತಾತ್ಮ
ಆರ್ ಎಸ್ ಪುರ(ಜಮ್ಮು-ಕಾಶ್ಮೀರ), ಜನವರಿ 18: ಜಮ್ಮು ಕಾಶ್ಮೀರದ ಆರ್ ಎಸ್ ಪುರದಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಗೆ ಓರ್ವ ಬಿಎಸ್ ಎಫ್ ಯೋಧ ಹುತಾತ್ಮರಾಗಿದ್ದಾರೆ.
ಜಮ್ಮು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಬಳಿ ಜ.17 ರ ರಾತ್ರಿ ಇದ್ದಕ್ಕಿದ್ದಂತೆ ಪಾಕಿಸ್ತಾನ ಗುಂಡಿನ ದಾಳಿ ಆರಂಭಿಸಿದ ಪರಿಣಾಮ ಈ ಘಟನೆ ನಡೆದಿದ್ದು, ಇನ್ನೋರ್ವ ಸೈನಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಹುತಾತ್ಮ ಯೋಧನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.
ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ, ಅಲ್ಲಿನ ನಾಲ್ವರು ಸೈನಿಕರನ್ನು ಹತ್ಯೆಗೈಯ್ಯುವ ಮೂಲಕ ಭಾರತ ಎರಡು ದಿನಗಳ ಹಿಂದಷ್ಟೇ ಸರಿಯಾದ ಉತ್ತರ ನೀಡಿತ್ತು. ಈ ದಾಳಿ ಜಮ್ಮು-ಕಾಶ್ಮೀರದ ಪೂಂಛ್ ಬಳಿ ನಡೆದಿತ್ತು.
Comments
terrorism terrorist indian army soldier pakistan india kashmir ಭಯೋತ್ಪಾದನೆ ಭಯೋತ್ಪಾದಕ ಭಾರತೀಯ ಸೇನೆ ಸೈನಿಕ ಭಾರತ ಕಾಶ್ಮೀರ
English summary
Heavy firing is underway here in RS Pura sector since 11 p.m. on Wednesday, Sub-Divisional Magistrate (SDM) of the sector said on Jan 18th.
Story first published: Thursday, January 18, 2018, 7:37 [IST]