ಅದೊಂದು ಸಣ್ಣ ಕೆಲಸ ಮಾಡಿದ್ದರೆ ನಂದಮೂರಿ ಹರಿಕೃಷ್ಣ ಸಾಯುತ್ತಿರಲಿಲ್ಲವೇನೋ!
Recommended Video

ಹೈದರಾಬಾದ್, ಆಗಸ್ಟ್ 29: ನಂದಮೂರಿ ಹರಿಕೃಷ್ಣ ಇನ್ನಿಲ್ಲ... ಎಂಥ ಸುದ್ದಿ ಇದು! 61 ವರ್ಷ ಎಂದರೆ ಸಾಯುವ ವಯಸ್ಸಲ್ಲವೇ ಅಲ್ಲ. ಆದರೆ ವಿಧಿ ಬೇರೆಯೇ ಇತ್ತು. ರಾಜಕಾರಣಿಯಾಗಿ, ನಟರಾಗಿ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಹರಿಕೃಷ್ಣ ಮೃತರಾಗಿದ್ದಾರೆ.
ಅಕಸ್ಮಾತ್ ಹರಿಕೃಷ್ಣ ಅವರು ಸೀಟ್ ಬೆಲ್ಟ್ ಹಾಕಿದ್ದರೆ ಅವರು ಸಾಯುವ ಸಂದರ್ಭ ಒದಗಿಯೇ ಬರುತ್ತಿರಲಿಲ್ಲ ಎಂಬ ಚರ್ಚೆ ಇದೀಗ ಎದ್ದಿದೆ. ಅಪಘಾತದ ಚಿತ್ರಗಳನ್ನು ನೋಡಿದರೆ ಅವರ ತಲೆಗೆ ಬಲವಾಗಿ ಏಟು ಬಿದ್ದಿದೆ. ಸೀಟ್ ಬೆಲ್ಟ್ ಹಾಕಿದ್ದರೆ ಹರಿಕೃಷ್ಣ ಕಾರಿನಿಂದ ಆಚೆ ಬೀಳುವ ಸಂಭವ ಇರಲಿಲ್ಲ. ಆಗ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂಬುದು ಕೆಲವರ ವಾದ.
ಸೀಟ್ ಬೆಲ್ಟ್ ಧರಿಸುವುದು, ಹೆಲ್ಮೇಟ್ ಧರಿಸುವುದನ್ನು ಇಂದು ಭಾರತದ ಹಲವು ರಾಜ್ಯಗಳು ಕಡ್ಡಾಯಗೊಳಿಸಿವೆ. ದಿನೇ ದಿನೇ ಏರುತ್ತಿರುವ ಅಪಘಾತ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ತೆಗೆದುಕೊಂಡ ಈ ಕ್ರಮವನ್ನು ಎಷ್ಟೋ ಜನ ಪಾಲಿಸುತ್ತಿಲ್ಲ.

ಅಪ್ಪ-ಮಗ ಮೃತರಾಗಿದ್ದು ಒಂದೇ ಹೈವೆಯಲ್ಲಿ!
61 ವರ್ಷ ವಯಸ್ಸಿನ ನಂದಮೂರಿ ಹರಿಕೃಷ್ಣ ಇಂದು ಬೆಳಿಗ್ಗೆ ಆಂಧ್ರಪ್ರದೇಶದ ನಲ್ಗೊಂಡ್ ಬಳಿ ನಡೆದ ಅಪಘಾತದಲ್ಲಿ ಮೃತರಾದರು. ದುರಂತವೆಂದರೆ 2014 ರ ಡಿಸೆಂಬರ್ ನಲ್ಲಿ ಹರಿಕೃಷ್ಣ ಅವರ ಪುತ್ರ ನಂದಮೂರಿ ಜಾನಕಿರಾಮ್ ಮೃತಪಟ್ಟಿದ್ದು ಸಹ ಇದೇ ಹೈವೆಯಲ್ಲಿ!

ಇಬ್ಬರದೂ ಕಾರ್ ನಂಬರ್ 2323!
ಕಾಕತಾಳೀಯವೋ, ದುರದೃಷ್ಟವೋ ಏನೋ. ಒಟ್ಟಿನಲ್ಲಿ ಅಂದು ಮೃತರಾದ ಜಾನಕಿ ರಾಮ್ ಅವರ ಕಾರಿನ ಸಂಖ್ಯೆ AP 29 BD 2323 ಆಗಿದ್ದರೆ, ಇಂದು ಮೃತರಾದ ಹರಿಕೃಷ್ಣ ಅವರ ಕಾರಿನ ಸಂಖ್ಯೆ AP 28 BW 2323!

ಶೇ.75 ರಷ್ಟು ಜನ ಸೀಟ್ ಬೆಲ್ಟ್ ಹಾಕೋಲ್ಲ
ವರದಿಯೊಂದರ ಭಾರತದಲ್ಲಿ ಶೇ.75 ರಷ್ಟು ಚಾಲಕರು ಸೀಟ್ ಬೆಲ್ಟ್ ಉಪಯೋಗಿಸುವುದಿಲ್ಲ. ಇದರಿಂದ ಪ್ರತಿದಿನ ಸುಮಾರು 15 ಕ್ಕೂ ಹೆಚ್ಚು ಜನ ಮೃತರಾಗುತ್ತಿದ್ದಾರೆ. ಆದರೆ ಯುರೋಪಿಯನ್ ದೇಶಗಳಲ್ಲಿ ಶೇ.98 ರಷ್ಟು ಜನ ಸೀಟ್ ಬೆಲ್ಟ್ ಧರಿಸುತ್ತಾರೆ!
2016ರಲ್ಲಿ ಭಾರತದಲ್ಲಿ ಅಪಘಾತಕ್ಕೊಳಗಾಗಿ ಮೃತರಾದವರ ಸಂಖ್ಯೆ 1.5 ಲಕ್ಷ! ಅದರಲ್ಲಿ ಸೀಟ್ ಬೆಲ್ಟ್ ಉಪಯೋಗಿಸದ ಕಾರಣ ಮೃತರಾದವರು 5,638 ಜನ!

ಸುರಕ್ಷಾ ವಿಧಾನವೇ ಅಲ್ಲ!
ಭಾರತದಲ್ಲಿರುವ ಶೇ.23 ರಷ್ಟು ವಾಹನ ಚಾಲಕರು ಸೀಟ್ ಬೆಲ್ಟ್ ಅನ್ನು ಸುರಕ್ಷಾ ವಿಧಾನ ಎಂದೇ ಭಾವಿಸಿಲ್ಲ!
ಆದರೆ ಸೀಟ್ ಬೆಲ್ಟ್ ಧರಿಸುವುದರಿಂದ ಅಪಘಾತದಿಂದ ಸಂಭವಿಸಬಹುದಾದ ಪ್ರಾಣಹಾನಿಯನ್ನು ಖಂದಿತವಾಗಿಯೂ ತಪ್ಪಿಸಬಹುದು ಎಂಬುದು ಟ್ರಾಫಿಕ್ ಪೊಲೀಸರ ಕಳಕಳಿ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications