Get Updates
Get notified of breaking news, exclusive insights, and must-see stories!

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತೆಂದು ಹೆದರಬೇಡಿ: ಓವೈಸಿ ಅಭಯ

ಹೈದರಾಬಾದ್, ಜೂನ್ 01: "ಬಿಜೆಪಿ ಅಧಿಕಾರಕ್ಕೆ ಬಂತೆಮದು ಹೆದರಬೇಡಿ. ಭಾರತೀಯ ಸಂವಿಧಾನ ಎಲ್ಲ ಮತೀಯರಿಗೂ ಸಮಾನ ಸ್ವಾತಂತ್ರ್ಯ ನೀಡಿದೆ" ಎಂದು ಎಐಎಂಐಎಂ ಮುಖಂಡ, ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಮುಸ್ಲಿಮರಿಗೆ ಅಭಯ ನೀಡಿದ್ದಾರೆ.

"ಮೋದಿ ದೇವಾಲಯಕ್ಕೆ ಹೋಗುವುದಾದರೆ ನಾವು ಮಸೀದಿಗೆ ಹೋಗಬಹುದು. ಮೋದಿ ಗುಹೆಯಲ್ಲಿ ಕೂರುವುದಾದರೆ ನಾವೂ ಮಸೀದಿಯಲ್ಲಿ ಕೂತು ಪ್ರಾರ್ಥಿಸಬಹುದು. ಮುನ್ನೂರಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ದೊಡ್ಡ ಸಾಧನೆಯೇನಲ್ಲ. ಭಾರತದಲ್ಲಿರುವುದು ಜೀವಂತ ಸಂವಿಧಾನ. ಮುನ್ನೂರು ಸೀಟುಗಳಿಂದ ಸಂವಿಧಾನ ನೀಡಿದ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

"ಉತ್ತರ ಪ್ರದೇಶದಲ್ಲೂ ಬಿಜೆಪಿ ಗೆದ್ದಿದೆ. ಜನರು ಅಲ್ಲಿ ಏನಾಗಿದೆ ಎಬುದನ್ನು ಅರ್ಥಮಾಡಿಕೊಳ್ಳಬೇಕು. ಮುನ್ನೂರು ಸೀಟು ಗೆದ್ದು ಭಾರತವನ್ನೇ ಆಳಬಹುದು ಎಂದು ಬಿಜೆಪಿ ಭಾವಿಸಿದ್ದರೆ ಅದು ತಪ್ಪು. ನಾನು ನಿಮಗೆ ಭಾಷೆ ಕೊಡುತ್ತೇನೆ, ಅಸಾದುದ್ದಿನ್ ಓವೈಸಿ ಭಾರತಕ್ಕಾಗಿ ಹೋರಾಡುತ್ತಾರೆ! ಎಲ್ಲ ದಲಿತರೂ ಒಂದಾಗಬೇಕೆಂದು ನಾನು ಈ ಮೂಲಕ ಕೋರುತ್ತೇನೆ" ಎಂದು ಅವರು ಹೇಳಿದರು.

Asaduddin Owaisi tells Muslims Dont worry about BJPs return to Power

ಇನ್ನೂರೈವತ್ತಕ್ಕೂ ಹೆಚ್ಚು ಜನರ ಪ್ರಾಣ ತೆಗೆದ ಶ್ರೀಲಂಕಾದ ನಡೆದ ಬಾಂಬ್ ದಾಳಿಗೆ ಓರ್ವ ಮುಸ್ಲಿಮನೇ ಕಾರಣ ಎಂಬುದು ತಿಳಿಯಿತು. ಆದರೆ ಅವರಿಗೆ ಯಾರು ಇಸ್ಲಾಂ ಬಗ್ಗೆ ಪಾಠ ಮಾಡಿದವರು? ಅವರಿಗೆ ನಿಜವಾದ ಇಸ್ಲಾಂ ಗೊತ್ತಿಲ್ಲ. ಮುಸ್ಲಿಂ ಮತಕ್ಕೆ ಅವರೆಲ್ಲ ಕಂಟಕ" ಎಂದು ಓವೈಸಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+