Vande Bharat: ಬೆಂಗಳೂರು-ಬೆಳಗಾವಿವರೆಗೆ ಮತ್ತೊಂದು 'ವಿಬಿ' ರೈಲು? ಹಾಲಿ ರೈಲು ಬೆಳಗಾವಿ ವಿಸ್ತರಣೆಗಿರುವ ತೊಡಕೇನು?
ಹುಬ್ಬಳ್ಳಿ, ಜುಲೈ 05: ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಾರೀ ಜನಪ್ರಿಯವಾದ ಬೆಂಗಳೂರು-ಧಾರಾವಾಡ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಕೂಗಿ ಕೇಳಿ ಮತ್ತೆ ಜೋರಾಗಿದೆ. ಹಾಲಿ ರೈಲನ್ನೇ ವಿಸ್ತರಣೆ ಮಾಡಬೇಕೋ ಅಥವಾ ಬೆಂಗಳೂರು-ಬೆಳಗಾವಿ ಮಧ್ಯೆ ಪ್ರತ್ಯೇಕ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕೋ ಎಂಬ ವಿಷಯದಲ್ಲಿ ಹಗ್ಗಜಗ್ಗಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು-ಧಾರವಾಡದ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಾಗಿನಿಂದ ಈ ರೈಲು ಸಂಚಾರವನ್ನು ಬೆಳಗಾವಿ ವಿಸ್ತರಿಸಬೇಕೆಂಬ ಸಾಮಾನ್ಯ ಬೇಡಿಕೆಯ ಜನಪ್ರತಿನಿಧಿಗಳು ಹಾಗೂ ಜನರಿಂದ ಕೇಳಿ ಬರುತ್ತಿದೆ. ಆದರೆ, ಈ ರೈಲು ಸಂಚಾರವನ್ನು ವಿಸ್ತರಿಸಿದರೆ 'ಹುಬ್ಬಳ್ಳಿ-ಧಾರವಾಡ'ದ ಜನರಿಗೆ ತೊಂದರೆ ಆಗಲಿದೆಯೇ ಅಂತಲೂ ಯೋಚಿಸಲಾಗುತ್ತಿದೆ.

ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ಅಥವಾ ಮತ್ತೊಂದು ರೈಲು ಓಡಿಸುವ ಕುರಿತು ಚರ್ಚಿಸಲು ಜನಪ್ರತಿನಿಧಿಗಳು ಹಾಗೂ ನೈಋತ್ಯ ಅಧಿಕಾರಿಗಳ ನಡುವೆ ಹಲವು ಸುತ್ತಿನ ಸಭೆಗಳು ನಡೆದಿವೆ.
ಸದ್ಯದ ಸಂಚಾರ ಸಮಸ್ಯ ಹೇಗಿದೆ?
ಈ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ಇದುವರೆಗೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಂದೇ ಭಾರತ್ ರೈಲು ಬೆಳಗಾವಿಯವರೆಗೆ ಪ್ರಾಯೋಗಿಕ ಸಂಚಾರವನ್ನೂ ನಡೆಸುತ್ತಿದೆ. ಆದರೆ, ಒಂದೇ ಭಾಗದಲ್ಲಿ ಎರಡು ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು-ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸುವ ಈ ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು, 11.30ಕ್ಕೆ ಧಾರವಾಡ ತಲುಪುತ್ತದೆ. ಮರಳಿ ಧಾರವಾಡದಿಂದ ಮಧ್ಯಾಹ್ನ 1.20ಕ್ಕೆ ಹೊರಟು, ಸಂಜೆ 7.30ಕ್ಕೆ ಬೆಂಗಳೂರು ತಲುಪುತ್ತದೆ.
ಬೆಳಗಾವಿಗೆ ವಿಸ್ತರಿಸಿದ ಆಗುವ ತೊಂದರೆಗಳು ಏನು?
ಒಂದು ವೇಳೆ ಈ ರೈಲನ್ನು ಬೆಳಗಾವಿವರೆಗೆ ವಿಸ್ತರಿಣೆ ಮಾಡಿದರ, ಧಾರವಾಡದಿಂದ ಬೆಳಗಾವಿಯವರೆಗೆ ಹೋಗಿಬರಲು ಕನಿಷ್ಠ 4 ತಾಸುಗಳಾದರೂ ಬೇಕು. ಧಾರವಾಡದಿಂದ ಬೆಳಗಾವಿ ತಲುಪಲು ಈ ರೈಲಿಗೆ 1 ತಾಸು 45 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಬೆಳಗಾವಿ ನಿಲ್ದಾಣದಲ್ಲಿ ರೈಲು ನಿರ್ವಹಣೆ ಇನ್ನಿತರ ಕಾರ್ಯಗಳಿಗೆ ಕನಿಷ್ಠ ಅರ್ಧ ಗಂಟೆ ಬೇಕಾಗಬಹುದು.
ನೈಋತ್ಯ ಅಧಿಕಾರಿಗಳ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮಧ್ಯಾಹ್ನ 1.30ಕ್ಕೆವಂದೇ ಭಾರತ್ ರೈಲು ಬೆಳಗಾವಿಯಿಂದ ಹೊರಟರೆ, ಧಾರವಾಡಕ್ಕೆ 3 ಗಂಟೆಗೆ ತಲುಪಿ, ಬೆಂಗಳೂರಿಗೆ ರಾತ್ರಿ 9 ಗಂಟೆಗೆ ತಲುಪುತ್ತದೆ.
KSR ನಲ್ಲಿ ಪ್ಲಾಟ್ಫಾರ್ಮ್ ಸಮಸ್ಯೆ
ಬೆಂಗಳೂರಿಗೆ ರಾತ್ರಿ 9 ಕ್ಕೆ 'ವಿಬಿ' ತಲುಪಿದರೆ ಆ ಸಮಯದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಬೆಂಗಳೂರಿನಲ್ಲಿ ಪ್ಲಾಟ್ಫಾರ್ಮ್ ಹೊಂದಿಸುವುದು ಕಷ್ಟಸಾಧ್ಯ. ಅಂದಾಜು ರಾತ್ರಿ 11 ಗಂಟೆಯವರೆಗೆ ಪ್ಲಾಟ್ಫಾರ್ಮ್ಗಳು ಬೇರೆ ರೈಲುಗಳು ನಿಲುಗಡೆ ನಿಗದಿಯಾಗುವುದಿಲ್ಲ ವಂದೇ ಭಾರತ್ ರೈಲಿಗೆ ರಾತ್ರಿ 11 ಗಂಟೆಯ ನಂತರವೇ ಪ್ಲಾಟ್ಫಾರ್ಮ್ ದೊರಕಿಸಿಕೊಡಬೇಕಾಗಬಹುದು ಎಂದು ಅವಲೋಕಿಸಿದ್ದಾರೆ.
ಈ ಎರಡು ತಾಸಿನ ಅವಧಿಯವರೆಗೆ ಪ್ರಯಾಣಿಕರನ್ನು ರೈಲಿನಲ್ಲಿ ಕಾಯಿಸುವುದು ಅಸಾಧ್ಯ. ಇದರಿಂದ ಹುಬ್ಬಳ್ಳಿ-ಧಾರವಾಡ ಪ್ರಯಾಣಿಕರಿಗೂ ತೊಂದರೆ ತಪ್ಪಿದ್ದಲ್ಲ ಎಂಬ ಅಭಿಪ್ರಾಯವೂ ಉಂಟು. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಹೊಂದಾಣಿಕೆ ರೈಲು ಸಂಚಾರ ಉತ್ತಮ
ವಂದೇ ಭಾರತ ರೈಲನ್ನು ಬೆಂಗಳೂರು-ಬೆಳಗಾವಿ ಮಧ್ಯೆ ಓಡಿಸಿದರೆ ಬೆಳಗಿನಜಾವ 5 ಗಂಟೆಗೆ ಬೆಳಗಾವಿಯಿಂದ ಸಂಚಾರ ಆರಂಭವಾಗಿದೆ. ಆಗ ಈ ರೈಲು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪುತ್ತದೆ. ಮರಳಿ 1.30ಕ್ಕೆ ಬೆಂಗಳೂರಿನಿಂದ ಹೊರಟರೆ, ರಾತ್ರಿ 11 ಗಂಟೆಗೆ ಬೆಳಗಾವಿ ತಲುಪುತ್ತದೆ.
ಒಂದೇ ಮಾರ್ಗದಲ್ಲಿ ಎರಡು ವಂದೇ ಭಾರತ್ ರೈಲು ಸಂಚರಿಸುವಷ್ಟು ಪ್ರಯಾಣಿಕರು ಈ ಭಾಗದಲ್ಲಿಲ್ಲ. ಹೀಗಾಗಿ, ರೈಲಿನ ಸಮಯ ಹೊಂದಾಣಿಕೆ ಮೂಲಕ ಚಾಲನೆ ಮಾಡುವುದು ಒಳಿತೆಂಬ ಸಲಹೆಗಳು ಸಹ ಕೇಳಿ ಬರುತ್ತಿವೆ.
ಈ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳು ಸೂಕ್ತ ತೀರ್ಮಾನ ಬಂದ ಬಳಿಕವೇ ಸಾರ್ವಜನಿಕರ ಮನವಿಗೆ ಪರಿಹಾರ ಸಿಗುವ ವಿಶ್ವಾಸ ಇದೆ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications