Vande Bharat: ಬೆಂಗಳೂರು-ಬೆಳಗಾವಿವರೆಗೆ ಮತ್ತೊಂದು 'ವಿಬಿ' ರೈಲು? ಹಾಲಿ ರೈಲು ಬೆಳಗಾವಿ ವಿಸ್ತರಣೆಗಿರುವ ತೊಡಕೇನು?
ಹುಬ್ಬಳ್ಳಿ, ಜುಲೈ 05: ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಾರೀ ಜನಪ್ರಿಯವಾದ ಬೆಂಗಳೂರು-ಧಾರಾವಾಡ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಕೂಗಿ ಕೇಳಿ ಮತ್ತೆ ಜೋರಾಗಿದೆ. ಹಾಲಿ ರೈಲನ್ನೇ ವಿಸ್ತರಣೆ ಮಾಡಬೇಕೋ ಅಥವಾ ಬೆಂಗಳೂರು-ಬೆಳಗಾವಿ ಮಧ್ಯೆ ಪ್ರತ್ಯೇಕ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕೋ ಎಂಬ ವಿಷಯದಲ್ಲಿ ಹಗ್ಗಜಗ್ಗಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು-ಧಾರವಾಡದ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಾಗಿನಿಂದ ಈ ರೈಲು ಸಂಚಾರವನ್ನು ಬೆಳಗಾವಿ ವಿಸ್ತರಿಸಬೇಕೆಂಬ ಸಾಮಾನ್ಯ ಬೇಡಿಕೆಯ ಜನಪ್ರತಿನಿಧಿಗಳು ಹಾಗೂ ಜನರಿಂದ ಕೇಳಿ ಬರುತ್ತಿದೆ. ಆದರೆ, ಈ ರೈಲು ಸಂಚಾರವನ್ನು ವಿಸ್ತರಿಸಿದರೆ 'ಹುಬ್ಬಳ್ಳಿ-ಧಾರವಾಡ'ದ ಜನರಿಗೆ ತೊಂದರೆ ಆಗಲಿದೆಯೇ ಅಂತಲೂ ಯೋಚಿಸಲಾಗುತ್ತಿದೆ.

ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ಅಥವಾ ಮತ್ತೊಂದು ರೈಲು ಓಡಿಸುವ ಕುರಿತು ಚರ್ಚಿಸಲು ಜನಪ್ರತಿನಿಧಿಗಳು ಹಾಗೂ ನೈಋತ್ಯ ಅಧಿಕಾರಿಗಳ ನಡುವೆ ಹಲವು ಸುತ್ತಿನ ಸಭೆಗಳು ನಡೆದಿವೆ.
ಸದ್ಯದ ಸಂಚಾರ ಸಮಸ್ಯ ಹೇಗಿದೆ?
ಈ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ಇದುವರೆಗೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ವಂದೇ ಭಾರತ್ ರೈಲು ಬೆಳಗಾವಿಯವರೆಗೆ ಪ್ರಾಯೋಗಿಕ ಸಂಚಾರವನ್ನೂ ನಡೆಸುತ್ತಿದೆ. ಆದರೆ, ಒಂದೇ ಭಾಗದಲ್ಲಿ ಎರಡು ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು-ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸುವ ಈ ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು, 11.30ಕ್ಕೆ ಧಾರವಾಡ ತಲುಪುತ್ತದೆ. ಮರಳಿ ಧಾರವಾಡದಿಂದ ಮಧ್ಯಾಹ್ನ 1.20ಕ್ಕೆ ಹೊರಟು, ಸಂಜೆ 7.30ಕ್ಕೆ ಬೆಂಗಳೂರು ತಲುಪುತ್ತದೆ.
ಬೆಳಗಾವಿಗೆ ವಿಸ್ತರಿಸಿದ ಆಗುವ ತೊಂದರೆಗಳು ಏನು?
ಒಂದು ವೇಳೆ ಈ ರೈಲನ್ನು ಬೆಳಗಾವಿವರೆಗೆ ವಿಸ್ತರಿಣೆ ಮಾಡಿದರ, ಧಾರವಾಡದಿಂದ ಬೆಳಗಾವಿಯವರೆಗೆ ಹೋಗಿಬರಲು ಕನಿಷ್ಠ 4 ತಾಸುಗಳಾದರೂ ಬೇಕು. ಧಾರವಾಡದಿಂದ ಬೆಳಗಾವಿ ತಲುಪಲು ಈ ರೈಲಿಗೆ 1 ತಾಸು 45 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಬೆಳಗಾವಿ ನಿಲ್ದಾಣದಲ್ಲಿ ರೈಲು ನಿರ್ವಹಣೆ ಇನ್ನಿತರ ಕಾರ್ಯಗಳಿಗೆ ಕನಿಷ್ಠ ಅರ್ಧ ಗಂಟೆ ಬೇಕಾಗಬಹುದು.
ನೈಋತ್ಯ ಅಧಿಕಾರಿಗಳ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮಧ್ಯಾಹ್ನ 1.30ಕ್ಕೆವಂದೇ ಭಾರತ್ ರೈಲು ಬೆಳಗಾವಿಯಿಂದ ಹೊರಟರೆ, ಧಾರವಾಡಕ್ಕೆ 3 ಗಂಟೆಗೆ ತಲುಪಿ, ಬೆಂಗಳೂರಿಗೆ ರಾತ್ರಿ 9 ಗಂಟೆಗೆ ತಲುಪುತ್ತದೆ.
KSR ನಲ್ಲಿ ಪ್ಲಾಟ್ಫಾರ್ಮ್ ಸಮಸ್ಯೆ
ಬೆಂಗಳೂರಿಗೆ ರಾತ್ರಿ 9 ಕ್ಕೆ 'ವಿಬಿ' ತಲುಪಿದರೆ ಆ ಸಮಯದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಬೆಂಗಳೂರಿನಲ್ಲಿ ಪ್ಲಾಟ್ಫಾರ್ಮ್ ಹೊಂದಿಸುವುದು ಕಷ್ಟಸಾಧ್ಯ. ಅಂದಾಜು ರಾತ್ರಿ 11 ಗಂಟೆಯವರೆಗೆ ಪ್ಲಾಟ್ಫಾರ್ಮ್ಗಳು ಬೇರೆ ರೈಲುಗಳು ನಿಲುಗಡೆ ನಿಗದಿಯಾಗುವುದಿಲ್ಲ ವಂದೇ ಭಾರತ್ ರೈಲಿಗೆ ರಾತ್ರಿ 11 ಗಂಟೆಯ ನಂತರವೇ ಪ್ಲಾಟ್ಫಾರ್ಮ್ ದೊರಕಿಸಿಕೊಡಬೇಕಾಗಬಹುದು ಎಂದು ಅವಲೋಕಿಸಿದ್ದಾರೆ.
ಈ ಎರಡು ತಾಸಿನ ಅವಧಿಯವರೆಗೆ ಪ್ರಯಾಣಿಕರನ್ನು ರೈಲಿನಲ್ಲಿ ಕಾಯಿಸುವುದು ಅಸಾಧ್ಯ. ಇದರಿಂದ ಹುಬ್ಬಳ್ಳಿ-ಧಾರವಾಡ ಪ್ರಯಾಣಿಕರಿಗೂ ತೊಂದರೆ ತಪ್ಪಿದ್ದಲ್ಲ ಎಂಬ ಅಭಿಪ್ರಾಯವೂ ಉಂಟು. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಹೊಂದಾಣಿಕೆ ರೈಲು ಸಂಚಾರ ಉತ್ತಮ
ವಂದೇ ಭಾರತ ರೈಲನ್ನು ಬೆಂಗಳೂರು-ಬೆಳಗಾವಿ ಮಧ್ಯೆ ಓಡಿಸಿದರೆ ಬೆಳಗಿನಜಾವ 5 ಗಂಟೆಗೆ ಬೆಳಗಾವಿಯಿಂದ ಸಂಚಾರ ಆರಂಭವಾಗಿದೆ. ಆಗ ಈ ರೈಲು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪುತ್ತದೆ. ಮರಳಿ 1.30ಕ್ಕೆ ಬೆಂಗಳೂರಿನಿಂದ ಹೊರಟರೆ, ರಾತ್ರಿ 11 ಗಂಟೆಗೆ ಬೆಳಗಾವಿ ತಲುಪುತ್ತದೆ.
ಒಂದೇ ಮಾರ್ಗದಲ್ಲಿ ಎರಡು ವಂದೇ ಭಾರತ್ ರೈಲು ಸಂಚರಿಸುವಷ್ಟು ಪ್ರಯಾಣಿಕರು ಈ ಭಾಗದಲ್ಲಿಲ್ಲ. ಹೀಗಾಗಿ, ರೈಲಿನ ಸಮಯ ಹೊಂದಾಣಿಕೆ ಮೂಲಕ ಚಾಲನೆ ಮಾಡುವುದು ಒಳಿತೆಂಬ ಸಲಹೆಗಳು ಸಹ ಕೇಳಿ ಬರುತ್ತಿವೆ.
ಈ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳು ಸೂಕ್ತ ತೀರ್ಮಾನ ಬಂದ ಬಳಿಕವೇ ಸಾರ್ವಜನಿಕರ ಮನವಿಗೆ ಪರಿಹಾರ ಸಿಗುವ ವಿಶ್ವಾಸ ಇದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications