ಲಿಂಗಾಯತ ಪರ ಐದು ಜನರ ತಂಡ ಪ್ರಕಟಿಸಿದ ಬಸವರಾಜ್ ಹೊರಟ್ಟಿ
ಹುಬ್ಬಳ್ಳಿ, ಡಿಸೆಂಬರ್ 29: ವೀರಶೈವ ಹಾಗೂ ಲಿಂಗಾಯತ ಬೇರೆ-ಬೇರೆ ಎನ್ನುವುದಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಬಹಿರಂಗ ಚರ್ಚೆ ಎಂಎಲ್ ಸಿ ಬಸವರಾಜ ಹೊರಟ್ಟಿ ಅವರು ದಿಂಗಾಲೇಶ್ವರ ಸ್ವಾಮಿಗೆ ಆಹ್ವಾನ ಕೊಟ್ಟಿದ್ದಾರೆ. ಹಾಗೂ ಲಿಂಗಾಯತ ಪರವಾಗಿ ವಾದ ಮಾಡಲು ಐದು ಜನರ ಸದಸ್ಯರ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಿದ್ದಾರೆ.
ಲಿಂಗಾಯತ ಧರ್ಮದ ಪ್ರತಿಪಾದಕರಾದ ಈ ಐವರ ತಂಡದ ಪಟ್ಟಿಯನ್ನು ಲಿಂಗಾಯತ ಪ್ರತ್ಯಕ ಧರ್ಮ ಹೋರಾಟ ಸಮಿತಿ ಮುಖಂಡ ಬಸವರಾಜ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತಂಡದಲ್ಲಿ ಬೈಲೂರಿನ ನಿಷ್ಕಲ ಮಂಟಪದ ನಿಜಾಗುಣಾನಂದ ಸ್ವಾಮಿ, ಸಾಹಿತಿ ರಂಜಾನ ದರ್ಗಾ, ಡಾ.ವೀರಣ್ಣ ರಾಜೂರ, ಡಾ. ಮಹಾದೇವಪ್ಪ, ವಿಶ್ವರಾದ್ಯ ಸತ್ಯಂಪೇಟ ಇದ್ದಾರೆ.

ವೀರಶೈವ ಲಿಂಗಾಯದ ಧರ್ಮ ಬಗ್ಗೆ ಬಹಿರಂಗ ಚರ್ಚಗೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ಚಾಮೀಜಿ ಬಸವರಾಜ್ ಹೊರಟ್ಟಿಗೆ ಸವಾಲು ಹಾಕಿದ್ದರು.
ಇದನ್ನು ಸವಾಲಾಗಿ ಸ್ವೀಕರಿಸಿರುವ ಹೊರಟ್ಟಿಯವರು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಆದರೆ, ಈ ಬಹಿರಂಗ ಚರ್ಚೆಗೆ ಪೊಲೀಸ್ ವರಿಷ್ಠಾಧಿಕಾರಿ ಅನುಮತಿ ನಿರಾಕರಿಸಿದ್ದಾರೆ.












Click it and Unblock the Notifications