ಲಿಂಗಾಯತ ಮಠಕ್ಕೆ ಮುಸ್ಲಿಂ ಮಠಾಧೀಶ: ಗದಗಲ್ಲೊಂದು ಮಾದರಿ ಅಧ್ಯಾತ್ಮ
ಗದಗ, ಫೆಬ್ರವರಿ 20: ಧರ್ಮಗಳ ನಡುವೆ ಕಂದಕಗಳು ಏಳುತ್ತಿರುವ ಪ್ರಸ್ತುತ ಸಮಾಜಿಕ ಕಾಲಘಟ್ಟದಲ್ಲಿ, ಧರ್ಮವನ್ನು ಮೀರಿ ನಿಂತು ಮನುಷ್ಯತ್ವ ಸಾರುವ ಘಟನೆಗಳು ಅಲ್ಲಲ್ಲಿ ವರದಿಗಳಾಗುತ್ತಿವೆ. ಅಂತಹುದೇ ಒಂದು ಘಟನೆ ಕರ್ನಾಟಕ ಮುಕುಟ ಗದಗದಲ್ಲಿ ನಡೆದಿದೆ.
ಗದಗದ ಅಸುಟ್ಟಿ ಹಳ್ಳಿಯ ಮುರುಘರಾಜೇಂದ್ರ ಕೋನೇಶ್ವರ ಶಾಂತಿಧಾಮ ಮಠಕ್ಕೆ ಮುಸ್ಲಿಂ ಯುವಕರೊಬ್ಬರನ್ನು ಮಠಾಧೀಶರಾಗಿ ಆಯ್ಕೆ ಮಾಡಲಾಗುತ್ತಿದೆ. ಶರೀಫ ರಹೀಮನ್ ಸಾಬ್ ಫೆಬ್ರವರಿ 26 ಕ್ಕೆ ಮುರುಘರಾಜೇಂದ್ರ ಮಠಕ್ಕೆ ಮಠಾಧೀಶರಾಗಿ ಪೀಠಾರೋಹಣ ಮಾಡಲಿದ್ದಾರೆ.
ರಹೀಮನ್ಸ್ ಸಾಬ್ ಅವರು ಹಲವು ವರ್ಷಗಳಿಂದ ಮಠಪರಂಪರೆಯನ್ನು ಹತ್ತಿರದಿಂದ ಕಂಡವರಾಗಿದ್ದು, ಶಿಷ್ಯ ಪಂಪರೆಯನ್ನು ನಿಭಾಯಿಸಿದ್ದಾರೆ. ರಹೀಮನ್ ಸಾಬ್ ಅವರ ಕುಟುಂಬವು ಮುರುಘರಾಜೇಂದ್ರ ಮಠದ ಭಕ್ತರೇ ಆಗಿದ್ದರು.
ಮುರುಘರಾಜೇಂದ್ರ ಕೋನೇಶ್ವರ ಶಾಂತಿಧಾಮ ಮಠವು, 350 ವರ್ಷ ಇತಿಹಾಸವುಳ್ಳದ್ದಾಗಿದ್ದು, ಕೊರನೇಶ್ವರ ಸಂತಾನ ಮಠ ಕಾಜ್ಹುರಿಗೆ ಸಂಬಂಧಿಸಿದ್ದಾಗಿದೆ. ಈ ಮಠವು ಖ್ಯಾತ ಚಿತ್ರದುರ್ಗದ ಜಗದ್ಗುರು ಮುರುಗರಾಜೇಂದ್ರ ಮಠದ 361 ಮಠಗಳಲ್ಲಿ ಒಂದಾಗಿದೆ.

ಈಗಾಗಲೇ ವಿಧಿ-ವಿಧಾನ ಮುಗಿದಿದೆ
ಕ್ಹಾಜುರಿ ಮಠದ ಮರುಘರಾಜೇಂದ್ರ ಕೋನೇಶ್ವರ ಶಿವಯೋಗಿ ಅವರು ಈಗಾಗಲೇ ದಿವಾನ್ ರಹೀಮನ್ಸ್ ಸಾಬ್ ಗೆ ಕಳೆದ ವರ್ಷದ ನವೆಂಬರ್ನಲ್ಲಿಯೇ ದೀಕ್ಷೆ ನೀಡಿ, ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. 'ಆತ ಬಸವಣ್ಣನ ಅನುಯಾಯಿ, ಆತನಿಗೆ ಸಮಾಜವನ್ನು ಕಲ್ಯಾಣ ಮಾಡುವ ಆಕಾಂಕ್ಷಿ ಇದೆ, ನಾವು ಅದಕ್ಕೆ ಅನುವು ಮಾಡಿಕೊಟ್ಟಿದ್ದೇವೆ' ಎಂದು ಕೋನೇಶ್ವರ ಶಿವಯೋಗಿ ಹೇಳಿದ್ದಾರೆ.

ಲಿಂಗಾಯತ ಆಚರಣೆ, ವಿಚಾರಗಳ ತರಬೇತಿ
ಕೆಲವಾರು ವರ್ಷಗಳಿಂದಲೂ ಆತನಿಗೆ ಲಿಂಗಾಯತ ಆಚರಣೆ, ವಿಚಾರಗಳ ಬಗ್ಗೆ ತರಬೇತಿ ನೀಡಿದ್ದೇವೆ. ಮಠದ ಪರಿಸರವನ್ನು ಹತ್ತಿರದಿಂದ ನೋಡಿರುವ ಶರೀಫ ರಹೀಮನ್ ಸಾಬ್ ಗೆ ಧಾರ್ಮಿಕ ವಿಧಿ ವಿಧಾನಗಳ ಅರಿವು ಸಾಕಷ್ಟಿದೆ, ಇಷ್ಟಲಿಂಗ ಧಾರಣೆ ಎಂಬುದು ವ್ಯಕ್ತಿ ಪ್ರಧಾನವಲ್ಲ, ತತ್ವ ಪ್ರಧಾನ ಶರೀಫರಿಗೆ ಬಸವ ತತ್ವದಲ್ಲಿ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ಜಮೀನು ದಾನ ನೀಡಿದ್ದ ರಹೀಮನ್ ತಂದೆ
ಆಸುತಿ ಮಠಕ್ಕೆ ಶರೀಫ ರಹೀಮನ್ ಸಾಬ್ ಅವರ ತಂದೆ ದಿವಂಗತ ರಹೀಮ್ಸಾಬ್ ಮುಲ್ಲಾ ಅವರು ಎರಡು ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದರು. ಅದೇ ಭೂಮಿಯಲ್ಲಿ ಮಠವನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ.

ರಹೀಮನ್ ಸಾಬ್ ಗೆ ಮದುವೆಯಾಗಿದೆ
ಮಠಾಧೀಶರಾಗುತ್ತಿರುವ ಶರೀಫ ರಹೀಮನ್ ಸಾಬ್ ಅವರಿಗೆ ಮದುವೆಯಾಗಿದೆ. ಅವರಿಗೆ ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ. ಕೋನೇಶ್ವರ ಶಿವಯೋಗಿ ಅವರು ಹೇಳುವ ಪ್ರಕಾರ, ಸಂಸಾರದಿಂದ ಸದ್ಗತಿಯಲ್ಲಿ ಲಿಂಗಾಯತ ಧರ್ಮವು ನಂಬಿಕೆ ಇಟ್ಟಿದೆ ಹಾಗಾಗಿ ಕುಟುಂಬಸ್ತ ವ್ಯಕ್ತಿ ಸ್ವಾಮೀಜಿ ಆಗಬಾರದು ಎಂಬುದೇನೂ ಇಲ್ಲ ಎಂದಿದ್ದಾರೆ.

ಸಂತ ಶಿಶುನಾಳ ಶರೀಫ ಹುಟ್ಟಿದ ಭೂಮಿ
ಫೆಬ್ರವರಿ 26 ರಂದು ಶರೀಫ ರಹೀಮನ್ ಸಾಬ್ ಅವರು ಮುರುಘರಾಜೇಂದ್ರ ಕೋನೇಶ್ವರ ಶಾಂತಿಧಾಮ ಮಠ ಮೊದಲ ಮುಸ್ಲಿಂ ಮಠಾಧೀಶರಾಗಿ ಪೀಠಾರೋಹಣ ಮಾಡಲಿದ್ದಾರೆ. ಸಂತ ಶಿಶುನಾಳ ಶರೀಫರಂತಹಾ ಸಂತ ಶ್ರೇಷ್ಟರನ್ನು ಕಂಡಿರುವ ಉತ್ತರ ಕರ್ನಾಟಕ ಭೂಮಿ ಮತ್ತೆ ಅಂತಹುದೇ ಒಂದು ಪ್ರಯತ್ನಕ್ಕೆ ಕೈ ಹಾಕಿದೆ. ಅದೂ ಭಾರತವೆಲ್ಲಾ ಧರ್ಮಗಳ ನಡುವೆ ಒಡೆದು ಹೋಗುತ್ತಿರುವಾಗ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications