ಕಲಘಟಗಿ ರಥೋತ್ಸವದಲ್ಲಿ ಕೆಂಡದೋಕುಳಿ: ಇದೆಂಥ ವಿಚಿತ್ರ ಭಕ್ತಿ!
ಹೋಳಿ ಹಬ್ಬದಂದು ಬಣ್ಣ ಎರಚಾಡುವ ಬಗ್ಗೆ ಕೇಳಿದ್ದೇವೆ. ಆದರೆ ಕೆಂಡ ಎರಚಾಡಿ ದೇವರ ಬಗೆಗಿನ ಭಕ್ತಿಯನ್ನು ಪ್ರಕಟಿಸುವ ವಿಚಿತ್ರ ಪದ್ಧತಿಯೊಂದು ಧಾರವಾಡ ಜಿಲ್ಲೆಯ ಕಲಘಟಗಿಯ ರಥೋತ್ಸವವೊಂದರ ಸಂದರ್ಭದಲ್ಲಿ ನಡೆಯುತ್ತದೆ.
ಧಾರವಾಡ, ಮೇ 9: ಹೋಳಿ ಹಬ್ಬದಂದು ಬಣ್ಣ ಎರಚಾಡುವ ಬಗ್ಗೆ ಕೇಳಿದ್ದೇವೆ. ಆದರೆ ಕೆಂಡ ಎರಚಾಡಿ ದೇವರ ಬಗೆಗಿನ ಭಕ್ತಿಯನ್ನು ಪ್ರಕಟಿಸುವ ವಿಚಿತ್ರ ಪದ್ಧತಿಯೊಂದು ಧಾರವಾಡ ಜಿಲ್ಲೆಯ ಕಲಘಟಗಿಯ ರಥೋತ್ಸವವೊಂದರ ಸಂದರ್ಭದಲ್ಲಿ ನಡೆಯುತ್ತದೆ.
ಪ್ರತಿವರ್ಷ ನಡೆಯುವ ಕಲಘಟಗಿಯ ಬೀರವಳ್ಳಿ ಹಳ್ಳಿಯ ಕಲ್ಮೇಶ್ವರ ದೇವಾಲಯದಲ್ಲಿ ನಡೆಯುವ ರಥೋತ್ಸವದ ಸಮಯದಲ್ಲಿ ಭಕ್ತರು ಕೆಂಡವನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ವಿಚಿತ್ರ ರೀತಿಯಲ್ಲಿ ತಮ್ಮ ಭಕ್ತಿಯನ್ನು ಪ್ರಕಟಿಸುತ್ತಾರೆ. ಬೆಳಗ್ಗೆ ನಾಲ್ಕು ಗಂಟೆಗೆಲ್ಲ ಆರಂಭವಾಗುವ ರಥೋತ್ಸವ ಹರ ಹರ ಮಹಾದೇವ ಎಂಬ ಉದ್ಘೋಶದೊಂದಿಗೆ ಕಳೆಕಟ್ಟುತ್ತದೆ.

ಸುತ್ತಮುತ್ತಲ ಹತ್ತಾರು ಹಳ್ಳಿಯ ಜನರನ್ನು ಒಂದೆಡೆ ಸೇರಿಸುವ ಪ್ರಸಿದ್ಧ ರಥೋತ್ಸವ ಕೆಂಡದೋಕುಳಿಯ ಕಾರಣದಿಂದಲೇ ದೇಶದಲ್ಲೇ ಪ್ರಸಿದ್ಧಿ ಹೊಂದಿದೆ.












Click it and Unblock the Notifications