Get Updates
Get notified of breaking news, exclusive insights, and must-see stories!

ಹೊನ್ನಾಳಿ; ಎಂ.ಟಿ.ಬಿ‌ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ: ಕಾಗಿನೆಲೆ ಶ್ರೀ

ದಾವಣಗೆರೆ, ಡಿಸೆಂಬರ್‌, 12: ಕುರುಬ ಸಮಾಜದವರು ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ಚಾಮೀಜಿ ಹೊನ್ನಾಳಿಯಲ್ಲಿ ಕರೆ ನೀಡಿದರು. ಅಲ್ಲದೇ ಸಚಿವ ಎಂ.ಟಿ.ಬಿ‌ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ ಎಂದು ಹೊಗಳಿದರು.

ಹೊನ್ನಾಳಿ ಪಟ್ಟಣದ ಕನಕಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ಅವರು, ಯಾವ ಕಾರಣಕ್ಕೂ ನಾನು ಕುರಿಮಂದೆಯನ್ನು ಆಗಲು ಬಿಡುವುದಿಲ್ಲ. ಎಲ್ಲರೂ ಕೂಡ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಒಂದೊಂದು ಸಾವಿರ ಕುರಿಗಳಲ್ಲಿ ಮೇಕೆಗಳು ಇರುತ್ತವೆ. ಕುರಿಗಳು ಹೊಟ್ಟೆತುಂಬ ಮೇಯಲು ಮೇಕೆಗಳನ್ನು ಇಟ್ಟುಕೊಂಡಿರುತ್ತಾನೆ ಕುರುಬ. ಆದರೆ ಇಷ್ಟು ಸಂಖ್ಯೆ ಕುರುಬರು ಇರುವಾಗ ಮೇಕೆ ಏಕೆ? ಎಂದು ಪ್ರಶ್ನಿಸಿದರು.

ಸಚಿವ ಎಂ.ಟಿ. ಬಿ.‌ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ. ಎಲ್ಲೇ, ಯಾವುದೇ ತಾಲೂಕಿಗೆ ಹೋದರೂ ಕನಕ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ 10 ಲಕ್ಷ ರೂಪಾಯಿ ಕೊಡುತ್ತಾರೆ. ಅವರು ಸಮಾಜಕ್ಕೆ ಸಾಕಷ್ಟು ಕೆಲಸವನ್ನು ಮಾಡುತ್ತಿದ್ದಾರೆ. ಎಂಟಿಬಿ ಬಳಿ ಇರುವ ಹಣ ಅವರ ಪರಿಶ್ರಮದ್ದಾಗಿದೆ. ನೀವು ಯೋಚನೆ ಮಾಡಿ ಸದ್ಬಳಕೆ ಮಾಡುವವರಿಗೆ ಹಣ ಕೊಡಿ ಎಂದು ಶ್ರೀಗಳು ನಾಗರಾಜ್ ಅವರಿಗೆ ಕಿವಿ ಮಾತು ಹೇಳಿದರು.

ಸಂಘಟನೆ ಸರಿಪಡಿಸಲು ನಾನಿದ್ದೇನೆ

ಸಂಘಟನೆ ಸರಿಪಡಿಸಲು ನಾನಿದ್ದೇನೆ

ನಂತರ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಎಂದಿಗೂ ಯಾರಿಗೂ ಶಾಶ್ವತ ಅಲ್ಲ. ಯಾವ್ಯಾವ ಸಮುದಾಯದ ಬೇಡಿಕೆ ಇದಿಯೋ ಅಂತಹ ಕೆಲಸ ಸ್ಥಳೀಯ ಶಾಸಕರಿಂದ ಆಗಬೇಕು. ಹೊನ್ನಾಳಿಯಲ್ಲಿ 3 ಕೋಟಿ ವೆಚ್ಚದ ಸಮುದಾಯ ಭವನ ಆಗಬೇಕು. ನಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತ ಸಮುದಾಯ ಭವನ ಆಗಬೇಕು. ನಾನು ವೈಯಕ್ತಿಕವಾಗಿ ಸಮುದಾಯ ಭವನ ಕಟ್ಟಲು 25 ಲಕ್ಷ ರೂಪಾಯಿ ಕೊಡುತ್ತೇನೆ. ‌ಇಷ್ಟೊಂದು ದೊಡ್ಡ ಪ್ರಮಾಣದ ಕುರುಬ ಸಮುದಾಯ ಹೊನ್ನಾಳಿಯಲ್ಲಿದೆ. ಆದರೆ ಕನಕ ಭವನ, ಕನಕ ಪುತ್ಥಳಿ ಇಲ್ಲ ಎನ್ನೋದು ಸಂಶಯ ತರುತ್ತಿದೆ ಎಂದು ರೇಣುಕಾಚಾರ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸಮುದಾಯ ಭವನ ಆಗಬೇಕು

ಸಮುದಾಯ ಭವನ ಆಗಬೇಕು

ನಂತರ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಎಂದಿಗೂ ಯಾರಿಗೂ ಶಾಶ್ವತ ಅಲ್ಲ. ಯಾವ್ಯಾವ ಸಮುದಾಯದ ಬೇಡಿಕೆ ಇದಿಯೋ ಅಂತಹ ಕೆಲಸ ಸ್ಥಳೀಯ ಶಾಸಕರಿಂದ ಆಗಬೇಕು. ಹೊನ್ನಾಳಿಯಲ್ಲಿ 3 ಕೋಟಿ ವೆಚ್ಚದ ಸಮುದಾಯ ಭವನ ಆಗಬೇಕು. ನಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತ ಸಮುದಾಯ ಭವನ ಆಗಬೇಕು. ನಾನು ವೈಯಕ್ತಿಕವಾಗಿ ಸಮುದಾಯ ಭವನ ಕಟ್ಟಲು 25 ಲಕ್ಷ ರೂಪಾಯಿ ಕೊಡುತ್ತೇನೆ. ‌ಇಷ್ಟೊಂದು ದೊಡ್ಡ ಪ್ರಮಾಣದ ಕುರುಬ ಸಮುದಾಯ ಹೊನ್ನಾಳಿಯಲ್ಲಿದೆ. ಆದರೆ ಕನಕ ಭವನ, ಕನಕ ಪುತ್ಥಳಿ ಇಲ್ಲ ಎನ್ನೋದು ಸಂಶಯ ತರುತ್ತಿದೆ ಎಂದು ರೇಣುಕಾಚಾರ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನೀವೆಲ್ಲರೂ ಒಂದುಗೂಡಬೇಕು-ಎಂಟಿಬಿ

ನೀವೆಲ್ಲರೂ ಒಂದುಗೂಡಬೇಕು-ಎಂಟಿಬಿ

ಹೊನ್ನಾಳಿಯಲ್ಲಿ ಕನಕದಾಸರ ಪುತ್ಥಳಿ ಇಲ್ಲ ಎಂಬುದನ್ನು ಕೇಳಿ ಬೇಸರವಾಯಿತು. ಇನ್ನು ಎರಡು ತಿಂಗಳ ಅವಧಿಯಲ್ಲಿ ಹೊನ್ನಾಳಿಯಲ್ಲಿ ಕನಕದಾಸ ಪುತ್ಥಳಿ ಆಗಬೇಕು. ಚುನಾವಣೆ ಆಗುವುದರೊಳಗೆ ಕನಕದಾಸ ಪುತ್ಥಳಿ ನಿರ್ಮಾಣ ಆಗಬೇಕು. ‌ಸಮಾಜ ಅಂತಾ ಬಂದಾಗ ನೀವೆಲ್ಲರೂ ಒಂದುಗೂಡಬೇಕು ಎಂದು ಕರೆ ನೀಡಿದರು.

ಪುತ್ಥಳಿಗೆ ವೈಯಕ್ತಿಕವಾಗಿ 2 ಲಕ್ಷ ನೀಡುತ್ತೇನೆ

ಪುತ್ಥಳಿಗೆ ವೈಯಕ್ತಿಕವಾಗಿ 2 ಲಕ್ಷ ನೀಡುತ್ತೇನೆ

ನೀವು ಯಾವುದೇ ಪಕ್ಷದಲ್ಲಿದ್ದರೂ ಒಗ್ಗಟ್ಟಿನ ಮಂತ್ರ ಪಠಿಸಬೇಕು. ಹೊನ್ನಾಳಿಯಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ವೈಯಕ್ತಿಕ 2 ಲಕ್ಷ ನೀಡುತ್ತೇನೆ. ಕಾಗಿನೆಲೆ ಶ್ರೀಗಳು ರಾಜ್ಯಪ್ರವಾಸ ಮಾಡುತ್ತಿದ್ದಾರೆ. ಅವರು ಸ್ವಾಮೀಜಿ ಆದ ಮೇಲೆ ಇಡೀ ಸಮಾಜದಲ್ಲಿ ಒಳ್ಳೆಯ ಕೆಲಸಗಳು ಆಗಿವೆ. ಸಮಾಜದವರು ಸ್ವಾಮೀಜಿ ಜೊತೆ ಕೈಜೋಡಿಸಬೇಕು. ಹಾಲುಮತದಲ್ಲಿ ಎರಡು ಪಂಗಡಗಳಿಲ್ಲ. ಒಂದೇ ಕಂಬಳಿ ಇರುವುದು, ಅದು ಕರಿಕಂಬಳಿ ಆಗಿದೆ ಎಂದು ಕನಕದಾಸ ಕೀರ್ತನೆ ಪಠಿಸಿ ಹೇಳಿದರು. ಜಾತಿ ಜಾತಿ ಎಂದು ಸಮಾಜದಲ್ಲಿ ಆತಂಕ ಶುರುವಾಗಿದೆ. ಚುನಾವಣೆಗೂ ಮುನ್ನವೇ ಹೊನ್ನಾಳಿಯಲ್ಲಿ ನಿವೇಶನ ಕೊಡಿಸಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಲಾಗುವುದು. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಭರವಸೆಚ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+