ಹೊನ್ನಾಳಿ; ಎಂ.ಟಿ.ಬಿ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ: ಕಾಗಿನೆಲೆ ಶ್ರೀ
ದಾವಣಗೆರೆ, ಡಿಸೆಂಬರ್, 12: ಕುರುಬ ಸಮಾಜದವರು ರಾಜಕೀಯವಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ಚಾಮೀಜಿ ಹೊನ್ನಾಳಿಯಲ್ಲಿ ಕರೆ ನೀಡಿದರು. ಅಲ್ಲದೇ ಸಚಿವ ಎಂ.ಟಿ.ಬಿ ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ ಎಂದು ಹೊಗಳಿದರು.
ಹೊನ್ನಾಳಿ ಪಟ್ಟಣದ ಕನಕಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನಾಡಿದ ಅವರು, ಯಾವ ಕಾರಣಕ್ಕೂ ನಾನು ಕುರಿಮಂದೆಯನ್ನು ಆಗಲು ಬಿಡುವುದಿಲ್ಲ. ಎಲ್ಲರೂ ಕೂಡ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಒಂದೊಂದು ಸಾವಿರ ಕುರಿಗಳಲ್ಲಿ ಮೇಕೆಗಳು ಇರುತ್ತವೆ. ಕುರಿಗಳು ಹೊಟ್ಟೆತುಂಬ ಮೇಯಲು ಮೇಕೆಗಳನ್ನು ಇಟ್ಟುಕೊಂಡಿರುತ್ತಾನೆ ಕುರುಬ. ಆದರೆ ಇಷ್ಟು ಸಂಖ್ಯೆ ಕುರುಬರು ಇರುವಾಗ ಮೇಕೆ ಏಕೆ? ಎಂದು ಪ್ರಶ್ನಿಸಿದರು.
ಸಚಿವ ಎಂ.ಟಿ. ಬಿ. ನಾಗರಾಜ್ ಹಾಲುಮತದ ಕಾಮಧೇನು ಇದ್ದಂತೆ. ಎಲ್ಲೇ, ಯಾವುದೇ ತಾಲೂಕಿಗೆ ಹೋದರೂ ಕನಕ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ 10 ಲಕ್ಷ ರೂಪಾಯಿ ಕೊಡುತ್ತಾರೆ. ಅವರು ಸಮಾಜಕ್ಕೆ ಸಾಕಷ್ಟು ಕೆಲಸವನ್ನು ಮಾಡುತ್ತಿದ್ದಾರೆ. ಎಂಟಿಬಿ ಬಳಿ ಇರುವ ಹಣ ಅವರ ಪರಿಶ್ರಮದ್ದಾಗಿದೆ. ನೀವು ಯೋಚನೆ ಮಾಡಿ ಸದ್ಬಳಕೆ ಮಾಡುವವರಿಗೆ ಹಣ ಕೊಡಿ ಎಂದು ಶ್ರೀಗಳು ನಾಗರಾಜ್ ಅವರಿಗೆ ಕಿವಿ ಮಾತು ಹೇಳಿದರು.

ಸಂಘಟನೆ ಸರಿಪಡಿಸಲು ನಾನಿದ್ದೇನೆ
ನಂತರ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಎಂದಿಗೂ ಯಾರಿಗೂ ಶಾಶ್ವತ ಅಲ್ಲ. ಯಾವ್ಯಾವ ಸಮುದಾಯದ ಬೇಡಿಕೆ ಇದಿಯೋ ಅಂತಹ ಕೆಲಸ ಸ್ಥಳೀಯ ಶಾಸಕರಿಂದ ಆಗಬೇಕು. ಹೊನ್ನಾಳಿಯಲ್ಲಿ 3 ಕೋಟಿ ವೆಚ್ಚದ ಸಮುದಾಯ ಭವನ ಆಗಬೇಕು. ನಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತ ಸಮುದಾಯ ಭವನ ಆಗಬೇಕು. ನಾನು ವೈಯಕ್ತಿಕವಾಗಿ ಸಮುದಾಯ ಭವನ ಕಟ್ಟಲು 25 ಲಕ್ಷ ರೂಪಾಯಿ ಕೊಡುತ್ತೇನೆ. ಇಷ್ಟೊಂದು ದೊಡ್ಡ ಪ್ರಮಾಣದ ಕುರುಬ ಸಮುದಾಯ ಹೊನ್ನಾಳಿಯಲ್ಲಿದೆ. ಆದರೆ ಕನಕ ಭವನ, ಕನಕ ಪುತ್ಥಳಿ ಇಲ್ಲ ಎನ್ನೋದು ಸಂಶಯ ತರುತ್ತಿದೆ ಎಂದು ರೇಣುಕಾಚಾರ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಸಮುದಾಯ ಭವನ ಆಗಬೇಕು
ನಂತರ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಎಂದಿಗೂ ಯಾರಿಗೂ ಶಾಶ್ವತ ಅಲ್ಲ. ಯಾವ್ಯಾವ ಸಮುದಾಯದ ಬೇಡಿಕೆ ಇದಿಯೋ ಅಂತಹ ಕೆಲಸ ಸ್ಥಳೀಯ ಶಾಸಕರಿಂದ ಆಗಬೇಕು. ಹೊನ್ನಾಳಿಯಲ್ಲಿ 3 ಕೋಟಿ ವೆಚ್ಚದ ಸಮುದಾಯ ಭವನ ಆಗಬೇಕು. ನಮ್ಮ ಅಧಿಕಾರದ ಅವಧಿಯಲ್ಲಿ ಶಾಶ್ವತ ಸಮುದಾಯ ಭವನ ಆಗಬೇಕು. ನಾನು ವೈಯಕ್ತಿಕವಾಗಿ ಸಮುದಾಯ ಭವನ ಕಟ್ಟಲು 25 ಲಕ್ಷ ರೂಪಾಯಿ ಕೊಡುತ್ತೇನೆ. ಇಷ್ಟೊಂದು ದೊಡ್ಡ ಪ್ರಮಾಣದ ಕುರುಬ ಸಮುದಾಯ ಹೊನ್ನಾಳಿಯಲ್ಲಿದೆ. ಆದರೆ ಕನಕ ಭವನ, ಕನಕ ಪುತ್ಥಳಿ ಇಲ್ಲ ಎನ್ನೋದು ಸಂಶಯ ತರುತ್ತಿದೆ ಎಂದು ರೇಣುಕಾಚಾರ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ನೀವೆಲ್ಲರೂ ಒಂದುಗೂಡಬೇಕು-ಎಂಟಿಬಿ
ಹೊನ್ನಾಳಿಯಲ್ಲಿ ಕನಕದಾಸರ ಪುತ್ಥಳಿ ಇಲ್ಲ ಎಂಬುದನ್ನು ಕೇಳಿ ಬೇಸರವಾಯಿತು. ಇನ್ನು ಎರಡು ತಿಂಗಳ ಅವಧಿಯಲ್ಲಿ ಹೊನ್ನಾಳಿಯಲ್ಲಿ ಕನಕದಾಸ ಪುತ್ಥಳಿ ಆಗಬೇಕು. ಚುನಾವಣೆ ಆಗುವುದರೊಳಗೆ ಕನಕದಾಸ ಪುತ್ಥಳಿ ನಿರ್ಮಾಣ ಆಗಬೇಕು. ಸಮಾಜ ಅಂತಾ ಬಂದಾಗ ನೀವೆಲ್ಲರೂ ಒಂದುಗೂಡಬೇಕು ಎಂದು ಕರೆ ನೀಡಿದರು.

ಪುತ್ಥಳಿಗೆ ವೈಯಕ್ತಿಕವಾಗಿ 2 ಲಕ್ಷ ನೀಡುತ್ತೇನೆ
ನೀವು ಯಾವುದೇ ಪಕ್ಷದಲ್ಲಿದ್ದರೂ ಒಗ್ಗಟ್ಟಿನ ಮಂತ್ರ ಪಠಿಸಬೇಕು. ಹೊನ್ನಾಳಿಯಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ವೈಯಕ್ತಿಕ 2 ಲಕ್ಷ ನೀಡುತ್ತೇನೆ. ಕಾಗಿನೆಲೆ ಶ್ರೀಗಳು ರಾಜ್ಯಪ್ರವಾಸ ಮಾಡುತ್ತಿದ್ದಾರೆ. ಅವರು ಸ್ವಾಮೀಜಿ ಆದ ಮೇಲೆ ಇಡೀ ಸಮಾಜದಲ್ಲಿ ಒಳ್ಳೆಯ ಕೆಲಸಗಳು ಆಗಿವೆ. ಸಮಾಜದವರು ಸ್ವಾಮೀಜಿ ಜೊತೆ ಕೈಜೋಡಿಸಬೇಕು. ಹಾಲುಮತದಲ್ಲಿ ಎರಡು ಪಂಗಡಗಳಿಲ್ಲ. ಒಂದೇ ಕಂಬಳಿ ಇರುವುದು, ಅದು ಕರಿಕಂಬಳಿ ಆಗಿದೆ ಎಂದು ಕನಕದಾಸ ಕೀರ್ತನೆ ಪಠಿಸಿ ಹೇಳಿದರು. ಜಾತಿ ಜಾತಿ ಎಂದು ಸಮಾಜದಲ್ಲಿ ಆತಂಕ ಶುರುವಾಗಿದೆ. ಚುನಾವಣೆಗೂ ಮುನ್ನವೇ ಹೊನ್ನಾಳಿಯಲ್ಲಿ ನಿವೇಶನ ಕೊಡಿಸಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಲಾಗುವುದು. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಭರವಸೆಚ ನೀಡಿದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications