ಸಸಿ ಮಡಿ ರಕ್ಷಣೆಗೆ ಬಾಟಲ್ ಸೌಂಡ್: ಹತ್ತಿರ ಸುಳಿಯದ ಪಕ್ಷಿಗಳು
ದಾವಣಗೆರೆ, ಜುಲೈ 23: ಭತ್ತ ಬೆಳೆಯುವ ರೈತರು ಇನ್ನು 2 ವಾರದೊಳಗೆ ನಾಟಿ ಮಾಡಲು ಸಿದ್ಧವಾಗುತ್ತಿದ್ದಾರೆ. ಈ ಮಧ್ಯೆ ಖಾಲಿ ಇರುವ ಹೊಲ, ಗದ್ದೆಗಳಲ್ಲಿ ಏನೂ ಸಿಗದ ಕಾರಣ ಸಸಿಮಡಿಯಲ್ಲಿನ ಬೀಜ, ಮೊಳಕೆಯ ಕುಡಿಯನ್ನು ತಿನ್ನಲು ಬರುವ ಪಕ್ಷಿಗಳಿಂದ ರಕ್ಷಣೆಗಾಗಿ ರೈತರು ಲೋಕಲ್ ತಂತ್ರಜ್ಞಾನ ಮಾಡಿಕೊಂಡಿದ್ದಾರೆ.
Recommended Video
ಗುಜರಿ ಅಂಗಡಿಗೆ ಹೋಗಬೇಕಾಗಿದ್ದ ತ್ಯಾಜ್ಯ ವಸ್ತುಗಳಾದ ಬಿಯರ್ ಬಾಟಲ್, ಸುಮಾರು ೫೦ ಗ್ರಾಂ ತೂಕದ ಕಬ್ಬಿಣದ ಬೋಲ್ಟ್, ಉಪಯೋಗಿಸಿ ಬಿಟ್ಟ ಬೈಂಡಿಗ್ ವೈರ್ ಹಾಗೂ ಬಳಕೆಯಾಗಿ ವಿಸರ್ಜಿಸಲ್ಪಟ್ಟ ಅಡಕೆ ತಟ್ಟೆಗಳನ್ನು ಉಪಯೋಗಿಸಿಕೊಂಡು ಗೂಟಕ್ಕೆ ತೂಗುಹಾಕಿದ್ದು, ಗಾಳಿಗೆ ತೂಗಾಡಿ ಬಡಿದಾಡಿಕೊಂಡಾಗ ಉಂಟಾಗುವ ಶಬ್ಧಕ್ಕೆ ಹೆದರಿ ಪಕ್ಷಿಗಳು ಸಸಿಮಡಿಗೆ ಬರದಂತೆ ಮಾಡಿದ್ದಾರೆ.
ಸಂಪೂರ್ಣ ಖಾಲಿ ಇರುವ ಗದ್ದೆಗಳಲ್ಲಿ ಹಕ್ಕಿ ಪಕ್ಷಿಗಳಿಗೆ ತಿನ್ನಲು ಸುಲಭವಾಗಿ ಸಿಗುವುದು ಸಸಿಗಾಗಿ ಚಲ್ಲಿರುವ ಬೀಜಭತ್ತ ಹಾಗೂ ಮೊಳಕೆಯೊಡೆದಿರುವ ಕುಡಿ. ಇವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ರೈತರು ಇಂತಹ ತ್ಯಾಜ್ಯವಸ್ತುಗಳಿಂದ ಸಿಂಪಲ್ ತಂತ್ರಜ್ಞಾನ ಮಾಡಿ ಸಸಿಮಡಿ ರಕ್ಷಿಸಿಕೊಳ್ಳುತ್ತಿದ್ದಾರೆ.

ಗಿಣಿ, ಗೊರವಂಕ, ಬಿಳಿ ಕೊಕ್ಕರೆ(ಬೆಳ್ಳಕ್ಕಿ)ಯಂತಹ ಪಕ್ಷಿಗಳ ಹಾವಳಿ ಸಸಿಮಡಿಗೆ ಹೆಚ್ಚಾಗಿರುತ್ತದೆ. ಇವುಗಳನ್ನು ಕಾದು ಕುಳಿತು ಓಡಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಈ ರೀತಿ ಬಾಟಲ್ ತೂಗುಹಾಕಿ ಕಬ್ಬಿಣದ ಅಥವಾ ನಟ್ ಗಾಳಿಗೆ ತೂಗಾಡಿ ಬಾಟಲ್ ಗೆ ಬಡಿಯುವುದರಿಂದ ಜೋರಾದ ಶಬ್ಧ ಉಂಟಾಗುತ್ತದೆ. ಬೋಲ್ಟ್ ಸುಲಭವಾಗಿ ತೂಗಾಡುವಷ್ಟು ಲೋಲಕದ ಸಾಂದ್ರತೆಯನ್ನು ಅಡಕೆ ತಟ್ಟೆ ಹೆಚ್ಚಿಸುವುದರಿಂದ ಠಣ್, ಠಣ್ ಎನ್ನುವ ಶಬ್ಧ ಸುಮಾರು ಅರ್ಧ ಕಿ.ಮೀ ದೂರಕ್ಕೂ ಕೇಳಿಸುತ್ತದೆ.
ಬೀಜ ಚೆಲ್ಲಿ ಸುಮಾರು 20 ದಿನ ಸಸಿಗಾಗಿ ಕಾಯಬೇಕಾದ ಅವಧಿಯಲ್ಲಿ ಪಕ್ಷಿಗಳು ಸಿಗುವ ಬೀಜಗಳನ್ನು ಹಾಗೂ ಮೊಳಕೆ ಕುಡಿಯನ್ನು ತಿನ್ನುವ ಸಂಭವ ಹೆಚ್ಚಿರುತ್ತದೆ. ಮಳೆಗಾಲವಾದ್ದರಿಂದ ಹೊಲ-ಗದ್ದೆಗಳಲ್ಲಿ ಕಾಳುಗಳು ಸಿಗುವುದು ಅಪರೂಪವಾದ್ದರಿಂದ ಹಾಗೂ ತೋಟಗಳಲ್ಲಿನ ಗಿಡಗಳಲ್ಲಿಯೂ ತಿನ್ನಲು ಹಣ್ಣು, ಬೀಜ ಸಿಗದ ಸಮಯವಾಗಿರುವುದರಿಂದ ಸದ್ಯ ಪಕ್ಷಿಗಳಿಗೆ ತಿನ್ನಲು ಸಸಿಮಡಿಯಲ್ಲಿನ ಕಾಳು ಮತ್ತು ಮೊಳಕೆ ಸುಲಭವಾಗಿ ಸಿಗುತ್ತದೆ.

ಬಾಟಲ್ ಸೌಂಡ್ ತಂತ್ರಜ್ಞಾನ ಮಾಡಿರುವ ಕತ್ತಲಗೆರೆ ರೈತ ಕುಂಬಾರ ರಾಮಣ್ಣ ಮಾತನಾಡಿ, ಗಿಣಿ, ಗೊರವಂಕದ ಕಾಟ ಹೆಚ್ಚಾಗಿರುತ್ತದೆ. ಮಳೆಗಾಲವಾದ್ದರಿಂದ ಹೆಚ್ಚಾದ ಕೆಸರು ಇರುವುದರಿಂದ ಇಂತಹ ಸಣ್ಣ ಪಕ್ಷಿಗಳು ಸಸಿಮಡಿಗೆ ಬರುತ್ತವೆ. ಕಾದುಕುಳಿತು ಓಡಿಸುವುದು ಕಷ್ಟ ಹಾಗಾಗಿ ಈ ರೀತಿ ತಂತ್ರಜ್ಞಾನ ಮಾಡಿದ್ದೇವೆ, ಶಬ್ಧಕ್ಕೆ ಪಕ್ಷಿಗಳು ಹತ್ತಿರ ಬರುವುದಿಲ್ಲ ಎಂದು ವಿವರಿಸಿದರು.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications