ಸಸಿ ಮಡಿ ರಕ್ಷಣೆಗೆ ಬಾಟಲ್ ಸೌಂಡ್: ಹತ್ತಿರ ಸುಳಿಯದ ಪಕ್ಷಿಗಳು
ದಾವಣಗೆರೆ, ಜುಲೈ 23: ಭತ್ತ ಬೆಳೆಯುವ ರೈತರು ಇನ್ನು 2 ವಾರದೊಳಗೆ ನಾಟಿ ಮಾಡಲು ಸಿದ್ಧವಾಗುತ್ತಿದ್ದಾರೆ. ಈ ಮಧ್ಯೆ ಖಾಲಿ ಇರುವ ಹೊಲ, ಗದ್ದೆಗಳಲ್ಲಿ ಏನೂ ಸಿಗದ ಕಾರಣ ಸಸಿಮಡಿಯಲ್ಲಿನ ಬೀಜ, ಮೊಳಕೆಯ ಕುಡಿಯನ್ನು ತಿನ್ನಲು ಬರುವ ಪಕ್ಷಿಗಳಿಂದ ರಕ್ಷಣೆಗಾಗಿ ರೈತರು ಲೋಕಲ್ ತಂತ್ರಜ್ಞಾನ ಮಾಡಿಕೊಂಡಿದ್ದಾರೆ.
Recommended Video
ಗುಜರಿ ಅಂಗಡಿಗೆ ಹೋಗಬೇಕಾಗಿದ್ದ ತ್ಯಾಜ್ಯ ವಸ್ತುಗಳಾದ ಬಿಯರ್ ಬಾಟಲ್, ಸುಮಾರು ೫೦ ಗ್ರಾಂ ತೂಕದ ಕಬ್ಬಿಣದ ಬೋಲ್ಟ್, ಉಪಯೋಗಿಸಿ ಬಿಟ್ಟ ಬೈಂಡಿಗ್ ವೈರ್ ಹಾಗೂ ಬಳಕೆಯಾಗಿ ವಿಸರ್ಜಿಸಲ್ಪಟ್ಟ ಅಡಕೆ ತಟ್ಟೆಗಳನ್ನು ಉಪಯೋಗಿಸಿಕೊಂಡು ಗೂಟಕ್ಕೆ ತೂಗುಹಾಕಿದ್ದು, ಗಾಳಿಗೆ ತೂಗಾಡಿ ಬಡಿದಾಡಿಕೊಂಡಾಗ ಉಂಟಾಗುವ ಶಬ್ಧಕ್ಕೆ ಹೆದರಿ ಪಕ್ಷಿಗಳು ಸಸಿಮಡಿಗೆ ಬರದಂತೆ ಮಾಡಿದ್ದಾರೆ.
ಸಂಪೂರ್ಣ ಖಾಲಿ ಇರುವ ಗದ್ದೆಗಳಲ್ಲಿ ಹಕ್ಕಿ ಪಕ್ಷಿಗಳಿಗೆ ತಿನ್ನಲು ಸುಲಭವಾಗಿ ಸಿಗುವುದು ಸಸಿಗಾಗಿ ಚಲ್ಲಿರುವ ಬೀಜಭತ್ತ ಹಾಗೂ ಮೊಳಕೆಯೊಡೆದಿರುವ ಕುಡಿ. ಇವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ರೈತರು ಇಂತಹ ತ್ಯಾಜ್ಯವಸ್ತುಗಳಿಂದ ಸಿಂಪಲ್ ತಂತ್ರಜ್ಞಾನ ಮಾಡಿ ಸಸಿಮಡಿ ರಕ್ಷಿಸಿಕೊಳ್ಳುತ್ತಿದ್ದಾರೆ.

ಗಿಣಿ, ಗೊರವಂಕ, ಬಿಳಿ ಕೊಕ್ಕರೆ(ಬೆಳ್ಳಕ್ಕಿ)ಯಂತಹ ಪಕ್ಷಿಗಳ ಹಾವಳಿ ಸಸಿಮಡಿಗೆ ಹೆಚ್ಚಾಗಿರುತ್ತದೆ. ಇವುಗಳನ್ನು ಕಾದು ಕುಳಿತು ಓಡಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಈ ರೀತಿ ಬಾಟಲ್ ತೂಗುಹಾಕಿ ಕಬ್ಬಿಣದ ಅಥವಾ ನಟ್ ಗಾಳಿಗೆ ತೂಗಾಡಿ ಬಾಟಲ್ ಗೆ ಬಡಿಯುವುದರಿಂದ ಜೋರಾದ ಶಬ್ಧ ಉಂಟಾಗುತ್ತದೆ. ಬೋಲ್ಟ್ ಸುಲಭವಾಗಿ ತೂಗಾಡುವಷ್ಟು ಲೋಲಕದ ಸಾಂದ್ರತೆಯನ್ನು ಅಡಕೆ ತಟ್ಟೆ ಹೆಚ್ಚಿಸುವುದರಿಂದ ಠಣ್, ಠಣ್ ಎನ್ನುವ ಶಬ್ಧ ಸುಮಾರು ಅರ್ಧ ಕಿ.ಮೀ ದೂರಕ್ಕೂ ಕೇಳಿಸುತ್ತದೆ.
ಬೀಜ ಚೆಲ್ಲಿ ಸುಮಾರು 20 ದಿನ ಸಸಿಗಾಗಿ ಕಾಯಬೇಕಾದ ಅವಧಿಯಲ್ಲಿ ಪಕ್ಷಿಗಳು ಸಿಗುವ ಬೀಜಗಳನ್ನು ಹಾಗೂ ಮೊಳಕೆ ಕುಡಿಯನ್ನು ತಿನ್ನುವ ಸಂಭವ ಹೆಚ್ಚಿರುತ್ತದೆ. ಮಳೆಗಾಲವಾದ್ದರಿಂದ ಹೊಲ-ಗದ್ದೆಗಳಲ್ಲಿ ಕಾಳುಗಳು ಸಿಗುವುದು ಅಪರೂಪವಾದ್ದರಿಂದ ಹಾಗೂ ತೋಟಗಳಲ್ಲಿನ ಗಿಡಗಳಲ್ಲಿಯೂ ತಿನ್ನಲು ಹಣ್ಣು, ಬೀಜ ಸಿಗದ ಸಮಯವಾಗಿರುವುದರಿಂದ ಸದ್ಯ ಪಕ್ಷಿಗಳಿಗೆ ತಿನ್ನಲು ಸಸಿಮಡಿಯಲ್ಲಿನ ಕಾಳು ಮತ್ತು ಮೊಳಕೆ ಸುಲಭವಾಗಿ ಸಿಗುತ್ತದೆ.

ಬಾಟಲ್ ಸೌಂಡ್ ತಂತ್ರಜ್ಞಾನ ಮಾಡಿರುವ ಕತ್ತಲಗೆರೆ ರೈತ ಕುಂಬಾರ ರಾಮಣ್ಣ ಮಾತನಾಡಿ, ಗಿಣಿ, ಗೊರವಂಕದ ಕಾಟ ಹೆಚ್ಚಾಗಿರುತ್ತದೆ. ಮಳೆಗಾಲವಾದ್ದರಿಂದ ಹೆಚ್ಚಾದ ಕೆಸರು ಇರುವುದರಿಂದ ಇಂತಹ ಸಣ್ಣ ಪಕ್ಷಿಗಳು ಸಸಿಮಡಿಗೆ ಬರುತ್ತವೆ. ಕಾದುಕುಳಿತು ಓಡಿಸುವುದು ಕಷ್ಟ ಹಾಗಾಗಿ ಈ ರೀತಿ ತಂತ್ರಜ್ಞಾನ ಮಾಡಿದ್ದೇವೆ, ಶಬ್ಧಕ್ಕೆ ಪಕ್ಷಿಗಳು ಹತ್ತಿರ ಬರುವುದಿಲ್ಲ ಎಂದು ವಿವರಿಸಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications