ಮದುವೆ ಆಮಂತ್ರಣ ಪತ್ರಿಕೆ ಕೊಡ್ತಿವಿ ಆದ್ರೆ ಮದುವೆಗೆ ಬರಬೇಡಿ
ದಾವಣಗೆರೆ, ಜೂನ್ 10: ಮದುವೆ ಆಮಂತ್ರಣ ಪತ್ರಿಕೆ ಕೊಡ್ತಿವಿ ಆದ್ರೆ ಮದುವೆಗೆ ಬರಬೇಡಿ ಎಂದು ನವ ಜೋಡಿ ತಮ್ಮ ಸ್ನೇಹಿತ ಹಾಗೂ ಸಂಬಂಧಿಕರಿಗೆ ಹೇಳಿದೆ. ದಾವಣಗೆರೆಯ ನವ ಜೋಡಿ ಫೇಸ್ಬುಕ್ ಮೂಲಕ ಮದುವೆ ಕಾರ್ಯಕ್ರಮ ಮಾಡುತ್ತಿದೆ.
Recommended Video
ಕೊರೊನಾ ವೈರಸ್ ಸೋಂಕು ಇರುವ ಕಾರಣ ಸರ್ಕಾರ ಮದುವೆ ಕಾರ್ಯಕ್ರಮಗಳಿಗೆ ಕೆಲವು ನಿಯಮ ನೀಡಿದೆ. ಅದರಂತೆ, 50 ಜನರಿಗಿಂತ ಹೆಚ್ಚಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ, ಅನೇಕ ಸರಳ ಮದುವೆಗಳು ನಡೆಯುತ್ತಿವೆ.
ರಂಚಿತಾ ಹಾಗೂ ನವೀನ್ ಮದುವೆಯಾಗುತ್ತಿರುವ ಜೋಡಿಯಾಗಿದ್ದಾರೆ. ಇದು ವಂಕದಾರಿ ಮತ್ತು ಚಿಂತಾಲ ಕುಟುಂಬದ ಮದುವೆಯಾಗಿದೆ. ಈ ಕುಟುಂಬ ಕೊರೊನಾ ಇರುವ ಕಾರಣ ತಮ್ಮ ಸ್ನೇಹಿತ ಹಾಗೂ ಸಂಬಂಧಿಗಳಿಗೆ ಫೇಸ್ ಬುಕ್ ಮೂಲಕವೇ ಮದುವೆ ಸಂಭ್ರಮದಲ್ಲಿ ಭಾಗಿಯಾಗುವಂತೆ ಹೇಳಿದೆ.

ಮದುವೆ ಆಮಂತ್ರಣ ಪತ್ರಿಕೆ ಸಿದ್ಧ ಮಾಡಿದೆ. ಆದರೆ, ಅದರಲ್ಲಿ ಫೇಸ್ ಬುಕ್ ಲೈವ್ ಮೂಲಕ ಮದುವೆ ಸಂಭ್ರಮದಲ್ಲಿ ಸೇರಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಆಮಂತ್ರಣ ಪತ್ರಿಕೆ ನೀಡಿದ್ದರೂ, ಮದುವೆಗೆ ಭಾಗಿಯಾಗುವಂತಿಲ್ಲ. ಆನ್ ಲೈನ್ ಮೂಲಕವೇ ಹೊಸ ಜೋಡಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದೆ.
ಜೂನ್ 15 ರಂದು ಬೆಳಗ್ಗೆ 9 ಗಂಟೆಗೆ ದಾವಣಗೆರೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವೀನ್ ಮತ್ತು ರಂಜಿತಾ ವಿವಾಹ ನಡೆಯಲಿದೆ.












Click it and Unblock the Notifications