ಎಂಎಂ ಕಲಬುರ್ಗಿ ಅವರಿಗೆ ಬಸವಶ್ರೀ ಪ್ರಶಸ್ತಿ
ಚಿತ್ರದುರ್ಗ, ಅಕ್ಟೋಬರ್ 07 : 2015ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರಿಗೆ ಮರಣೋತ್ತರವಾಗಿ ಈ ಬಾರಿಯ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬುಧವಾರ
ಚಿತ್ರದುರ್ಗದ
ಮುರುಘ
ರಾಜೇಂದ್ರ
ಮಠದ
ಡಾ.ಶಿವಮೂರ್ತಿ
ಮುರುಘಾ
ರಾಜೇಂದ್ರ
ಸ್ವಾಮೀಜಿ
ಅವರು
2015ನೇ
ಸಾಲಿನ
ಬಸವಶ್ರೀ
ಪ್ರಶಸ್ತಿಯನ್ನು
ಘೋಷಣೆ
ಮಾಡಿದ್ದಾರೆ.
ಅಕ್ಟೋಬರ್
22ರಂದು
ಮಠದಲ್ಲಿ
ನಡೆಯಲಿರುವ
ಕಾರ್ಯಕ್ರಮದಲ್ಲಿ
ಪ್ರಶಸ್ತಿಯನ್ನು
ಪ್ರಧಾನ
ಮಾಡಲಾಗುತ್ತದೆ.
[ಸಾಹಿತಿ
ಎಂಎಂ
ಕಲಬುರ್ಗಿ
ಹತ್ಯೆ]
ಹಿರಿಯ ಸಾಹಿತಿ ಮತ್ತು ಸಂಶೋಧಕ ಎಂ.ಎಂ.ಕಲಬುರ್ಗಿ ಅವರಿಗೆ ಈ ಬಾರಿಯ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಮುರುಘಾ ರಾಜೇಂದ್ರ ಸ್ವಾಮೀಜಿ ಹೇಳಿದರು. [ಕಲಬುರ್ಗಿ ಹತ್ಯೆಯ ಸಂಚು ರೂಪಿಸಿದ್ದು ರುದ್ರ ಪಾಟೀಲ್?]
ಬಸವಶ್ರೀ ಪ್ರಶಸ್ತಿಯು 5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ. 2013ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗೆ ಮತ್ತು 2014ರಲ್ಲಿ ಮಲಾಲಾಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿತ್ತು. [ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]
ಮರಣೋತ್ತರವಾಗಿ ಪ್ರಶಸ್ತಿ : ಮರಣೋತ್ತರವಾಗಿ ಎಂ.ಎಂ.ಕಲಬುರ್ಗಿ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. 2015ರ ಆಗಸ್ಟ್ 30ರ ಭಾನುವಾರ ಬೆಳಗ್ಗೆ 8.40ರ ಸುಮಾರಿಗೆ ಧಾರವಾಡ ಕಲ್ಯಾಣ ನಗರದಲ್ಲಿರುವ ಕಲಬುರ್ಗಿ ಅವರ ನಿವಾಸದಲ್ಲಿ ಅವರನ್ನ ಹತ್ಯೆ ಮಾಡಲಾಗಿತ್ತು. ಸರ್ಕಾರ ಕಲಬುರ್ಗಿ ಅವರ ಹತ್ಯೆ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ತನಿಖೆ ನಡೆಯುತ್ತಿದೆ.