ಥೈ ಪೂಸಮ್ ಇನ್ಮುಂದೆ ಸಾರ್ವಜನಿಕ ರಜೆ ದಿನ: ಸಿಎಂ ಇಪಿಎಸ್
ಚೆನ್ನೈ, ಜನವರಿ 05: ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಂಗಲ್ ಗಿಫ್ಟ್ ನೀಡಿದ್ದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರವು ಈಗ ಥೈ ಪೂಸಮ್ ಇನ್ಮುಂದೆ ಸಾರ್ವಜನಿಕ ರಜೆ ದಿನ ಎಂದು ಘೋಷಿಸಿದೆ. ತಮಿಳುನಾಡು ಸೇರಿದಂತೆ ವಿಶ್ವದ ಹಲವೆಡೆ ತಮಿಳರು ಭಯಭಕ್ತಿಯಿಂದ ಆಚರಿಸುವ ಮುರುಗನ ಪೂಜೆ ಪುನಸ್ಕಾರಕ್ಕೆ ಮಹತ್ವ ನೀಡಲಾಗಿದೆ.
ಜನವರಿ-ಫೆಬ್ರವರಿ ತಿಂಗಳಿನಲ್ಲಿ ಸೌರಮಾನ ಮಾಸದ ಪುಷ್ಯಾ ನಕ್ಷತ್ರ ಅಥವಾ ಪೂರ್ಣಿಮೆ ದಿನಗಳಲ್ಲಿ ಥೈ ಪೂಸಮ್ ಬರುತ್ತದೆ. ಥೈ ಪೂಸಮ್ ಎಂದು ಥೈ ತಿಂಗಳಲ್ಲಿ ಬರುವ ಪುಷ್ಯಾ ನಕ್ಷತ್ರ ಎಂದರ್ಥ. ಈ ದಿನದಂದು ಹುಣ್ಣಿಮೆ ಚಂದ್ರ ಅತ್ಯಂತ ಪ್ರಕಾಶಮಾನವಾಗಿರುತ್ತಾನೆ. ಈ ದಿನದಂದು ಮುರುಗನ ಕೈಗೆ ತಾಯಿ ಪಾರ್ವತಿಯು ವೇಲ್ (ಆಯುಧ) ನೀಡಿ ಆಶೀರ್ವದಿಸಿದಳು ಎಂಬ ನಂಬಿಕೆಯಿದೆ. ಮುರುಗನ ಕೃಪೆಗಾಗಿ ಹಲವು ರೀತಿಯಲ್ಲಿ ಹರಕೆ ಹೊರಲಾಗುತ್ತದೆ. ಕಾವಡಿಗಳನ್ನು ಹೊರುವುದು ಸಾಮಾನ್ಯವಾಗಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಕಾಣಬಹುದು.
ಈ ಕಾವಡಿಗಳನ್ನು ಹೊರುವವರು ಹಲವು ನಿಯಮಗಳನ್ನು ಪಾಲಿಸುತ್ತಾರೆ. ಬ್ರಹ್ಮಚರ್ಯ, ಸಾತ್ವಿಕ ಆಹಾರ. ಧೂಮಪಾನ ನಿಷೇಧ, ಕುಡಿತಕ್ಕೆ ರಜೆ, ಹಲವರು ಮೌನ ಆಚರಿಸುತ್ತಾರೆ. ಇವರಲ್ಲಿ ಹಲವರು ಕಾವಿ ಬಟ್ಟೆ, ಕೈಯಲ್ಲಿ ಜೋಳಿಗೆ ಹಿಡಿದು, ಅಕ್ಕಿ, ಹಾಲು, ಗಂಧ ಇವುಗಳನ್ನು ಭಿಕ್ಷಾರೂಪದಲ್ಲಿ ಸ್ವೀಕರಿಸುತ್ತಾರೆ.

ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ಬಾರಿ ಜನವರಿ 28ರಂದು ಥೈ ಪೂಸಂ ಆಚರಿಸಲಾಗುತ್ತದೆ. ಭಾರತದ ಜೊತೆಗೆ ಶ್ರೀಲಂಕಾ, ಸಿಂಗಪುರ, ಮಲೇಶಿಯಾ, ಕೆನಡಾ, ಥೈಲ್ಯಾಂಡ್, ಗಯಾನಾ, ಜಮೈಕಾ ಸೇರಿದಂತೆ ತಮಿಳು ಇರುವ ಕಡೆಗಳಲ್ಲಿ ಶಕ್ತ್ಯಾನುಸಾರ ಹರಕೆ ಹೊತ್ತು ಮುರುಗನ ಕೃಪೆಗಾಗಿ ಪೂಜೆ ಸಲ್ಲಿಸುತ್ತಾರೆ.
ವಿಶೇಷವೆಂದರೆ ತಮಿಳುನಾಡಿನಲ್ಲಿ ಈ ಬಾರಿ ಸಾರ್ವಜನಿಕ ರಜೆದಿನ ಎಂದು ಘೋಷಿಸಲಾಗಿದೆ. ಆದರೆ, ಮಲೇಶಿಯಾ, ಶ್ರೀಲಂಕಾ, ಮಾರಿಷಸ್ ದ್ವೀಪ ರಾಷ್ಟ್ರದಲ್ಲಿ ಈಗಾಗಲೇ ಥೈ ಪೂಸಮ್ ಸಾರ್ವಜನಿಕ ರಜೆದಿನ ಎಂದು ಘೋಷಣೆಯಾಗಿದೆ.

ಸಿಎಂ ಇಪಿಎಸ್ ಆದೇಶವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರು ಸ್ವಾಗತಿಸಿದ್ದಾರೆ. ಎಲ್ ಮುರುಗನ್ ಅವರು ವೆಟ್ರಿ ವೇಲ್ ಯಾತ್ರೆ ನಡೆಸಿ, ಥೈ ಪೂಸಮ್ ದಿನವನ್ನು ಸಾರ್ವಜನಿಕ ರಜೆ ದಿನ ಎಂದು ಘೋಷಿಸುವಂತೆ ಆಗ್ರಹಿಸಿದ್ದನ್ನು ಇಲ್ಲಿಸ್ಮರಿಸಬಹುದು.
ಸೀಮನ್ ಅವರ ನಾಮ್ ತಮಿಳರ್ ಕಚ್ಚಿ , ಹಿಂದು ಸಂಘಟನೆ ಹಿಂದು ಮಕ್ಕಳ್ ಕಚ್ಚಿ ಕೂಡಾ ಸಿಎಂ ಇಪಿಎಸ್ ಆದೇಶವನ್ನು ಸ್ವಾಗತಿಸಿವೆ (ಪಿಟಿಐ)
-
Eid Mubarak Wishes 2026: ರಂಜಾನ್ ಹಬ್ಬದ ಶುಭಾಶಯಗಳ 35 ಮನಮುಟ್ಟುವ ಸಂದೇಶಗಳು ಇಲ್ಲಿವೆ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ












Click it and Unblock the Notifications