ಎಚ್ಐವಿ ಸಂಶೋಧಕಿ ಡಾ.ಸುನೀತಿ ಕ್ಯಾನ್ಸರಿಗೆ ಬಲಿ
ಚೆನ್ನೈ,ಜು.29: ಭಾರತದಲ್ಲಿ ಎಚ್ಐವಿ ಸೋಂಕು ಅಸ್ತಿತ್ವದ ಬಗ್ಗೆ ಪತ್ತೆ ಹಚ್ಚಿ, ಎಚ್ ಐವಿ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ್ದ ದೇಶದ ಹೆಮ್ಮೆಯ ಸಂಶೋಧಕಿ ಡಾ. ಸುನೀತಿ ಸೋಲೊಮನ್ ಅವರು ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಡಾ.ಸುನೀತಿ ಅವರು ಬಹುಕಾಲದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.
ಸಂಶೋಧಕಿ ಡಾ. ಸುನೀತಿ ಸೋಲೊಮನ್ ಅವರು 1986ರಲ್ಲಿ ಭಾರತದಲ್ಲಿ ಎಚ್ಐವಿ ಸೋಂಕು ಅಸ್ತಿತ್ವದ ಬಗ್ಗೆ ಪ್ರಕಟಿಸಿದ್ದರು. ಸುನೀತಿ ಅವರಿಗೆ 76 ವರ್ಷ ವಯಸ್ಸಾಗಿತ್ತು.

ಸುನೀತಿ ಅವರು ಕಳೆದ ಎರಡು ತಿಂಗಳುಗಳಿಂದ ಪಿತ್ತ ಜನಕಾಂಗದ ಕ್ಯಾನ್ಸರ್ನಿಂದ ನರಳುತ್ತಿದ್ದರು. ಸುನೀತಿ ಅವರ ಪತಿ ಡಾ. ಸೋಲೆಮನ್ ವಿಕ್ಟರ್ ಅವರು 2006ರಲ್ಲಿ ಮರಣ ಹೊಂದಿದ್ದಾರೆ. ಪುತ್ರ ಸುನಿಲ್ ಸೋಲೆಮನ್ ಸೇರಿದಂತೆ ಅನೇಕ ಶಿಷ್ಯ ವೃಂದವನ್ನು ಡಾ. ಸುನೀತಿ ಅಗಲಿದ್ದಾರೆ.
ಚೆನ್ನೈನ ಪ್ರಮುಖ ಎಚ್ಐವಿ/ಏಡ್ಸ್ ಚಿಕಿತ್ಸೆ ಹಾಗೂ ನೆರವು ಕೇಂದ್ರದ ಸ್ಥಾಪಕ ನಿರ್ದೇಶಕಿಯಾಗಿದ್ದರು. ಮಾರಣಾಂತಿಕ ಎಚ್ಐವಿ ವೈರಸ್ ಸೋಂಕಿನ ಚಿಕಿತ್ಸೆ ಕುರಿತು ಭಾರತದಲ್ಲಿ ನಡೆದ ಸಂಶೋಧನೆಯ ನೇತೃತ್ವವನ್ನು ಡಾ. ಸುನೀತಿ ವಹಿಸಿದ್ದರು.
ಡಾ. ಸುನೀತಿ ಸೊಲೊಮನ್ ಹಾಗೂ ಅವರ ಸಹೋದ್ಯೋಗಿಗಳು 1986ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಎಚ್ಐವಿ ಸೋಂಕಿನ ಸುಳಿವನ್ನು ಪತ್ತೆ ಹಚ್ಚಿದ್ದರು. ಸರಕಾರಿ ಅಭಯಾಶ್ರಮವೊಂದರಲ್ಲಿ ನೆಲೆಸಿದ್ದ ಆರು ಮಂದಿ ಲೈಂಗಿಕ ಕಾರ್ಯಕರ್ತೆಯರ ರಕ್ತದ ಸ್ಯಾಂಪಲ್ಗಳಲ್ಲಿ ಎಚ್ಐವಿ ವೈರಸ್ ಇರುವುದನ್ನು ಅವರು ಕಂಡುಹಿಡಿದಿದ್ದರು.
ನಂತರ ಈ ಸ್ಯಾಂಪಲ್ ಗಳನ್ನು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷಿಸಲಾಯಿತು. ನಂತರ ಯುಎಸ್ಎ ನಲ್ಲಿ ಈ ಬಗ್ಗೆ ದೃಢೀಕರಿಸಲಾಯಿತು. (ಪಿಟಿಐ)
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications