Get Updates
Get notified of breaking news, exclusive insights, and must-see stories!

ಮೋದಿಯಲ್ಲಿ ತಾಯಿ ಹೃದಯ ನಾವಂತೂ ಕಂಡಿಲ್ಲ, ಶೋಭಕ್ಕ ಎಲ್ಲಿ ಕಂಡ್ರೋ ಗೊತ್ತಿಲ್ಲ: ನಲಪಾಡ್ ವ್ಯಂಗ್ಯ

ಚಾಮರಾಜನಗರ,ಜುಲೈ 20 : " ಪ್ರಧಾನಿ ಮೋದಿಯವರಲ್ಲಿ ನಮಗಂತೂ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಮೋದಿಯಲ್ಲಿ ತಾಯಿ ಹೃದಯ ಎಲ್ಲಿ ಕಂಡಿದ್ದಾರೋ ನನಗೆ ಗೊತ್ತಿಲ್ಲ" ಎಂದು ಪ್ರಧಾನಿ ಮೋದಿ ತಾಯಿ ಹೃದಯ ಉಳ್ಳವರು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್ ವ್ಯಂಗ್ಯವಾಡಿದ್ದಾರೆ‌.

ಚಾಮರಾಜನಗರದಲ್ಲಿ ನಡೆದ ಯುವಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, " ತಾಯಿ ಹೃದಯ ಯಾರಿಗಿದೆ, ಮೋದಿಗಾ? ನಮಗಂತೂ ಎಲ್ಲೂ ಕಂಡಿಲ್ಲ, ಮಗು ಕುಡಿಯುವ ಹಾಲಿನ ಮೇಲೂ 5 % ಜಿಎಸ್‌ಟಿ ಹಾಕಿದ್ದಾರೆ. ಮೊಸರು, ಅಕ್ಕಿ ಸೇರಿದಂತೆ ಎಲ್ಲದರ ಮೇಲೂ ಟ್ಯಾಕ್ಸ್ ಹೇರಿದ್ದಾರೆ. ಡಿಜಿಟಲ್ ಇಂಡಿಯಾ ಅಂತಾ ಬಡಕೊಳ್ತಾರೆ, ಆದರೆ ಚೆಕ್‌ಬುಕ್‌ ಲೀಫ್ಸ್‌ ಮೇಲೆ 18% ಜಿಎಸ್‌ಟಿ ಹಾಕಿದ್ದಾರೆ. ಇಂದು ಬಿಜೆಪಿ ಸಾಮಾನ್ಯ ಜನರ ಸರಕಾರವಲ್ಲ, ಬರೀ ಪಕ್ಷಕ್ಕೆ, ಎರಡು ಮೂರು ಕಂಪನಿಗಳಿಗೆ ಸೇರಿದ ಸರಕಾರ ಇದಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಸರಕಾರಗಳು ಯುವಕರ ಪರವಾಗಿಲ್ಲ, ಯುವಕರಿಗೆ ಇಂದು ಕೆಲಸ ಸಿಗುತ್ತಿಲ್ಲ, ಯುವಕರಿಗೆ ಕೆಲಸ ಕೊಡಿಸುವುದೇಗೆ, ಅವರನ್ನು ಹೇಗೆ ಮುಂದಕ್ಕೆ ತರುವುದು ಎಂಬುದರ ಬಗ್ಗೆ ಕಾಂಗ್ರೆಸ್ ಯೋಚಿಸುತ್ತಿದ್ದರೆ, ಬಿಜೆಪಿಯವರ ಯೋಚನೆ ಹೇಗೆ ಜನರ ಬಳಿ ಪಿಕ್ ಪಾಕೆಟ್ ಮಾಡೋದು, ದುಡ್ಡು ಮಾಡೋದು ಹೇಗೆ ಎಂಬುದಾಗಿದೆ ಎಂದು ಬಿಜೆಪಿ ಪಕ್ಷವನ್ನು ಅಪಹಾಸ್ಯ ಮಾಡಿದರು.

Mohammed Haris Nalapad slams BJP government over GST Imposed on essential Items

ಇಂದು ಮಕ್ಕಳಿಗೆ ಓದಿಸುವುದಕ್ಕಾಗಿ ಆಗುತ್ತಿಲ್ಲ, ತಂದೆತಾಯಿಗಳು ಕಷ್ಟಪಟ್ಟು ಓದಿಸಿದ ಮಕ್ಕಳಿಗೆ ಕೆಲಸ ಸಿಗುತ್ತಿಲ್ಲ.ಅವರನ್ನ ಮನೆಯಲ್ಲಿ ಇರಿಸಿಕೊಳ್ಳಲಾಗದೆ, ಹೊರಗೂ ಕಳಿಸಲಾಗದೆ, ಸಾಮಾನ್ಯ ಜನರು ಸಂಕಟಪಡುತ್ತಿದ್ದಾರೆ. ಅಡಿಗೆ ಎಣ್ಣೆ ಬೆಲೆ 200 ದಾಟಿದೆ, ಗ್ಯಾಸ್‌ ಬೆಲೆ 1000 ದಾಟಿದೆ. ಹೀಗೆ ಯುವಕರಿಗೆ , ಸಾಮಾನ್ಯ ಜನರಿಗೆ ಹಾಗೂ ತಾಯಿಂದರಿಗೆ ಇದರ ವಿರುದ್ಧ ನಾವು ಹೋರಾಟ ಮಾಡಲು ಯೋಜನೆ ರೂಪಿಸಿದ್ದೇವೆ, ಇಂತಹ ದೌರ್ಜನ್ಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಬಣವಿಲ್ಲ
ಕಾಂಗ್ರೆಸ್‌ನಲ್ಲಿ ಬಣಗಳಿವೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ , ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಮೊದಲು ಅವರ ಪಕ್ಷವನ್ನು ಮಾತಾಡೋಕೆ ಹೇಳಿ. ನಮ್ಮ ಪಕ್ಷ ಎಲ್ಲಾ ಚೆನ್ನಾಗಿದೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ, ಜೊತೆ ಜೊತೆಯಾಗಿ ಸಾಮೂಹಿಕ ನಾಯಕತ್ವದಿಂದ ಚುನಾವಣೆಗೆ ಹೋಗಲಿದ್ದೇವೆ ಎಂದರು.

ಒಕ್ಕಲಿಗರು 100% ಕಾಂಗ್ರೆಸ್‌ ಪರ ಇದೆ
ಒಕ್ಕಲಿಗರು ಕಾಂಗ್ರೆಸ್ ಪರ ಇದ್ದಾರೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನೂರಕ್ಕೆ ನೂರು ಇದೆ, ಒಕ್ಕಲಿಗ ಸಮುದಾಯ ಮಾತ್ರವಲ್ಲ, ರಾಜ್ಯದ ಎಲ್ಲಾ ಸಮುದಾಯಗಳ ಬೆಂಬಲ ಕಾಂಗ್ರೆಸ್‌ ಇದೆ. ಏಕೆಂದರೆ ಕಾಂಗ್ರೆಸ್‌ ಮಾತ್ರ ಜನರ ಪರವಾಗಿದೆ. ಬಿಜೆಪಿ ಪಕ್ಷ ಜನರ ಪರವಾಗಿಲ್ಲ, ಅದು ಅದಾನಿ-ಅಂಬಾನಿ ಪರವಿದೆ. ಅವರು ಜನರ ಪರ ಇದ್ದಿದ್ದರೆ, 8 ವರ್ಷಗಳಲ್ಲಿ ಒಂದೇ ಒಂದು ಜನಪರವಾದ ಯೋಜನೆ ಮಾಡಿದ್ದಾರಾ ಹೇಳಿ? ಜನರ ಜೇಬಿಗೆ ಕತ್ತರಿ ಹಾಕುತ್ತಿದೆ, ನಮ್ಮ ಆಸ್ತಿಗಳನ್ನು ಮಾರುವುದನ್ನ ಬಿಟ್ಟರೆ ಏನು ಮಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+